BIGGBOSS 8 : ದಿವ್ಯಾ ಸುರೇಶ್ ಗೆ ಹೊಡೆದ ಪ್ರಿಯಾಂಕ ತಿಮ್ಮೇಶ್
ಬೆಂಗಳೂರು : ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ..
ಬಿಗ್ ಬಾಸ್ ನಲ್ಲಿ ನಿನ್ನೆ ಪ್ರಿಯಾಂಕಾ ತಿಮ್ಮೇಶ್ ದಿವ್ಯಾ ಸುರೇಶ್ ಮೇಲೆ ಕೈಮಾಡಿದ್ದಾರೆ.. ಒಂದೇ ಸಮ ಚಕ್ರವರ್ತಿ ವಿರುದ್ಧವೂ ಮುಗಿಬಿದ್ದಿದ್ದಾರೆ. ಬಿಗ್ ನೀಡಿದ್ದ ಚಿನ್ನದ ಮೊಟ್ಟೆ ಟಾಸ್ಕ್ ನಲ್ಲಿ ಗೆದ್ದ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್ರವರಿಗೆ ಹೆಚ್ಚುವರಿಯಾಗಿ ಬಿಗ್ಬಾಸ್ ಒಂದು ಚಿನ್ನದ ಮೊಟ್ಟೆ ನೀಡಿ, ಅದನ್ನು ಮನೆಯ ಯಾವುದೇ ಸದಸ್ಯರ ತಲೆಯ ಮೇಲೆ ಹೊಡೆದರೆ ಆ ಸದಸ್ಯರ ಲಾಕರ್ನಲ್ಲಿರುವ ಹಣ ಮೊಟ್ಟೆ ಹೊಡೆದವರ ಪಾಲಾಗುತ್ತದೆ ಎಂದು ಸೂಚಿಸಿದ್ದರು.
ಈ ಹಿನ್ನೆಲೆ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್ ಮನೆಯ ಇತರ ಸದಸ್ಯರಿಗೆ ಮೊಟ್ಟೆ ಹೊಡೆಯಲು ಪ್ಲಾನ್ ಮಾಡಿದ್ದರು. ಈ ವೇಳೆ ವೈಷ್ಣವಿ, ಶುಭಾ, ಪ್ರಿಯಾಂಕ್ ಬಾತ್ ರೂಮ್ ನಲ್ಲಿ ಬಚ್ಚಿಟ್ಟುಕೊಂಡಿದ್ರು. ನಂತರ ಬಾತ್ ರೂಮ್ ಬಾಗಿಲು ತೆಗೆದುಕೊಂಡಿದ್ದ ಪ್ರಿಯಾಂಕರ ಹಿಂದೆ ಶಮಂತ್ ಬೀಳ್ತಾರೆ.. ಅಲ್ಲಿಂದ ತಪ್ಪಿಸಿಕೊಳ್ಲೋ ಭರದಲ್ಲಿ ಪ್ರಿಯಾಂಕಾ ಸ್ವಿಮ್ಮಿಂಗ್ ಫೂಲ್ ಗೆ ಬೀಳ್ತಾರೆ.
ಸೈಫ್ ಅಲಿ ಖಾನ್ ಹೊಸ ಸಿನಿಮಾದ ಪೋಸ್ಟರ್ ವಿರುದ್ಧ ಸಿಡಿದೆದ್ದ ಹಿಂದೂಗಳು
ಸ್ವಿಮಿಂಗ್ ಪೂಲ್ ಗೆ ಬಿದ್ದ ಪ್ರಿಯಾಂಕರನ್ನು ಅಟ್ಟಾಡಿಸಿಕೊಂಡು ಹೋಗಿ ದಿವ್ಯಾ ಸುರೇಶ್ ಮೊಟ್ಟೆ ಹೊಡೆಯುತ್ತಾರೆ. ಈ ವೇಳೆ ರೊಚ್ಚಿಗೆದ್ದ ಪ್ರಿಯಾಂಕ ದಿವ್ಯಾ ಸುರೇಶ್ ಬೆನ್ನ ಮೇಲೆ ಹೊಡೆಯುತ್ತಾರೆ. ಇದಕ್ಕೆ ದಿವ್ಯಾ ಸುರೇಶ್ ನನಗೆ ಯಾಕೆ ಹೊಡೆದೆ ಎಂದು ಪ್ರಶ್ನಿಸಿದಾಗ, ನೀನು ಏನು ಮಾಡಿದ್ದು ಎಂದು ಪ್ರಿಯಾಂಕ ತಿಮ್ಮೇಶ್ ಕಿಡಿಕಾರಿದ್ದಾರೆ.
ನಂತರ ಬಿಗ್ಬಾಸ್ ನೀರಿನಲ್ಲಿದ್ದಾಗ ಹೊಡೆದಿದ್ದಾರೆ ಎಂದು ಹೇಳುತ್ತಾ ಮನೆಯ ಒಳಗೆ ಸಿಟ್ಟಿನಿಂದ ಹೋಗಿ ಪ್ರಿಯಾಂಕ ತಿಮ್ಮೇಶ್ ದಿವ್ಯಾ ಸುರೇಶ್ ಪೆಟ್ಟಿಗೆಯಲ್ಲಿದ್ದ ಹಣವನ್ನು ಹಾಳು ಮಾಡುತ್ತಾರೆ. ಬಳಿಕ ಸ್ವಿಮಿಂಗ್ ಪೂಲ್ ಗೆ ಮತ್ತೆ ಇಳಿದ ಪ್ರಿಯಾಂಕ ಮೊಟ್ಟೆ ಹೊಡೆಯುವುದು ದೊಡ್ಡ ವಿಚಾರವಲ್ಲ. ನನಗೆ ಪೆಟ್ಟಾಗುವುದು ಇರುತ್ತದೆ. ಪರಚುವುದು ಇರುತ್ತದೆ ಎಂದು ಶಮಂತ್ಗೆ ಹೇಳುತ್ತಿರುತ್ತಾರೆ. ಈ ವೇಳೆ ನಾನು ಅವನಿಗೆ ಮೊಟ್ಟೆ ಹೊಡೆಯಲು ಹೇಳಿದೆ ಎಂದು ಚಕ್ರವರ್ತಿಯವರು ಮಧ್ಯೆ ಮಾತನಾಡ್ತಾರೆ. ಆಗ ನಾನು ಶಮಂತ್ ಹತ್ತಿರ ಮಾತಾಡುತ್ತಿದ್ದೇನೆ ನಿಮ್ಮ ಹತ್ತಿರ ಇಲ್ಲ ಎಂದು ಪ್ರಿಯಾಂಕ ಹೇಳ್ತಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿ ನಾನು ಶಮಂತ್ ಹತ್ತಿರನೇ ಹೇಳುತ್ತಿದ್ದೇನೆ ಎಂದು ಚಕ್ರವರ್ತಿ ಹೇಳುತ್ತಾರೆ.
ಅಲ್ಲದೇ ಚಕ್ರರ್ತಿಯವರು ನಾನು ನಿನ್ನ ಹತ್ತಿರ ಮಾತನ್ನೇ ಆಡುತ್ತಿಲ್ಲ. ಕಿರುಚಾಡ ಬೇಡ. ನಾನು ಶಮಂತ್ ಹತ್ತಿರ, ಮೊಟ್ಟೆ ಇರುವವರ ಹತ್ತಿರ ಹೇಳುತ್ತಿದ್ದೇನೆ, ನಿನ್ನ ಬಳಿ ಮಾತನಾಡುತ್ತಲೇ ಇಲ್ಲ. ಕೂಗಾಡಿ ಸೀನ್ ಕ್ರಿಯೆಟ್ ಮಾಡಬೇಡ. ನನಗೂ ನಿನಗೂ ವಿಷಯವೇ ಇಲ್ಲ. ನೀನು ಏನಾದರೂ ಮಾಡಿಕೋ, ಕಿರುಚಿಕೋ, ನನ್ನ ಈ ವಿಚಾರಕ್ಕೆ ಎಳೆಯಬೇಡ. ನಾನು ಕೆಟ್ಟದಾಗಿ ಮಾತನಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
‘ವಿಕ್ರಾಂತ್ ರೋಣ’ದಲ್ಲಿ ಕಿಚ್ಚನ ಜೊತೆ ಹೆಜ್ಜೆ ಹಾಕಲು ‘ಲಂಕಾ’ ಸುಂದರಿ ಕೇಳಿದ ಸಂಭಾವನೆ ಎಷ್ಟು ಗೊತ್ತಾ..?