Kodagu : ಕುಡುಕನ ಹುಚ್ಚಾಟ : ಮೂರು ಮಂದಿ ಸಜೀವ ದಹನ
ಕೊಡಗು : ಕುಡುಕನ ಹುಚ್ಚಾಟಕ್ಕೆ ಮೂರು ಮಂದಿ ಮೃತಪಟ್ಟಿರುವ ಘಟನೆ ಕೊಡಗು ಮುಗುಟಗೇರಿ ಗ್ರಾಮದಲ್ಲಿ ನಡೆದಿದೆ.
ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ಕೊಳೇರ ವಸಂತ(ಚಿಟ್ಟಿಯ್ಯಪ್ಪ) ನವರ ಲೈನ್ ಮನೆಯಲ್ಲಿ ಎರವರ ಮಂಜು ವಾಸವಿದ್ದರು.
ಅಂದು ಮಂಜು ಮನೆಗೆ ಸಂಬಂಧಿಕರು ಆಗಮಿಸಿದ್ದರು.
ಸುಮಾರು ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಮಂಜುವಿನ ತಂದೆ ಎರವರ ಬೋಜ ಪಾನಮಕ್ತನಾಗಿ ಲೈನ್ ಮನೆಯ ಬಾಗಿಲು ಕಿಟಕಿಯನ್ನು ಹೊರಗಿನಿಂದ ಹಾಕಿ ಮನೆ ಮೇಲೆ ಹತ್ತಿ ಹಂಚು ತೆಗೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಇದರ ಪರಿಣಾಮ ಮನೆಯಲ್ಲಿದ್ದ ಎಂಟು ಮಂದಿ ಪೈಕಿ ಆರು ವಷ9ದ ಹೆಣ್ಣು ಮಗು ಸೇರಿ ಮೂವರು ಸಜೀವ ದಹನವಾಗಿದ್ದಾರೆ.
ಘಟನೆಯಲ್ಲಿ ಮೂರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.