ಬೆಳಗಾವಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಪರಿಣಾಮ ಬೆಳಗಾವಿಯ ಜಿಲ್ಲೆಯಲ್ಲಿನ ಡ್ಯಾಂ ಹಾಗೂ ಫಾಲ್ಸ್ಗಳು ಉಕ್ಕಿ ಹರಿಯುತ್ತಿವೆ. ಈ ರೀತಿ ಆದರೂ ತುಂಬಿ ಹರಿಯುವ ನೀರಿನಲ್ಲಿ ಯುವಕರು ತಮ್ಮ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ದೃಷ್ಯ ಕಂಡುಬಂದಿದೆ. ಒಂದೆಡೆ ಭೋರ್ಗರೆಯುತ್ತಾ ಧುಮ್ಮಿಕ್ಕಿತ್ತಿರುವ ಜಲಪಾತ, ರಭಸವಾಗಿ ಹರಿಯುವ ನದಿ ನೀರು ನೋಡಿದರೇನೆ ಮೈ ಝುಮ್ ಎನ್ನುತ್ತೆ, ನೀರಿನ ರೌದ್ರಸ್ವರೂಪ ಸದ್ದು ಕೇಳಿದ್ರೇನೆ ಮೈ ನಡುಗುತ್ತೆ. ಅಂತದ್ರಲ್ಲಿ ಕೆಲ ಯುವಕರು ಮಾತ್ರ ಇದಕ್ಕೆ ಕ್ಯಾರೇ ಅನ್ನದೇ ಬೆಳಗಾವಿ ಸಮೀಪದಲ್ಲಿರುವ ಕೀತ್ವಾಡ ಗ್ರಾಮದಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ನದಿ ನೀರಿನಲ್ಲಿ ಮಳೆಯ ಮಧ್ಯೆಯೇ ಮೋಜು ಮಸ್ತಿ ಮಾಡಿದ್ದಾರೆ. ಜಿಲ್ಲಾಡಳಿತ ನದಿ ಹಾಗೂ ಡ್ಯಾಂ ಸಮೀಪ ಸುಳಿಯದಂತೆ, ಜನರಿಗೆ ಎಚ್ಚರಿಕೆಯಿಂದ ಇರುವಂತೆ ಖಡಕ್ ಸೂಚನೆ ನೀಡಿದ್ರೂ ಯುವಕರು ಮಾತ್ರ ತಮ್ಮ ಜೀವವನ್ನೂ ಲೆಕ್ಕಿಸಿದೇ ರಭಸವಾಗಿ ಹರಿದ ನದಿ ನೀರಿನಲ್ಲಿ ಈಜಾಡಿ ಹುಡುಗಾಟಿಕೆ ಪ್ರದರ್ಶಿಸಿದ್ದಾರೆ.
ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ
ಬೆಂಗಳೂರು: ದೇಶದ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಗೆ ಕರೆ ನೀಡಿದ್ದರು. ಪ್ರಧಾನಿಯವರ...







