ಅಮರನಾಥ್ ಮೇಘಸ್ಪೋಟ – 16 ಮಂದಿ ಮೃತ 35 ಮಂದಿಗೆ ಗಾಯ…
ಅಮರನಾಥ ಗುಹೆಯ ಬಳಿ ಉಂಟಾದ ಮೇಘಸ್ಫೋಟದಿಂದಾಗಿ ಇದುವರೆಗೆ 16 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆಯನ್ನು ಪುನಃ ಪ್ರಾರಂಭಿಸಲಾಗಿದ್ದು, 35 ಗಾಯಾಳುಗಳನ್ನು ಏರ್ ಲಿಫ್ಟ್ ಮಾಡಲಾಗಿದೆ. 45 ಮಂದಿ ಇನ್ನೂ ನಾಪತ್ತೆಯಾಗಿದ್ದು, ರಕ್ಷಣಾ ತಂಡ ಅವರನ್ನ ಪತ್ತೆ ಹಚ್ಚುತ್ತಿವೆ. ಸೇನೆಯ ರಕ್ಷಣಾ ಕಾರ್ಯಾಚರಣೆ ರಾತ್ರಿಯಿಡೀ ನಡೆಯಿತು. ಈ ಅವಧಿಯಲ್ಲಿ ಯಾವುದೇ ಮೃತದೇಹ ಪತ್ತೆಯಾಗಿಲ್ಲ.
ನಾಪತ್ತೆಯಾಗಿರುವ ಎಲ್ಲಾ ಜನರು ಪತ್ತೆಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸಿಆರ್ಪಿಎಫ್ ಡಿಜಿ ಕುಲದೀಪ್ ಸಿಂಗ್ ಹೇಳಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ಪ್ರಯಾಣ ಪುನರಾರಂಭವಾಗಬಹುದು. ಮಾಹಿತಿ ಪ್ರಕಾರ ಶುಕ್ರವಾರ ರಾತ್ರಿಯೇ ಆಡಳಿತ ಮಂಡಳಿ ಯಾತ್ರೆಯನ್ನು ಮುಂದೂಡಿತ್ತು. ಪಹಲ್ಗಾಮ್ ಮತ್ತು ಬಾಲ್ಟಾಲ್ನಲ್ಲಿರುವ ಬೇಸ್ ಕ್ಯಾಂಪ್ಗಳ ಆಚೆಗೆ ಯಾವುದೇ ಪ್ರಯಾಣಿಕರಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 5.30ಕ್ಕೆ ಅಮರನಾಥ ಗುಹೆಯ ಬಳಿ ಮೇಘಸ್ಫೋಟ ಸಂಭವಿಸಿದೆ. ಮೋಡ ಕವಿದ ವೇಳೆ 10 ರಿಂದ 15 ಸಾವಿರ ಭಕ್ತರು ಗುಹೆಯ ಬಳಿ ಸೇರಿದ್ದರು. ಈ ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. ಐಟಿಬಿಪಿ 15 ಸಾವಿರ ಜನರನ್ನು ಪವಿತ್ರ ಗುಹೆಯ ಬಳಿಯ ಪಂಚತಾರ್ಣಿಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ತಿಳಿಸಿದೆ.
Amarnath Cloudburst – Amarnath Yatra Rescue Operation,