Congress tweet | ಬಿಜೆಪಿಗೆ ಸರ್ಕಾರವೆಂದರೆ ಬಿಸ್ನೆಸ್ ಇದ್ದಹಾಗೆ
ಬೆಂಗಳೂರು : ಬಿಜೆಪಿಗೆ ಸರ್ಕಾರವೆಂದರೆ ಬಿಸ್ನೆಸ್ ಇದ್ದಹಾಗೆ. ಶಾಸಕರ ಖರೀದಿಗೆ ಬಂಡವಾಳ ಹೂಡಿಕೆಯಾಗುತ್ತದೆ, ನಂತರ ಸಿಎಂ ಹುದ್ದೆಗೆ ₹2,500 ಕೋಟಿ #PayCM ಮಾಡ್ಬೇಕು. ಶಾಸಕರು ಸಚಿವ ಸ್ಥಾನಕ್ಕೆ #PayCM ಮಾಡ್ಬೇಕು. ಉದ್ಯೋಗಾಕಾಂಕ್ಷಿಗಳು ಸಚಿವರಿಗೆ #PayCM ಮಾಡ್ಬೇಕು.ಗುತ್ತಿಗೆದಾರರು ಎಲ್ಲರಿಗೂ #PayCM ಮಾಡ್ಬೇಕು ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ರಾಜ್ಯ & ಕೇಂದ್ರ ಪೊಲೀಸ್ ಪಡೆಗಳಿಗೆ, BSF ನಂತಹ ಪಡೆಗಳ ನೇಮಕಾತಿಗಾಗಿ ಯುವತಿಯರ ತರಬೇತಿಗೆ ಒನಕೆ ಓಬವ್ವ ಶಾಲೆ ಸ್ಥಾಪಿನೆ’ ಎಂದವರು ಮಾಡಿದ್ದೇನು? ಹಿಜಾಬ್ ಹೆಸರಲ್ಲಿ ಯುವತಿಯರ ಶಿಕ್ಷಣ ಕಸಿದರು. PSI ನೇಮಕಾತಿ ಅಕ್ರಮ ನಡೆಸಿ ಮೋಸ ಮಾಡಿದರು. ತಾವು ನೀಡಿದ ವಾಗ್ದಾನ ಮರೆತರು
‘ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ನೀಡಬೇಕು’ಎಂದವರು ಬೇರೆ ಯಾರೂ ಅಲ್ಲ ಸ್ವತಃ ಬಿಜೆಪಿ ಶಾಸಕ ಯತ್ನಾಳ್.#40PercentSarkara ದ ಸಿಎಂ ಕೂಡ ಪುಗಸಟ್ಟೆ ಬಂದಿಲ್ಲ ಪೇ ಮಾಡಿಯೇ ಬಂದಿದ್ದು ಅಲ್ಲವೇ ಬಿಜೆಪಿ?! ಈ ಬಗ್ಗೆ ಬಿಜೆಪಿಗರು ಮಾತಾಡುವುದಿಲ್ಲವೇಕೆ? ಮೌನವಿದೆ ಎಂದರೆ ಅಲ್ಲಿ ಸತ್ಯವಿದೆ ಎಂದರ್ಥವಲ್ಲವೇ ಮಾನ್ಯ #PayCM ಅವರೇ?
ಗುತ್ತಿಗೆದಾರರೇ,
ನಿಮಗೆ ಟೆಂಡರ್ ಸಿಗಬೇಕೆ, ಬಿಲ್ ಬಿಡುಗಡೆ ಆಗಬೇಕೇ?#PayCM ಮಾಡಿ.ಇದು #40PercentSarkara ದ ನಿಯಮ!
◆ಗುತ್ತಿಗೆದಾರರ ಸಂಘ
◆ಬಿಬಿಎಂಪಿ ಗುತ್ತಿಗೆದಾರರು
◆ಸರ್ಕಾರಿ ಶಾಲೆ ಗುತ್ತಿಗೆದಾರರು
◆ಮೇವು ಸರಬರಾಜುದಾರರು
◆ಖಾಸಗಿ ಶಾಲೆಗಳ ಮಾಲೀಕರು
◆ಸರ್ಕಾರಿ ಆಸ್ಪತ್ರೆಗಳ ಔಷಧ ಸರಬರಾಜುದಾರರುಎಲ್ಲರೂ 40% ಸಂತ್ರಸ್ತರೇ! pic.twitter.com/VG6rqT6Sdb
— Karnataka Congress (@INCKarnataka) September 23, 2022
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 50 ಲಕ್ಷ ಫಿಕ್ಸ್!ಈ ಕಡೆಯಿಂದ #PayCM ಮಾಡಿ, ಆ ಕಡೆಯಿಂದ ಹುದ್ದೆ ಪಡೆಯಿರಿ.ಇದು ಈ ಸರ್ಕಾರದ ಭ್ರಷ್ಟಾಚಾರದ ಮಾದರಿ. ಈ ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಲು ಹಿಂಜರಿಯುತ್ತಿರುವುದೇಕೆ #40PercentSarkara ? ತನಿಖೆಯ ಜಾಡು ವಿಧಾನಸೌಧ ತಲುಪುವ ಭಯವೇ ಬಸವರಾಜಬೊಮ್ಮಾಯಿ ಅವರೇ?
ಒಳ್ಳೆಯ ಆಡಳಿತ ಬಿಜೆಪಿಯ ಹಣೆಯಲ್ಲೇ ಬರೆದಿಲ್ಲ, ಅವರೆನಿದ್ದರೂ ಒಳ್ಳೆಯ ವ್ಯಾಪಾರಿಗಳು!ಸರ್ಕಾರಿ ಹುದ್ದೆಗಳನ್ನು ಸಂತೆಯಲ್ಲಿ ತರಕಾರಿ ಮಾರಿದಂತೆ ಮಾರಾಟ ಮಾಡಿದ ಕೀರ್ತಿ #40PercentSarkara ಕ್ಕೆ ಸಲ್ಲಬೇಕು.ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು 30 ಲಕ್ಷಕ್ಕೆ ಮಾರಿದ ಅಕ್ರಮದ ತನಿಖೆ ಮಾಡಲು #PayCM ಅವರಿಗೆ ಆಸಕ್ತಿ ಇಲ್ಲವೇಕೆ?
#PayCM ಎಂದಾಕ್ಷಣ ಗಾಬರಿಯಿಂದ ಹೆಗಲು ಮುಟ್ಟಿಕೊಳ್ಳುವುದೇಕೆ ಬಸವರಾಜಬೊಮ್ಮಾಯಿ ಅವರೇ? ‘ಕಳ್ಳನ ಮನಸು ಹುಳ್ಳುಳ್ಳಗೆ’ ಎಂಬ ಮಾತು ನಿಜವೇ!PSI ಹುದ್ದೆಗಳು 80 ಲಕ್ಷಕ್ಕೆ ಮಾರಾಟವಾಗಿದ್ದರೂ ಹಗರಣ ನಿರಾಕರಿಸಿದ್ರಿ, ಬಸವರಾಜ ದಡೇಸಗೂರ ಹಾಗೂ ಅಶ್ವಥ್ ನಾರಾಯಣ್ ಅವರ ವಿಚಾರಣೆ ನಡೆಸಲೇ ಇಲ್ಲ.ಪೆಮೆಂಟ್ ಪಾಲು ನಿಮಗೂ ತಲುಪಿದೆಯೇ ಎಂದು ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗೈದಿದೆ.