ಬಿಗ್ ಬಾಸ್ 8 : ನಾಮಿನೇಷನ್ ನಿಂದ ಸೇಫ್ ಆಗಿದ್ದು ಹೇಗೆ ಪ್ರಶಾಂತ್ ಸಂಬರ್ಗಿ , ಪಾವಗಡ ಮಂಜು..!
ಬಿಗ್ ಬಾಸ್ ಕನ್ನಡ ಸಿಸನ್ 8 ರಲ್ಲಿ ಗಲಾಟೆ, ಗದ್ದಲ, ಎಲಿಮೇಶನ್ ಗೆ ನಾಮಿನೇಷನ್ , ಟಾಸ್ಕ್ ಗಳಳು ಎಲ್ಲಲವೂ ಶುರುವಾಗಿದೆ. ಇದೇ ರೀತಿ ಆಟಗಾರರನ್ನ ನಾಮಿನೇಟ್ ಮಾಡಲಾಗಿದೆ. ಮನೆಯವರೆಲ್ಲರೂ ಸೇರಿ 5 ಜನರನ್ನ ನಾಮಿನೇಟ್ ಮಾಡಿದ್ದಾರೆ. ಬಿಗ್ ಬಾಸ್ ನ ಮೊದಲನೇ ದಿನವೇ ಮಂಜು ಪಾವಗಡ, ಧನುಶ್ರಿ, ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು. ಇತ್ತ ನಿರ್ಮಲಾ ಚನ್ನಪ್ಪ ಅವರನ್ನ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದರು.
ಆದ್ರೆ 2 ನೇ ದಿನ ಎಲಿಮಿನೇಷನ್ ರೌಂಡ್ ಗೆ ನಾಮಿನೇಟ್ ಆಗಿದ್ದವರ ಹೆಸರುಗಳೇ ಬದಲಾಗಿ ಹೋಗಿದೆ. ಇಬ್ಬರು ಸ್ಪರ್ಧಿಗಳು ಸೇಫ್ ಆಗಿ ಇನ್ನಿಬ್ಬರನ್ನ ಡೇಂಜರ್ ಝೋನ್ ಗೆ ತಳ್ಳಿದ್ದಾರೆ. ಹೌದು ಬಿಗ್ ಬಾಸ್ ಸ್ಪೆಷಲ್ ಟಾಸಕ್ ಒಂದನ್ನ ನೀಡಿತ್ತು. ಇದ್ರಲ್ಲಿ ಗೆದ್ದವರು ಸೇಫ್ ಆಗಿ ತಮ್ಮ ಬದಲಿಗೆ ಬೇರೆಯವರನ್ನ ನಾಮಿನೇಟ್ ಮಾಡಬಹುದೆಂದು ತಿಳಿಸಿತ್ತು. ಅದರಂತೆ ಪ್ರಶಾಂತ್ ಸಂಬರ್ಗಿ ಮನೆಯ ಕಿರಿಯ ಸದಸ್ಯ ವಿಶ್ವನಾಥ್ ನನ್ನ ಸೋಲಿಸಿ ಅವರನ್ನ ನಾಮಿನೇಟ್ ಮಾಡಿದ್ರು. ಇತ್ತ ಮಂಜು ರಘು ಅವರನ್ನ ಸೋಲಿಸಿ ನಾಮಿನೇಟ್ ಮಾಡಿದ್ರು. ಹೀಗೆ ಪ್ರಶಾಂತ್ , ಮಂಜು ಮೊದಲನೇ ವಾರ ಸೇಫ್ ಆದ್ರೆ , ವಿಶ್ವನಾಥ್, ರಘು, ಧನುಶ್ರಿ, ನಿಧಿ ಸುಬ್ಬಯ್ಯ, ನಿರ್ಮಲಾ ಡೇಂಜರ್ ಝೋನ್ ಗೆ ಪ್ರವೇಶ ಮಾಡಿದ್ದಾರೆ.