ಹಾಸನ: ಕರ್ನಾಟಕ ಬಂದ್ ಅಂಗವಾಗಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭಾಗಿಯಾಗಿದ್ದ ಪ್ರತಿಭಟನೆ ವೇಳೆ ಗನ್ವೊಂದು ಆತಂಕ ಮೂಡಿಸಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ
ನಡೆದಿದೆ.
ಸೋಷಿಯಲ್ ಮೀಡಿಯಾದ ಚಾನೆಲೊಂದರ ವರದಿಗಾರನ ಬ್ಯಾಗ್ನಲ್ಲಿ ಬಂದೂಕು ಕಂಡು ಪೊಲೀಸರು ಹೌಹಾರಿದ್ದಾರೆ. ಕೂಡಲೇ ಬಂದೂಕು ವಶಕ್ಕೆ ಪಡೆದು ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಬ್ಯಾಗ್ ನಲ್ಲಿ ಇದ್ದದ್ದು ಏರ್ ಗನ್ ಅನ್ನೋದು ಖಾತ್ರಿಯಾಗಿದೆ. ತನಗೆ ಬೆದರಿಕೆ ಇದೆ ಎಂದು ಬ್ಯಾಗ್ನಲ್ಲಿ ಏರ್ಗನ್ ಇಟ್ಟುಕೊಂಡು ಓಡಾಡುತ್ತಿದ್ದ. ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗಿಯಾಗಿದ್ದ ಪ್ರತಿಭಟನೆಯಲ್ಲಿ ಶಾಸಕರ ಬೈಟ್ ಪಡೆಯಲು ಬ್ಯಾಗ್ ನಿಂದ ಲೋಗೋ ತೆಗೆಯುವಾಗ ಕಾಣಿಸಿದ ಏರ್ ಗನ್ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತು ಗನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಏರ್ ಗನ್ ಸಶಸ್ತ್ರ ಕಾಯಿದೆ ವ್ಯಾಪ್ತಿಗೆ ಬಾರದ್ದರಿಂದ ಕೇಸ್ ದಾಖಲಿಸದೆ ಯುವಕನನ್ನು ವಾಪಸ್ ಕಳಿಸಿದ್ದಾರೆ. ಅರಸೀಕೆರೆ ನಗರ ಪೆÇಲೀಸರು ಎನ್ಸಿಆರ್ ದಾಖಲಿಸಿ ಗನ್ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ಮಹಾ “ರಾ” ಸ್ಫೋಟ: ಸಿದ್ದು ಬಣದ ವಿದೇಶ ಪ್ರವಾಸಕ್ಕೆ ಡಿಕೆಶಿ ರೆಸಾರ್ಟ್ ಪಾಲಿಟಿಕ್ಸ್ ಟಕ್ಕರ್? ಸಿಎಂ ಕುರ್ಚಿ ಕಾದಾಟಕ್ಕೆ ಬೆಚ್ಚಿಬಿದ್ದ ಹೈಕಮಾಂಡ್!
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹಾ ಹೈಡ್ರಾಮಾಕ್ಕೆ ವೇದಿಕೆ ಸಜ್ಜಾಗಿದೆ. ರಾಜ್ಯದ ಜನತೆ ಬರಗಾಲ, ಅಭಿವೃದ್ಧಿ ಕುಂಠಿತದಂತಹ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ...








