ಹಾಸನ: ಕರ್ನಾಟಕ ಬಂದ್ ಅಂಗವಾಗಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭಾಗಿಯಾಗಿದ್ದ ಪ್ರತಿಭಟನೆ ವೇಳೆ ಗನ್ವೊಂದು ಆತಂಕ ಮೂಡಿಸಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ
ನಡೆದಿದೆ.
ಸೋಷಿಯಲ್ ಮೀಡಿಯಾದ ಚಾನೆಲೊಂದರ ವರದಿಗಾರನ ಬ್ಯಾಗ್ನಲ್ಲಿ ಬಂದೂಕು ಕಂಡು ಪೊಲೀಸರು ಹೌಹಾರಿದ್ದಾರೆ. ಕೂಡಲೇ ಬಂದೂಕು ವಶಕ್ಕೆ ಪಡೆದು ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಬ್ಯಾಗ್ ನಲ್ಲಿ ಇದ್ದದ್ದು ಏರ್ ಗನ್ ಅನ್ನೋದು ಖಾತ್ರಿಯಾಗಿದೆ. ತನಗೆ ಬೆದರಿಕೆ ಇದೆ ಎಂದು ಬ್ಯಾಗ್ನಲ್ಲಿ ಏರ್ಗನ್ ಇಟ್ಟುಕೊಂಡು ಓಡಾಡುತ್ತಿದ್ದ. ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗಿಯಾಗಿದ್ದ ಪ್ರತಿಭಟನೆಯಲ್ಲಿ ಶಾಸಕರ ಬೈಟ್ ಪಡೆಯಲು ಬ್ಯಾಗ್ ನಿಂದ ಲೋಗೋ ತೆಗೆಯುವಾಗ ಕಾಣಿಸಿದ ಏರ್ ಗನ್ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತು ಗನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಏರ್ ಗನ್ ಸಶಸ್ತ್ರ ಕಾಯಿದೆ ವ್ಯಾಪ್ತಿಗೆ ಬಾರದ್ದರಿಂದ ಕೇಸ್ ದಾಖಲಿಸದೆ ಯುವಕನನ್ನು ವಾಪಸ್ ಕಳಿಸಿದ್ದಾರೆ. ಅರಸೀಕೆರೆ ನಗರ ಪೆÇಲೀಸರು ಎನ್ಸಿಆರ್ ದಾಖಲಿಸಿ ಗನ್ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ (Power Sharing) ವಿಚಾರವಾಗಿ ಎದ್ದಿರುವ ಗೊಂದಲದ ಅಲೆಗಳು ಇನ್ನೂ ತಣ್ಣಗಾಗಿಲ್ಲ. ಹೈಕಮಾಂಡ್ ಎಷ್ಟೇ ಖಡಕ್...








