ADVERTISEMENT
Thursday, April 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಪ್ರಾಣಿ ಪ್ರಪಂಚ:  ಭಾರತದ ಕರಡಿ ಪ್ರಬೇಧಗಳ ಕುರಿತಾದ ವಿಸ್ಮಯಕಾರಿ ವೈವಿಧ್ಯಮಯ ವಿಚಾರಗಳು

Namratha Rao by Namratha Rao
December 27, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಪ್ರಾಣಿ ಪ್ರಪಂಚ: 

ಕೃಪೆ – ಹಿಂದವಿ ಸ್ವರಾಜ್

ಭಾರತದ ಕರಡಿ ಪ್ರಬೇಧಗಳ ಕುರಿತಾದ ವಿಸ್ಮಯಕಾರಿ ವೈವಿಧ್ಯಮಯ ವಿಚಾರಗಳು:

ಕರಡಿಗಳು ಮೂಲತಃ ನಾಯಿ ಕುಟುಂಬದ ದೂರದ ಸಂಬಂಧಿಗಳು ಎನ್ನುತ್ತಾರೆ, ಇವುಗಳನ್ನು Ursidae ಕುಟುಂಬಕ್ಕೆ ಸೇರಿಸಲಾಗಿದೆ. ಕರಡಿಗಳು ಅನೇಕ ಬಗೆಯ ಪರಿಸರಕ್ಕೆ ಹೊಂದಿಕೊಂಡು ಪ್ರಪಂಚದಾದ್ಯಂತ ನೆಲೆಸಿವೆ. ಅತೀ ಶೀತ ಆರ್ಕಟಿಕ್ ವಲಯದಲ್ಲಿ ಭೂಮಿ ಮೇಲಿನ ಅತೀ ದೊಡ್ಡ ಮಾಂಸಹಾರಿ ಪ್ರಾಣಿ ದೃವ ಕರಡಿ ವಾಸಿಸಿದರೆ, ಉಷ್ಣವಲಯದಲ್ಲಿ ವಿವಿಧ ಜಾತಿ ಕರಡಿಗಳು ವಾಸಿಸುತ್ತಿವೆ. ಆದರೆ ಅಚ್ಚರಿ ಎನ್ನುವಂತೆ ಆಫ್ರಿಕಾ ಹಾಗು ಆಸ್ಟ್ರೇಲಿಯಾದ ಕಾಡುಗಳಲ್ಲಿ ಕರಡಿಗಳು ಇಲ್ಲ. ಕರಡಿಗಳಂತೆ ಪಾಂಡಾಗಳು ಕಂಡು ಬಂದರೂ ಇವುಗಳನ್ನು ಬೇರೆ ಕುಟುಂಬಕ್ಕೆ ಸೇರಿಸಲಾಗಿದೆ.

ಕರಡಿಗಳ ಸಾಮಾನ್ಯ ಲಕ್ಷಣಗಳು: ಹಿಮ ಕರಡಿ ಹೊರತುಪಡಿಸಿದರೆ ಉಳಿದವು ಮಿಶ್ರಹಾರಿಗಳು. ಇವುಗಳಿಗೆ ಮಾಂಸವನ್ನು ಹರಿಯಬಲ್ಲ ಕಾರ್ನೇಸಿಯಲ್ ಹಲ್ಲುಗಳಿಲ್ಲ. ಇವಕ್ಕೆ ಬಾಲವಿಲ್ಲ, ಇದ್ದರೂ ಅತೀ ಚಿಕ್ಕದು. ನೆಲಕ್ಕೆ ಮನುಷ್ಯರಂತೆ ಪೂರ್ಣ ಊರುವ ಪಾದಗಳಿವೆ. ಹೆಜ್ಜೆಗಳು ಮನುಷ್ಯರಂತೆ ಕಂಡರೂ ಮುಂದಿರುವ ಉಗುರಿನ ಗುರುತು ಬೀಳುವುದರಿಂದ ವ್ಯತ್ಯಾಸ ತಿಳಿಯಬಹುದು. ಪ್ರತಿ ಪಾದದ ಬೆರಳುಗಳಿಗೆ ಉದ್ದವಾದ ಬಾಗಿದ ಮೊನಚಾದ ನಖಗಳಿವೆ. ಮೂಗು ಮತ್ತು ಕಿವಿ ತುಂಬಾ ಚುರುಕು ಮತ್ತು ಕಣ್ಣು ಮಂದ. ಕೆಲ ಜಾತಿಯ, ಕರಡಿಗಳು ಮರ ಏರುತ್ತವೆ. ಹಿಂಗಾಲುಗಳ ಮೇಲೆ ನಿಂತು ಕೆಲ ಹೆಜ್ಜೆ ನಡೆಯಬಲ್ಲವು. ಜೇನು, ಗೆದ್ದಲು, ಹಣ್ಣು, ಮೀನು, ಇರುವೆಗಳನ್ನು ಇವು ತಿನ್ನುತ್ತವೆ. ಶೀತ ವಲಯದ ಕರಡಿಗಳು ಚಳಿಗಾಲದಲ್ಲಿ ಶಿಶಿರ ನಿದ್ರೆ ಮಾಡುತ್ತವೆ. ಉಷ್ಣವಲಯದ ಕರಡಿಗಳು ಶಿಶಿರ ನಿದ್ರೆ ಮಾಡುವುದಿಲ್ಲ. ಆದರೆ ಹುಟ್ಟುವ ಮರಿಗಳು ಕೂದಲ್ಲಿಲ್ಲದೆ, ಕುರುಡಾಗಿ ಹುಟ್ಟುತ್ತವೆ.

ನಮ್ಮ ದೇಶದಲ್ಲಿ 4 ಬಗೆಯ ಕರಡಿಗಳನ್ನು ಗುರುತಿಸಲಾಗಿದ್ದು, ನಮ್ಮ ರಾಜ್ಯದಲ್ಲಿ ಸ್ಲಾಥ್ ಕರಡಿ ಮಾತ್ರ ಕಂಡು ಬರುತ್ತದೆ.

1)ಸ್ಲಾತ್‌ ಕರಡಿಗಳು (SLOTH BEAR):

ನಮ್ಮಲ್ಲಿರುವ ಕರಡಿಗೆ Sloth bear ಎಂದು ಹೆಸರು, ಈ Sloth bear ಅರ್ಥ ಹುಡುಕಿದರೆ ಎಲ್ಲಾ ಕಡೆ ಇದು ಸೋಮಾರಿ ಕರಡಿ ಎಂಬ ಮಾಹಿತಿ ಸಿಗುತ್ತದೆ, ಇವು ದೀರ್ಘ ನಿದ್ರೆ ಮಾಡುತ್ತವೆ. ಅದನ್ನು ಬಿಟ್ಟರೆ ಸೋಮಾರಿಯ ಯಾವ ಲಕ್ಷಣಗಳು ಈ ಕರಡಿಯಲ್ಲಿಲ್ಲ. ಆದರೂ ಈ ಕರಡಿಗೆ Sloth bear ಹೆಸರು ಬರಲು ಬೇರೆ ಕಾರಣವೇ ಇರಬೇಕು. 18ನೇ ಶತಮಾನದ ಅಂತ್ಯದಲ್ಲಿ ವೈಜ್ಞಾನಿಕ ಪರಿಶೀಲನೆಗಾಗಿ ಕಳುಹಿಸಿದ ಈ ಕರಡಿಯ ಚರ್ಮವು ದಕ್ಷಿಣ ಅಮೆರಿಕಾದ ಸ್ಲಾಥ್ ಪ್ರಾಣಿಯಂತೆ ಕಂಡಿದ್ದರಿಂದ Sloth bear ಎಂಬ ಹೆಸರು ಬಂದಿರಬಹುದೆಂಬ ಊಹೆಯಿದೆ. ಮುಂದೆ 1810ರಲ್ಲಿ ಜೀವಂತ ಕರಡಿಯನ್ನು ಪ್ಯಾರಿಸ್‌ಗೆ ಒಯ್ದ ನಂತರ ಇದು ಕರಡಿ ಎಂದು ತೀರ್ಮಾನಿಸಲಾಯಿತು. ಆದರೆ ಮೊದಲಿನ ಸ್ಲಾಥ್ ಹಾಗೆ ಉಳಿದುಕೊಂಡಿದೆ.

ಎತ್ತರ 65-85 ಸೆಂಟಿ ಮೀಟರ್. ಎರಡು ಕಾಲಲ್ಲಿ ಎದ್ದು ನಿಂತರೆ ಆರಡಿ ಮನುಷ್ಯನಷ್ಟು ಎತ್ತರ. ಗಂಡು 130-145 ಕಿಲೋ, ಹೆಣ್ಣು 70-80 ಕಿಲೋ ತೂಗುತ್ತವೆ. ಕಪ್ಪು ಬಣ್ಣದ ಒರಟು ಕೂದಲು, ದಪ್ಪವಾದ ಚಲಿಸುವ ತುಟಿಗಳು, ಕಾಲಲ್ಲಿ ಉದ್ದವಾದ ಬಿಳಿ ನಖಗಳು, ಎದೆ ಮೇಲೆ ಬಿಳಿ ಚಂದ್ರಾಕೃತಿ ಇದೆ. ಗೆದ್ದಲು ಹುತ್ತ ಇರುವೆ ಗೂಡುಗಳನ್ನು ಒಡೆದು ಮುಸುಡಿ ಒಳಸೇರಿಸಿ ಮಣ್ಣನ್ನು ಊದಿ ದೀರ್ಘಶ್ವಾಸದಿಂದ ಹುಳುಗಳನ್ನು ಹಿಂದೆಳೆದು ತಿನ್ನುತ್ತದೆ. ಇವುಗಳ ಮಲವನ್ನು ಪರೀಕ್ಷಿಸಿದರೆ ಇರುವೆಗಳೇ ಹೆಚ್ಚು ಕಂಡುಬರುತ್ತವೆ. ಇವು ಗೆಡ್ಡೆ ಗೆಣಸು, ಹಣ್ಣುಗಳು, ಗೆದ್ದಲು, ಇರುವೆಗಳನ್ನು ತಿನ್ನುತ್ತವೆ. ಕೆಲವು ಸಲ ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುತ್ತವೆ. ಇವು ಮರ ಏರುತ್ತವೆ, ಇಳಿಯುವಾಗ ಹಿಂದಿನಿಂದ ಜಾರುತ್ತವೆ. ಹೆಚ್ಚಾಗಿ ರಾತ್ರಿ ಸಂಚಾರಿ. 1-2 ಮರಿಗಳನ್ನು ಹಾಕುತ್ತವೆ, ಆಹಾರಕ್ಕಾಗಿ ಅಲೆಯುವಾಗ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಳ್ಳುತ್ತವೆ. ದೀರ್ಘನಿದ್ರೆ ಮಾಡಬಲ್ಲವು. ಪಾದಗಳನ್ನು ನೆಕ್ಕುವ ಅಭ್ಯಾಸವಿದೆ. ಎಲ್ಲ ಪರಿಸರಕ್ಕೂ ಹೊಂದಿಕೊಂಡಿವೆ, ಬಯಲು ಸೀಮೆ, ಒಣ ಕಾಡು, ಎಲೆ ಉದುರುವ ಕಾಡು, ಪಶ್ಚಿಮ ಘಟ್ಟಗಳ ದಟ್ಟಡವಿಯಲ್ಲಿಯೂ ಕರಡಿಗಳನ್ನು ನೋಡಬಹುದು. ಶ್ರೀಲಂಕಾ, ಭೂತಾನ್, ನೇಪಾಳಗಳಲ್ಲಿಯೂ ಕಾಣಿಸುತ್ತದೆ. ನಮ್ಮ ರಾಜ್ಯದಲ್ಲಿ ಬಳ್ಳಾರಿಯ ದರೋಜಿ ಕರಡಿ ಧಾಮ ಪ್ರಸಿದ್ಧ ಕರಡಿಧಾಮ. ಇವು ಸಾಧು ಪ್ರಾಣಿಯಂತೆ ಕಂಡರೂ ಕೆಲವು ಸಲ ಉಗ್ರವಾಗಿ ವರ್ತಿಸುತ್ತದೆ. ಇದರ ಕಣ್ಣುಗಳು ಸ್ವಲ್ಪ ಮಂದವಿರುವುದರಿಂದ ಅಕಸ್ಮತ್ತಾಗಿ ಹತ್ತಿರ ಹೋದವರ ಅರಿವಾಗದೆ ಗಲಿಬಿಲಿಗೊಂಡು ಮನುಷ್ಯನ ಮೇಲೆರಗಿ, ಮುಖದ ಭಾಗವನ್ನೇ ಕಚ್ಚಿ ಹರಿಯುತ್ತವೆ. ಹೊಲ ಗದ್ದೆಗಳಲ್ಲಿ ಕರಡಿ ಕಂಡಾಗ ಸಮೀಪ ಹೋಗದೆ ದೂರದಿಂದಲೇ ಕೂಗಿ ಹೆದರಿಸುವುದು ಒಳ್ಳೆಯದು, ಇವುಗಳನ್ನು ಪಳಗಿಸಬಹುದು.

2) ಹಿಮಾಲಯದ ಕಂದು ಕರಡಿ (HIMALAYAN BROWN BEAR):

ಹಿಮಾಲಯದ ಕಂದು ಕರಡಿ ಇದು ನಮ್ಮ ದೇಶದಲ್ಲಿ ಕಂಡುಬರುವ ಕರಡಿಗಳಲ್ಲಿ ಅತೀ ದೊಡ್ಡದು. ಗಂಡಿನ ತೂಕ ಸುಮಾರು 250 ಕೆಜಿ. ಗರಿಷ್ಠ ಸಸ್ಯಾಹಾರಿಯಾದರೂ, ದಂಶಕ, ಮೀನು, ಹುಳು, ಸತ್ತ ಪ್ರಾಣಿಗಳನ್ನು ತಿನ್ನುತ್ತವೆ. 1-2 ಮರಿಗಳನ್ನು ಹಾಕುತ್ತವೆ, ಕೆಲವು ತಿಂಗಳುಗಳ ಕಾಲ ಶಿಶಿರ ನಿದ್ರೆ ಮಾಡುತ್ತವೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಲಡಾಕ್, ಉತ್ತರಖಾಂಡ್, ಹಾಗೂ ಟಿಬೆಟ್, ಪಾಕಿಸ್ತಾನ ಹಾಗು ನೇಪಾಳದಲ್ಲಿ ಕಾಣುತ್ತವೆ.

3) ಹಿಮಾಲಯದ ಕಪ್ಪು ಕರಡಿ (HIMALAYAN BLACK BEAR):

ಎದೆಯ ಮೇಲೆ ಅರ್ದ ಚಂದ್ರಾಕೃತಿ ಇರುವುದರಿಂದ ಮೂನ್ ಬೇರ್ ಅಂತಲೂ ಕರೆಯುತ್ತಾರೆ. ತೂಕ 90-115, ಹೆಚ್ಚಾಗಿ ಮಾಂಸಾಹಾರಿಗಳು, ಚನ್ನಾಗಿ ಈಜಬಲ್ಲವು. ಹಿಮಾಲಯ, ಭೂತಾನ್, ಚೀನಾ, ನೇಪಾಳ ಪಾಕಿಸ್ತಾನಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ

4) ಮಲಯದ ಸೂರ್ಯ ಕರಡಿ (MALAYAN SUN BEAR):

ಎದೆಯ ಮೇಲೆ ಸೂರ್ಯ ಉದಯಿಸುವ ಹೊಂಬಣ್ಣದ ಅರ್ಧ ಚಂದ್ರಾಕೃತಿ ಇರುವುದರಿಂದ ಸೂರ್ಯ ಕರಡಿ ಎನ್ನುತ್ತಾರೆ. ನಮ್ಮ ದೇಶದಲ್ಲಿ ಕಂಡು ಬರುವ ಕರಡಿಗಳಲ್ಲಿ ಅತೀ ಚಿಕ್ಕದು. 25-65 ಕೆಜಿ ತೂಗುತ್ತವೆ. ದುಂಡನೆಯ ಚಿಕ್ಕ ಕಿವಿ ಹೊಂದಿವೆ, ಸ್ಲಾಥ್ ಕರಡಿಯಂತೆ ಆಹಾರ ಕ್ರಮವಿದೆ. ಈಶಾನ್ಯ ಭಾರತದ ಪರ್ವತಗಳಿಂದ, ಸುಮತ್ರಾ, ಬೋರ್ನಿಯಾವರೆಗೆ ವಿತರಣೆಗೊಂಡಿವೆ. ಕರಡಿಗಳ ಪಿತ್ತಕೋಶದಿಂದ (Gallbladder) ವಿವಿಧ ಔಷದ ತಯಾರಿಸಲು ಹಾಗು ಚರ್ಮಕ್ಕಾಗಿ ಇವುಗಳ ಹತ್ಯೆ ಮಾಡಲಾಗುತ್ತಿದೆ, ಆವಾಸ ನಾಶವೂ ಇವುಗಳನ್ನು ಅಪಾಯಕ್ಕೆ ಸಿಲುಕಿಸಿವೆ, ಕರಡಿಗಳೆಲ್ಲವೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೊಳಪಟ್ಟಿವೆ.

-ನಾಗರಾಜ್ ಬೆಳ್ಳೂರು, ಪರಿಸರ ಮತ್ತು ವನ್ಯಜೀವಿ ಬರಹಗಾರ

ನಿಸರ್ಗ ಕನ್ಜರ್ವೇಶನ್ ಟ್ರಸ್ಟ್

Related posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

April 16, 2026
ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

April 16, 2026
Tags: #saakshatvAnimalsanimals worldbearsInformationwild animals
ShareTweetSendShare
Join us on:

Related Posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

by Shwetha
April 16, 2026
0

ರಾಜ್ಯ ರಾಜಕಾರಣದಲ್ಲಿ ಈಗ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನಂತರದ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಠಿಣ...

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

by Shwetha
April 16, 2026
0

ಬೆಂಗಳೂರು ನಿನ್ನೆ ಎರಡು ಪ್ರಬಲ ರಾಜಕೀಯ ಶಕ್ತಿಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹೆಚ್‌ಎಎಲ್‌ ವಿಮಾನ...

ಪೋಪ್ ಲಿಯೋ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

ಪೋಪ್ ಲಿಯೋ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

by Shwetha
April 16, 2026
0

ಇರಾನ್ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಪೋಪ್ ಲಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಇರಾನ್ ಕನಿಷ್ಠ 42,000 ನಿರಾಯುಧ ಪ್ರತಿಭಟನಾಕಾರರನ್ನು ಹತ್ಯೆ ಮಾಡಿದೆ...

ನಂಬಿಕೆ ವರ್ಸಸ್ ಸಂವಿಧಾನ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಎತ್ತಿದ ಅಸಲಿ ಪ್ರಶ್ನೆಗಳೇನು

ನಂಬಿಕೆ ವರ್ಸಸ್ ಸಂವಿಧಾನ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಎತ್ತಿದ ಅಸಲಿ ಪ್ರಶ್ನೆಗಳೇನು

by Shwetha
April 16, 2026
0

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಹೋರಾಟವು ಈಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈ ಸಂವೇದನಾಶೀಲ ಪ್ರಕರಣದ...

CBSE 10ನೇ ತರಗತಿ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

CBSE 10ನೇ ತರಗತಿ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

by Shwetha
April 16, 2026
0

CBSE 10ನೇ ತರಗತಿಯ ಸೆಷನ್-1 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದೇಶಾದ್ಯಂತ ತಮ್ಮ ಫಲಿತಾಂಶವನ್ನು ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು UMANG...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram