ಥಿಯೇಟರ್ ಗಳಲ್ಲಿ ಶೇ. 50 % ಸೀಟಿಂಗ್ – ಸರ್ಕಾರದ ವಿರುದ್ಧ ತಿರುಗಿಬಿದ್ದ ‘ರಾಖಿ ಭಾಯ್’..!
ಕೊರೊನಾ 2ನೇ ಅಲೆ ಹಿನ್ನೆಲ ಸರ್ಕಾರ ಸಿನಿಮಾರಂಗವನ್ನೇ ಮುಖ್ಯವಾಗಿ ಟಾರ್ಗೆಟ್ ಮಾಡಿದೆ. ಸಿನಿಮಾ ಮಂದಿರಗಳಲ್ಲಿ 50 % ಸೀಟಿಂಗ್ ನಿರ್ಬಂಧ ಹೇರಿದ್ದು, ಸಿನಿಮಾರಂಗದವರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖವಾಗಿ 2 ದಿನಗಳ ಹಿಂದಷ್ಟೇ ರಿಲೀಸ್ ಆಗಿರುವ ಪುನೀತ್ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ದೊಡ್ಡ ಪೆಟ್ಟು ಬಿದ್ದಿದೆ. ಸರ್ಕಾರದ ನಡೆ ವಿರುದ್ಧ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್ ಹೀಗೆ ಅನೇಕ ನಟ ನಟಿಯರು ಕಿಡಿಕಾರಿದ್ದಾರೆ.
ಇದರ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಟ್ವೀಟ್ ಮಾಡಿರುವ ರಾಖಿ ಭಾಯ್ ‘ನಮ್ಮಲ್ಲಿ ಜಾಗೃತಿ ಮೂಡಿದೆ. ಜವಾಬ್ದಾರಿಯೂ ಇದೆ. ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ. ನಿಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೆ ಹೊರತು ಮುಳುವಾಗಬಹುದು. ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶ ಇದೆ. ಚಿತ್ರರಂಗಕ್ಕೆ ಯಾಕಿಲ್ಲ? ಸೂಚನೆ ಕೊಡದೆ ಜಾರಿ ಮಾಡಿರುವ ನಿಬಂಧನೆಗಳಿಂದ ಚಿತ್ರರಂಗ ಬಲಿ’ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
‘ದಳಪತಿ’ಯ ‘ಮಾಸ್ಟರ್’ ಹಿಂದಿಗೆ ರೀಮೇಕ್ – ನಾಯಕ ಯಾರು ಗೊತ್ತಾ..?
ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸದ ‘ಯುವರತ್ನ’..!
ಥಿಯೇಟರ್ ಗಳಲ್ಲಿ 50 % ಸೀಟಿಂಗ್ – ಕನ್ನಡದ ಯಾವೆಲ್ಲಾ ಸಿನಿಮಾಗಳಿಗೆ ಸಂಕಷ್ಟ..!
ಚುನಾವಣೆಗಳ ಮೇಲೆ ಯಾಕೆ ನಿರ್ಬಂಧ ಹೇರಿಲ್ಲ… ಥಿಯೇಟರ್ ಗಳನ್ನೇ ಟಾರ್ಗೆಟ್ ಮಾಡ್ತರೋದು ಯಾಕೆ..? – ಅಪ್ಪು ಆಕ್ರೋಶ..!