ಟೆಲ್ ಅವಿವ್ : ಯುದ್ಧ ಪೀಡಿತ ಇಸ್ರೇಲ್ಗೆ (Israel) ಪ್ರವಾಸಕ್ಕೆ ಹೋಗಿದ್ದ ಭಾರತದ ಮೇಘಾಲಯದ (Meghalaya) 27 ಜನ ಬೆಥ್ಲೆಹೆಮ್ನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.
ಸದ್ಯ ಅವರೆಲ್ಲ ಹೊರಡಲು ಮುಂದಾಗಿದ್ದಾರ ಎನ್ನಲಾಗಿದೆ. ಭಾರತಕ್ಕೆ ಹಿಂದಿರುಗಲು ಈಜಿಪ್ಟ್ ರಾಜಧಾನಿ ಕೈರೋಗೆ ಪ್ರಯಾಣಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಗಾಜಾದಿಂದ ಹಮಾಸ್ ಉಗ್ರರು (Hamas Terrorist) ನಡೆಸಿದ ದಾಳಿಯ ನಂತರ ಇಸ್ರೇಲ್ ನ ಒಳಗು ಕೂಡ ಉಗ್ರರು ನುಗ್ಗಿ ಹತ್ಯೆ ಮಾಡುತ್ತಿದ್ದಾರೆ. ಹೀಗಾಗಿ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇನ್ನೊಂದೆಡೆ ಯುದ್ಧ ಕೂಡ ಘೋಷಿಸಲಾಗಿದೆ. ಹೀಗಾಗಿ ಅಲ್ಲಿ ಸಿಲುಕಿರುವ ಜನರು ತೊಂದರೆ ಪಡುವಂತಾಗಿದೆ.
ಸದ್ಯದ ಮಾಹಿತಿಯಂತೆ ಅಲ್ಲಿ ಸಿಲುಕಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ. ಸದ್ಯ ಅಲ್ಲಿ ಯುದ್ಧ ನಡೆಯುತ್ತಿದೆ. ಉಗ್ರರು ವಶಕ್ಕೆ ಪಡೆದಿದ್ದ ಕೆಲವು ಗ್ರಾಮಗಳನ್ನ ಸೇನೆಗಳು ಮರಳಿ ಪಡೆದಿವೆ. ಅಲ್ಲದೇ, ದೇಶದ ಆಂತರಿಕ ವ್ಯವಸ್ಥೆ ಹತೋಟಿಗೆ ಬರುತ್ತಿದೆ ಎನ್ನಲಾಗುತ್ತಿದೆ.