ಕಾಂಗ್ರೆಸ್ ಗೆ ಸಿ.ಪಿ.ಯೋಗೇಶ್ವರ್ : ಡಿಕೆಶಿ ಏನಂದ್ರು..? C P Yogeshwar saaksha tv
ಬೆಂಗಳೂರು : ನಮಗೆ ಪಕ್ಷ ಮುಖ್ಯ, ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದ್ರೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ.
ಪಕ್ಷಕ್ಕೆ ಬರುವವರು ಇದ್ದಾರೆ. ಅವರನ್ನು ಬೇಡ ಎಂದು ಹೇಳಲ್ಲ. ಕೆಲವರು ನನಗೆ ಆಗದಿರಬಹುದು ಅಥವಾ ಇನ್ನೊಬ್ಬರಿಗೆ ಆಗದಿರಬಹುದು. ಆದ್ರೆ ಪಕ್ಷ ಮುಖ್ಯ, ಬಂದ್ರೆ ಸ್ವಾಗತ ಎಂದರು.
ಈಗಲೂ ಕೂಡ ಅನೇಕ ಕಡೆ ಮುಖಂಡರು ಕಾಂಗ್ರೆಸ್ ಗೆ ಬರೋದಕ್ಕೆ ಸಿದ್ಧವಿದ್ದಾರೆ. ಯಾರು ಯಾರು ಬರೋದಕ್ಕೆ ಸಿದ್ಧವಿದ್ದಾರೆ ಎಂದು ನಿಮಗೆ ಗೊತ್ತಾದರೆ ಗಾಬರಿ ಆಗಬಹುದು ಎಂದು ಡಿಕೆಶಿ ಹೊಸ ಬಾಂಬ್ ಸಿಡಿಸಿದರು.
ಇದೇ ವೇಳೆ ಮೈತ್ರಿ ಸರ್ಕಾರವನ್ನ ಕೆಡವಿದವರ ಬಗ್ಗೆ ಮಾತನಾಡಿ, ಆ 13 ಮಂದಿಯ ಕ್ಷೇತ್ರಗಳಲ್ಲಿ ಮುಂದೆ ಏನಾಗುತ್ತೆ ನೀವೇ ನೋಡಿ ಎಂದು ಟಾಂಗ್ ನೀಡಿದರು.