ನವದೆಹಲಿ: ವ್ಯಕ್ತಿಯೊಬ್ಬ ಕ್ಷುಲ್ಲಕ ಮೇಲ್ಮನವಿ ಸಲ್ಲಿಕೆ ಮಾಡಿದ್ದಕ್ಕೆ 5 ಲಕ್ಷ ರೂ. ದಂಡವನ್ನು ಕೋರ್ಟ್ ವಿಧಿಸಿದೆ.
ಬಾಂಬೆ ಹೈಕೋರ್ಟ್ನ (Bombay High Court) ಮುಖ್ಯ ನ್ಯಾಯಮೂರ್ತಿ ಅವರುಗಳ ಪ್ರಮಾಣ ವಚನ ದೋಷಪೂರಿತವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಮೇಲ್ಮನವಿ ಸಲ್ಲಿಕೆ ಮಾಡಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ನೇತೃತ್ವದ ಪೀಠ, ಪ್ರಮಾಣ ವಚನವನ್ನು ರಾಜ್ಯಪಾಲರಿಂದ ಬೋಧನೆ ಮಾಡಲಾಗಿದೆ. ಸ್ವೀಕರಿಸಿದ ನಂತರ ಆಕ್ಷೇಪಣೆ ಸಲ್ಲ. ಅರ್ಜಿದಾರ ಕೇವಲ ಪ್ರಚಾರಕ್ಕಾಗಿ ನ್ಯಾಯಾಲ ಬಳಸಿಕೊಳ್ಳುತ್ತಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.