ಚಿತ್ತೂರು: ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿ ಸಿಟ್ಟಿನಲ್ಲಿ ಕಚ್ಚಾ ಬಾಂಬ್ ಕಚ್ಚಿದ ಘಟನೆ ನಡೆದಿದೆ.
ಬಾಂಬ್ ಕಚ್ಚಿದ ಪರಿಣಾ ಅದು ಬಾಯಿಯಲ್ಲಿ ಸ್ಫೋಟಗೊಂಡು ದಾರುಣವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ (Chittoor district) ನಡೆದಿದೆ. ಬಂಗಾರುಪಾಳ್ಯಂ (Bangarupalyam) ಮಂಡಲ ವ್ಯಾಪ್ತಿಯ ಗದ್ದಂವಾರಿಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಎಂ ಚಿರಂಜೀವಿ (35 ವರ್ಷ) ಈ ರೀತಿ ಬಾಂಬ್ ಕಚ್ಚಿ ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ. ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ಆತ, ಮನೆ ತೊರೆದು ಹೋಗಿದ್ದ. ನಂತರ ಖಿನ್ನಿತನಾಗಿ ಮದ್ಯಪಾನ ಸೇವಿಸುತ್ತಿದ್ದ ಎನ್ನಲಾಗಿದೆ. ಘಟನೆಯ ವೇಳೆ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.