ಗಡಿ ವಿಚಾರದಲ್ಲಿ ಮಹಾರಾಷ್ಟ್ರವಾದವೇನು..? ಮಹಾಜನ್ ವರದಿಯಲ್ಲಿ ಏನಿದೆ..?
ಗಡಿ ವಿಚಾರದಲ್ಲಿ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುವ ಮಹಾರಾಷ್ಟ್ರ ಈಗ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಕೋತಿ ಚೇಷ್ಠೆ ಮುಂದುವರಿಸಿದ್ದು, ಅವರು ಮಾಡಿರೋ ಒಂದು ಟ್ವೀಟ್ ಇದೀಗ ಕನ್ನಡಿಗರ ತಾಳ್ಮೆ ಕಟ್ಟೆ ಒಡೆಯುವಂತೆ ಮಾಡಿದೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಕರ್ನಾಟಕದ ಕೆಲವು ಪ್ರದೇಶಗಳನ್ನು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ವಿಚಾರದಲ್ಲಿ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಾಪಾಸ್ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಹೋರಾಡುತ್ತೇವೆ ಎಂದು ಉದ್ಧವ್ ಮಾಡಿರುವ ಟ್ವೀಟ್, ಕನ್ನಡಗರನ್ನ ಕೆರಳಿಸಿದೆ. ಬೆಳಗಾವಿ ನಮ್ಮದು ಎಂದು ಕನ್ನಡಿಗರು ಠಾಕ್ರೆಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡುತ್ತಿದ್ದಾರೆ.
ಅಂದಹಾಗೆ ಗಡಿ ವಿವಾದ ಕುರಿತು 1966 ರಂದು ಕೇಂದ್ರ ಸರ್ಕಾರ ಮಹಾಜನ್ ಆಯೋಗ ರಚಿಸಿ, ಇದಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ಇಷ್ಟಾದ್ರೂ ತನ್ನ ಮೊಂಡುತನ ಬಿಡದ ಮಹಾರಾಷ್ಟ್ರ ಬೆಳಗಾವಿಯ ಕೆಲ ಪ್ರದೇಶಗಳು ನಮ್ಮದು ಎಂದು ಹೇಳುತ್ತಿದೆ.
ಏನಿದು ಗಡಿ ವಿವಾದ..?
1.ಭಾಷೆ ಆಧಾರದ ಮೇಲೆ ಸ್ವಾತಂತ್ರ್ಯದ ಬಳಿಕ 1956ರಲ್ಲಿ ಮುಂಬೈ ಪ್ರಾಂತ್ಯವನ್ನ ಮಹಾರಾಷ್ಟ್ರಕ್ಕೆ ಸೇರಿಸಲಾಯ್ತು. ಹಾಗೇ ಬೆಳಗಾವಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಲಾಯ್ತು. ಈ ಸಂದರ್ಭದಲ್ಲಿ ಬಹುಸಂಖ್ಯಾತ ಕನ್ನಡಿಗರ ಪ್ರದೇಶವಾದ ಬೆಳಗಾವಿ ಸಹಜವಾಗಿಯೇ ಕರ್ನಾಟಕಕ್ಕೆ ಸೇರಿತ್ತು. ಅದನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಮರಾಠಿಗರು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು. ಆದರೆ ಸಫಲವಾಗಿರಲಿಲ್ಲ. 1966 ರಲ್ಲಿಅಸ್ತಿತ್ವಕ್ಕೆ ಬಂದ ಶಿವಸೇನೆ ಇದೇ ವಿಚಾರವನ್ನ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ತು. ಗಡಿ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಮೇಲೂ ಅನ್ಯಾಯವಾಗಿ ಹಲ್ಲೆಗಳನ್ನು ನಡೆಸಿದ್ದೂ ಉಂಟು. ಈ ಎಲ್ಲ ಘಟನೆಗಳಿಂದ ಅಂದಿನ ಕೇಂದ್ರ ಸರ್ಕಾರ ಮಹಾಜನ್ ಆಯೋಗವನ್ನ ರಚನೆ ಮಾಡಿತು.
ಮಹಾಜನ್ ಆಯೋಗ ಹೇಳೋದು ಏನು..?
ಬೆಳಗಾವಿ ವಿಚಾರವಾಗಿ ಅಂದಿನ ಕೇಂದ್ರ ಸರ್ಕಾರ 1966 ಅಕ್ಟೋಬರ್ 25 ರಂದು ಮಹಾಜನ್ ಆಯೋಗವನ್ನ ರಚನೆ ಮಾಡ್ತು.
ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾ.ಮಹಾಜನ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಈ ಸಮಿತಿ ಮಹಾರಾಷ್ಟ್ರ – ಕರ್ನಾಟಕ ಎರಡು ರಾಜ್ಯಗಳ ಗಡಿಯಲ್ಲಿ ಅಧ್ಯಯನ ಮಾಡಿತು. ಗಡಿಯಲ್ಲಿ 2572 ಜನರನ್ನು ಸಂದರ್ಶಿಸಿ, ಮನವಿ ಪತ್ರಗಳ ಸ್ವೀಕಾರ ಮಾಡಲಾಯಿತು. ಬಳಿಕ ಬಹುಸಂಖ್ಯಾತ ಕನ್ನಡಿಗರಿರೋ ಪ್ರದೇಶಗಳು ಕರ್ನಾಟಕ್ಕೆ ಸೇರ್ಪಡೆಗೆ ಶಿಪಾರಸ್ಸು ಮಾಡಿತು. ಹಾಗೇ ಐತಿಹಾಸಿಕ ದಾಖಲೆಗಳಿಂದಲೂ ಬೆಳಗಾವಿ ಕನ್ನಡದ ಭಾಗ ಎಂದು ಸಾಬೀತು ಆಯ್ತು. ಇದೇ ಕಾರಣಕ್ಕೆ ಬೆಳಗಾವಿಯನ್ನ ಮಹಾರಾಷ್ಟ್ರದ ಜೊತೆ ವಿಲೀನಗೊಳಿಸಲು ಸಾಧ್ಯವಿಲ್ಲ ಅಂತಾ ಮಹಾಜನ್ ವರದಿ ಶಿಫಾರಸು ಮಾಡಿತು.
ಆದ್ರೆ ಮಹಾಜನ್ ವರದಿನ್ನು ಮಹಾರಾಷ್ಟ್ರ ಒಪ್ಪಲಿಲ್ಲ, ಸಾಕಷ್ಟು ಅನುಮಾನ ವ್ಯಕ್ತಪಡಿಸಿತು. ಮಹಾರಾಷ್ಟ್ರ ಏಕಿಕರಣ ಸಮಿತಿ ನಾಯಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಮಹಾಜನ್ ವರದಿಯಲ್ಲಿ ಸಾಕಷ್ಟು ಗೋಲ್ ಮಾಲ್ ಆಗಿದೆ. ಕರ್ನಾಟಕ ಮಹಾಜನ್ ಸದಸ್ಯರಿಗೆ ಲಂಚ ಕೊಟ್ಟು ವರದಿ ತಯಾರಿಸಿದೆ. ಕರ್ನಾಟಕದ 264 ಗ್ರಾಮಗಳು ಮಹಾರಾಷ್ಟ್ರಕ್ಕೆ ಬರಬೇಕಿತ್ತು ಅಂತ ವಾದ ಮಾಡುತ್ತಿದೆ.
ಇನ್ನು 1983ರಲ್ಲಿ ಈ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ತು. ಎಂಇಎಸ್ ಸದಸ್ಯರ ನಿಲುವನ್ನು ಖಂಡಿಸಿದ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದ್ವು. 1990, 1996 ಅವಧಿಯಲ್ಲಿ ಉಗ್ರ ಸ್ವರೂಪಕ್ಕೆ ತಿರುಗಿದ ಹೋರಾಟ, 9 ಜನರನ್ನ ಬಲಿ ಪಡೆದುಕೊಂಡಿತು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಬೆಳಗಾವಿ ನಮ್ಮದು ಎಂದ ಕನ್ನಡಿಗರು..!
ಬೆಳಗಾವಿ ಗಡಿ ವಿವಾದ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ , ವರದಿಯಿಂದ ನಾವು ಹಿಂದೆ ಸರಿಯಲ್ಲ. ಯಾವುದೇ ಕಾರಣಕ್ಕೂ ನಾವು ರಾಜಿ ಮಾಡಿಕೊಳ್ಳಲ್ಲ. ಮಹಾಜನ್ ವರದಿಯನ್ನು ಎಲ್ಲರೂ ಒಪ್ಪಿದ್ದೇವೆ ಅದರಂತೆ ನಡೆದುಕೊಳ್ಳುತ್ತೇವೆ ಅಂತ ಕನ್ನಡಿಗರು ಒಂದಾಗಿ ಧ್ವನಿ ಎತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel