ಎಂ.ಇ.ಎಸ್ ಕಾರ್ಯಕರ್ಯರ ವಿರುದ್ಧ ಹರಿಹಾಯ್ದ ಅಂಜಲಿ ನಿಂಬಾಳ್ಕರ್
ಬೆಳಗಾವಿ: ಕಳೆದು ತಿಂಗಳು ಎಂ.ಇ.ಎಸ್ ಕಾರ್ಯಕರ್ತರು ನಾಡಧ್ವಜ ಸುಟ್ಟು ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸಗೊಳಿಸಿ ಪುಂಡಾಟ ಮೆರೆದಿದ್ದರು. ಇವರ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ನಾಡಿನ ಅನ್ನ ತಿಂದು ನಾಡಿಗೆ ದ್ರೋಹ ಬಗೆಯುವವರು ಕರ್ನಾಟಕದಲ್ಲಿರುವುದು ಅವಶ್ಯಕತೆ ಇಲ್ಲ ರಾಜ್ಯ ಬಿಟ್ಟು ಹೋಗಿ ಎಂದು ಖಾನಾಪುರ ತಾಲೂಕಿನ ಇಟಗಿ ಗ್ರಾಮದ ದೊಡ್ಡಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಇವರು ಮಾತನಾಡಿದ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದು ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಶಾಸಕಿಯೊಬ್ಬರು ಕನ್ನಡದ ಪರ ಮಾತನಾಡಿದ್ದು ಸಂತಸ ತಂದಿದೆ. ಅಲ್ಲದೇ ಕನ್ನಡ ಕರ್ನಾಟಕದ ಪರ ಮಾತನಾಡಿದರೆ ವೋಟ್ ಬ್ಯಾಂಕ್ ಹೋಗುತ್ತದೆ ಅಂತ ಭಯಪಡುವ ಬೆಳಗಾವಿಯ ರಾಜಕಾರಣಿಗಳಿಗೆ ನೀವು ಮಾದರಿ ಮೇಡಮ್ ಅಂತ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.