ಟೀಂ ಇಂಡಿಯಾಗೆ `ಧೋನಿ ಮೆಂಟರ್’ ಆಗಿ `ದ್ರಾವಿಡ್ ಕೋಚ್’ ಹೇಗಿರುತ್ತೆ..?
ನವದೆಹಲಿ : ಐಸಿಸಿ ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಅವಧಿ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೋಚ್ ಯಾರು..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಟೀಂ ಇಂಡಿಯಾದ ಹೆಡ್ ಕೋಚ್ ಯಾರಾಗಬೇಕು ಎಂಬ ವಿಚಾರವಾಗಿ ಟೀಂ ಇಂಡಿಯಾ ತಂಡದ ಮುಖ್ಯ ಆಯ್ಕೆಗಾರರಾಗಿದ್ದ ಎಂಎಸ್ಕೆ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಎಂಎಸ್ ಕೆ ಪ್ರಸಾದ್, ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಲಿ ಎಂದು ಸಲಹೆ ನೀಡಿದ್ದಾರೆ.
ರವಿ ಶಾಸ್ತ್ರಿ ಬಳಿಕ ಭಾರತ ತಂಡದ ಕೋಚ್ ಹುದ್ದೆಗೆ ದ್ರಾವಿಡ್ ಸೂಕ್ತ ವ್ಯಕ್ತಿ ಎನಿಸುತ್ತಾರೆ. ಅಲ್ಲದೆ ತಂಡದ ಮೆಂಟರ್ ಆಗ ಮಹೇಂದ್ರ ಸಿಂಗ್ ಧೋನಿ ಅವರನ್ನು ನೋಡಲು ಬಯಸಿದ್ದೇನೆ ಎಂದು ಹೇಳಿದ್ದಾರೆ.
ದ್ರಾವಿಡ್ ಕೋಚ್, ಧೋನಿ ಮೆಂಟರ್ ಆಗುವುದರಿಂದ ಭಾರತೀಯ ಕ್ರಿಕೆಟ್ ಗೆ ವರದಾನವಾಗುತ್ತದೆ. ರಾಹುಲ್ ಕೋಚ್ ಹುದ್ದೆ ಅಲಂಕರಿಸದಿದ್ದರೆ ಬೇಸರಗೊಳ್ಳುವವರಲ್ಲಿ ನಾನು ಮೊದಲಿಗನಾಗುತ್ತೇನೆ ಎಂದಿದ್ದಾರೆ.
ಇತ್ತ ಟೀಂ ಇಂಡಿಯಾದ ಹೆಚ್ ಕೋಚ್ ಗಾಗಿ ಬಿಸಿಸಿಐ ಮತ್ತೆ ಅನಿಲ್ ಕುಂಬ್ಳೆ ಅವರನ್ನು ಸಂಪರ್ಕಿಸಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ವಿವಿಎಸ್ ಲಕ್ಷ್ಮಣ್, ವಿರೇಂದ್ರ ಸೆಹ್ವಾಗ್ ಕೂಡ ಕೋಚ್ ರೇಸ್ ನಲ್ಲಿದ್ದಾರೆ.