ಯಾದಗಿರಿ : ವೃದ್ಧರೊಬ್ಬರು ಮನೆಯೊಳಗೆ ನುಗ್ಗುತ್ತಿದ್ದ ಹಾವನ್ನು ಹುಚ್ಚು ಧೈರ್ಯ ಮಾಡಿ ಕೈನಲ್ಲೇ ಹಿಡಿದುಕೊಂಡು ಹೋಗುವಾಗ ಹಾವಿನಿಂದಲೇ ಕಚ್ಚಿಸಿಕೊಂಡು ಮೃತಪಟ್ಟಿದ್ದಾರೆ.. ಇಂತಹದೊಂದು ಘಟನೆ ಯಾದಗಿರಿಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ..
ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟಿರುವ ವೃದ್ಧನ ಹೆಸರು ಬಸವರಾಜ ಪೂಜಾರಿ.. ಕೈನಲ್ಲಿ ಹಾವು ಹಿಡಿದಿದ್ದಾಗ ಅವರಿಗೆ 5 ಕ್ಕೂ ಹೆಚ್ಚು ಬಾರಿ ಹಾವು ಕಚ್ಚಿದೆ.. ಈ ವೃದ್ಧ ಈ ಹಿಂದೆಯೂ ಕೂಡಾ ಹಾವು ಹಿಡಿದು ದೂರ ಬಿಟ್ಟು ಬರುತ್ತಿದ್ದರು.. ಇಂದು ಕೂಡಾ ಮನೆಯಲ್ಲಿ ಹಾವು ಬರುತ್ತಿದ್ದ ವೇಳೆ ಹಿಡಿದಿದ್ದಾರೆ.. ಈ ವೇಳೆ ಹಾವು ಕಚ್ಚಿ ಸಾವನಪ್ಪಿದ್ದಾರೆ.. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ
ಬೆಂಗಳೂರು: ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲ ಹಾಗೂ ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಲು ಕರ್ನಾಟಕ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ರಾಜ್ಯದ ಬೊಕ್ಕಸಕ್ಕೆ ನೂರು ಕೋಟಿ...








