KGF ಸಿನಿಮಾ ಸ್ಫೂರ್ತಿ: ನಾಲ್ವರ ಕೊಲೆ
ನಾಲ್ವರು ಕಾವಲು ಸಿಬ್ಬಂದಿಯ ಕೊಲೆ
ಹದಿಹರೆಯದ ಯುವಕನಿಂದ ಸರಣಿ ಕೊಲೆ
ಮಧ್ಯಪ್ರದೇಶದ ಸಾಗರ್ ಪಟ್ಟಣದಲ್ಲಿ ಘಟನೆ
ಶಿವಪ್ರಸಾದ್ ಧ್ರುವೆ ಬಂಧಿತ ಆರೋಪಿ
ಕೆಜಿಎಫ್ ಸಿನಿಮಾದಲ್ಲಿ ರಾಖಿಭಾಯ್ ಯಂತೆ ಗ್ಯಾಂಗ್ ಸ್ಟಾರ್ ಆಗಲು ಯುವಕನೋರ್ವ ಸರಣಿ ಕೊಲೆಗಳನ್ನು ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್ ಪಟ್ಟಣದಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಶಿವಪ್ರಸಾದ್ ಧ್ರುವೆ ಬಂಧಿತ ಆರೋಪಿಯಾಗಿದ್ದು, ವಿಚಾರಣೆ ವೇಳೆ ಕಳೆದ ಐದು ದಿನಗಳಲ್ಲಿ ನಾಲ್ವರು ಗಾರ್ಡ್ ಗಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಗುರುವಾರ ಪ್ರಾಥಮಿಕ ವಿಚಾರಣೆ ವೇಳೆ, ನಾನು ಕೆಜಿಎಫ್ ಸಿನಿಮಾದಿಂದ ಸ್ಪೂರ್ತಿ ಪಡೆದಿದ್ದೇನೆ, ಹಣವನ್ನು ಸಂಗ್ರಹಿಸಲು, ದರೋಡೆಕೋರರಾಗಲು ಮತ್ತು ಭವಿಷ್ಯದಲ್ಲಿ ಪೊಲೀಸರನ್ನು ಗುರಿಯಾಗಿಸಲು ಯೋಜಿಸಿದ್ದೇನೆ ಎಂದು ಆರೋಪಿ ಶಿವಪ್ರಸಾದ್ ಹೇಳಿದ್ದಾನಂತೆ.
ಅಂದಹಾಗೆ ಕಳೆದ 72 ಗಂಟೆಗಳಲ್ಲಿ ಸಾಗರ್ ನಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮೂವರು ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. ಇದು ಭೀತಿಯನ್ನು ಸೃಷ್ಠಿಸಿತ್ತು. ಒಟ್ಟು ನಾಲ್ವರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆದಿದೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದರೇ, ಒಬ್ಬನನ್ನು ಬೋಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.