ಪ್ರಧಾನಿಗಳು ಈಗ ‘ಮೌನವ್ರತ‘ ಪಾಲಿಸುತ್ತಿರುವುದೇಕೆ?
ಬೆಂಗಳೂರು : ಹಿಂದೆ ಇದೇ ಮುನಿರತ್ನರ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಧಾನಿಗಳು ಈಗ ‘ಮೌನವ್ರತ‘ ಪಾಲಿಸುತ್ತಿರುವುದೇಕೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಕುಟುಕಿದೆ.
ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಶೇಕಡಾ 40 ರಷ್ಟು ಭ್ರಷ್ಟಚಾರ ಆರೋಪ ಮಾಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.
ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ…
ಸಿಎಂ ಮಾತಿಗೇ ಗೌರವವಿಲ್ಲ, ಸಿಎಂ ಮಾತನ್ನು ಯಾರೂ ಕೇಳ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ತಾವು ಕೇವಲ ಭ್ರಷ್ಟರ ಹಾಗೂ ಸಂಘಪರಿವಾರದ ಕೈಲಾಡುವ #PuppetCM ಮಾತ್ರವೇ? ಅಧಿಕಾರಿಗಳು ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದಾದರೆ ಸರ್ಕಾರ ಯಾರ ಹಿಡಿತದಲ್ಲಿದೆ? ನಿಮಗೂ ಮೀರಿ ಆಳುತ್ತಿರುವ ‘ಅಜ್ಞಾತ ಸಿಎಂ‘ ಯಾರು?
ಸಚಿವ ‘ಮನಿ‘ರತ್ನ ಅವರ ವಿರುದ್ಧ ಹಣ ವಸೂಲಿಯ ಆರೋಪ ಇದು ಮೊದಲೇನಲ್ಲ. ತೋಟಗಾರಿಕಾ ಇಲಾಖೆಯಲ್ಲೂ ಹಣ ವಸೂಲಿ ಮಾಡಿದ ಆರೋಪದ ಬಗ್ಗೆ ಪ್ರಧಾನಿಗೆ ಪತ್ರ ಹೋಗಿತ್ತು. ಹಿಂದೆ ಇದೇ ಮುನಿರತ್ನರ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಧಾನಿಗಳು ಈಗ ‘ಮೌನವ್ರತ‘ ಪಾಲಿಸುತ್ತಿರುವುದೇಕೆ? ಪತ್ರಕ್ಕೆ ಪ್ರತಿಕ್ರಿಯೆ ಇಲ್ಲವೇಕೆ ಎಂದು ಕುಟುಕಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿ, ರಾಜ್ಯದಲ್ಲಿ 40% ಕಮಿಷನ್ ಪೆಡಂಭೂತ ತಾಂಡವವಾಡುತಿದೆ.ಈ ಕಮಿಷನ್ ಭೂತಕ್ಕೆ ಬಲಿಯಾದ ಸಂತೋಷ್ ಪಾಟೀಲ್ ಪ್ರಧಾನಿಗೆ ಪತ್ರ ಬರೆದರೂ ಅದು ಪ್ರಧಾನಿ ಸಚಿವಾಲಯದ ಕಸದ ಬುಟ್ಟಿ ಸೇರಿತ್ತು.ಈಗ ಗುತ್ತಿಗೆದಾರರ ಸಂಘದ ಸರದಿ.ಈಗಲಾದರೂ ನಿಷ್ಪಕ್ಷಪಾತ ತನಿಖೆ ನಡೆಯಬಹುದೇ?ಆರೋಪಿತ ಸರ್ಕಾರದ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರಾ.
ಬಿಜೆಪಿ ಸರ್ಕಾರ 40% ಕಮಿಷನ್ ಅನ್ನು 50% ಗೆ ಏರಿಸಿ ಭ್ರಷ್ಟಾಚಾರದಲ್ಲಿ ಪ್ರಮೋಷನ್ ಪಡೆದಿದೆ. ಅತಿವೃಷ್ಟಿ,ಅನಾವೃಷ್ಟಿ,ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ರಾಜ್ಯಕ್ಕೆ ಆಡಳಿತದ ಬೂಸ್ಟಿಂಗ್ ಡೋಸ್ ನೀಡಬೇಕಾದ ಬಿಜೆಪಿ ಭ್ರಷ್ಟಾಚಾರದಲ್ಲಿ ಬೂಸ್ಟಿಂಗ್ ಡೋಸ್ ಪಡೆದಿದೆ.BBMP ಅನ್ನು ಹಗಲುದರೋಡೆಯ ಕೇಂದ್ರವಾಗಿಸಿದ್ದೆ ಸದ್ಯದ ಬಿಜೆಪಿಯ ಸಾಧನೆ ಎಂದು ಕುಟುಕಿದ್ದಾರೆ.
Congress Why are the Prime Ministers observing ‘Mounavrata’ now?