ಪತ್ನಿಯ ಸೀರೆ ಕದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬ ನೆರೆಮನೆಯ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬಿಹಾರ ಮೂಲದ ಪಿಂಟು ಮತ್ತು ಉತ್ತರ ಪ್ರದೇಶದ ಅಜಯ್ (42) ಎಂಬುವವರು ನಾಥುಪುರ ಗ್ರಾಮದ ಒಂದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಜಯ್ ಕುಮಾರ್ ಪತ್ನಿ ರೀನಾ ತನ್ನ ಪತಿಗೆ ಗುರುಗ್ರಾಮ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ತಮ್ಮ ನೆರೆಯ ಪಿಂಟು ಕುಮಾರ್ (30) ಸೀರೆ ಕದ್ದಿದ್ದಾರೆ ಎಂದು ಹೇಳಿದ್ದಾರೆ.
ಪಿಂಟು ತನ್ನ ಕರ್ತವ್ಯದಿಂದ ರಾತ್ರಿ ಹಿಂತಿರುಗಿದಾಗ, ಅಜಯ್, ಪಿಂಟುನೊಂದಿಗೆ ಜಗಳವಾಡಿದ್ದಾನೆ. ಆದರೆ ಪಿಂಟು ಈ ಆರೋಪಗಳನ್ನು ತಳ್ಳಿ ಹಾಕಿದ್ದಾನೆ. ನಂತರ ಇಬ್ಬರ ನಡುವೆ ವಾಗ್ವಾದ ನಡೆದು, ಗಲಾಟೆ ಜೋರಾಗಿದೆ. ಜಗಳದ ಸಂದರ್ಭದಲ್ಲಿ ಅಜಯ್ ತನ್ನ ಕೊಠಡಿಯಿಂದ ಡಬಲ್ ಬ್ಯಾರಲ್ ಗನ್ ತೆಗೆದು ಪಿಂಟು ಅವರ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.