ನೈಟ್ ಕರ್ಫ್ಯೂ ಮುಂದುವರೆಸುವ ವಿಚಾರ : ಸುಧಾಕರ್ ಹೇಳಿದ್ದೇನು..?
ಬೆಂಗಳೂರು : ನೈಟ್ ಕರ್ಫ್ಯೂ ಮುಂದುವರೆಸಬೇಕಾ ಅಥವಾ ನಿಲ್ಲಿಸಬೇಕಾ ಎಂಬ ವಿಚಾರವಾಗಿ ಇಂದು ಸಂಜೆ ಮುಖ್ಯಮಂತ್ರಿ ಗಳ ಜೊತೆ ಚರ್ಚೆ ಮಾಡುತ್ತೇನೆ. ನಂತರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ದೇವಸ್ಥಾನ, ಮಾರ್ಕೆಟ್ ಗಳಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಇದನ್ನು ಗಮನಿಸಿದ್ರೆ ಭಯವಾಗ್ತಿದೆ. ಬಹಳ ಮುನ್ನೆಚ್ಚರಿಕೆಯಿಂದ ಇರಬೇಕು.
ಎರಡನೇ ಅಲೆ ಮುಗಿದಿದೆ ಅಂದ ಮಾತ್ರಕ್ಕೆ ಮತ್ತೆ ಮೂರನೇ ಅಲೆ ಬರೊದಿಲ್ಲ ಅಂತಲ್ಲ. ಲಸಿಕೆಯನ್ನು ತೆಗೆದು ಕೊಂಡರೂ ಎಚ್ಚರಿಕೆಯಿಂದ ಇರಬೇಕು. ಎಲ್ಲಾ ತಜ್ಞರು ಸಾಕಷ್ಟು ಎಚ್ಚರಿಕೆ ನೀಡ್ತಾ ಇದ್ದಾರೆ.
ಮೂರನೇ ಅಲೆ ಎದುರಾಗುವ ಅವಕಾಶ ನಾವು ಕೊಡಬಾರದು. ನಮ್ಮ ನಡವಳಿಕೆ ಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನೂರು ಜನಕ್ಕೆ ಮದುವೆಗೆ ಅವಕಾಶ ಕೊಡಲಾಗಿದೆ.
ಆದರೆ ನಾನ್ನೂರು ಐನೂರು ಜನ ಸೇರ್ತಿದಾರೆ. ಮಾರುಕಟ್ಟೆ ಗಳಲ್ಲಿ ಮಿತಿಮೀರಿದ ಜನ ಸೆರುತ್ತಿದ್ದಾರೆ. ಇದು ಬಹಳ ಅಸಮಾಧಾನ ತಂದಿದೆ.
ಇನ್ನೂ ಮೂರರಿಂದ ನಾಲ್ಕು ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಳಿ ಚರ್ಚೆ ನಡೆಸುತ್ತೇನೆ ಎಂದು ಸುಧಾಕರ್ ತಿಳಿಸಿದರು.
ಇನ್ನು ನಮ್ಮ ರಾಜ್ಯದಂತೆ ಕೇರಳದಲ್ಲಿ ಎರಡನೇ ಅಲೆ ಕಡಿಮೆ ಆಗಲೇ ಇಲ್ಲ. ಕರ್ನಾಟಕದಲ್ಲಿ ಬಹಳ ಕಡಿಮೆ ಆಗಿದೆ. ಇನ್ನೂ ಕಡಿಮೆ ಆಗಬೇಕು.
ಮೂರು ಸಾವಿರ ಕೇಸ್ ಗಿಂತ ಹೆಚ್ಚು ಪಾಸಿಟಿವ್ ಕೇಸ್ ಬಂದರೆ ಅದು ನಮಗೆ ಎಚ್ಚರಿಕೆ ಗಂಟೆಯಾಗಿರುತ್ತದೆ. ಎರಡನೇ ಅಲೆಯಂತೆ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ. ಮೂರನೇ ಅಲೆ ಪ್ರಾರಂಭವಾಗಿಲ್ಲ ಎಂದು ಹೇಳಿದರು.