ಯಾದಗಿರಿ : ವೃದ್ಧರೊಬ್ಬರು ಮನೆಯೊಳಗೆ ನುಗ್ಗುತ್ತಿದ್ದ ಹಾವನ್ನು ಹುಚ್ಚು ಧೈರ್ಯ ಮಾಡಿ ಕೈನಲ್ಲೇ ಹಿಡಿದುಕೊಂಡು ಹೋಗುವಾಗ ಹಾವಿನಿಂದಲೇ ಕಚ್ಚಿಸಿಕೊಂಡು ಮೃತಪಟ್ಟಿದ್ದಾರೆ.. ಇಂತಹದೊಂದು ಘಟನೆ ಯಾದಗಿರಿಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ..
ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟಿರುವ ವೃದ್ಧನ ಹೆಸರು ಬಸವರಾಜ ಪೂಜಾರಿ.. ಕೈನಲ್ಲಿ ಹಾವು ಹಿಡಿದಿದ್ದಾಗ ಅವರಿಗೆ 5 ಕ್ಕೂ ಹೆಚ್ಚು ಬಾರಿ ಹಾವು ಕಚ್ಚಿದೆ.. ಈ ವೃದ್ಧ ಈ ಹಿಂದೆಯೂ ಕೂಡಾ ಹಾವು ಹಿಡಿದು ದೂರ ಬಿಟ್ಟು ಬರುತ್ತಿದ್ದರು.. ಇಂದು ಕೂಡಾ ಮನೆಯಲ್ಲಿ ಹಾವು ಬರುತ್ತಿದ್ದ ವೇಳೆ ಹಿಡಿದಿದ್ದಾರೆ.. ಈ ವೇಳೆ ಹಾವು ಕಚ್ಚಿ ಸಾವನಪ್ಪಿದ್ದಾರೆ.. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ
ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಾಂವಿಧಾನಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ವಿಧಾನಮಂಡಲ ವಿಶೇಷ ಅಧಿವೇಶನದ ಎರಡನೇ ದಿನದ ಕಲಾಪದ ವೇಳೆ, ರಾಜ್ಯಪಾಲರ ಭಾಷಣ ವಿಷಯವೇ...








