ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

6 ವಿವಿಧ ಬಗೆಯ ಸುಲಭ ಮತ್ತು ರುಚಿಕರ ಲಾಡುಗಳ ರೆಸಿಪಿಗಳು..!

Namratha Rao by Namratha Rao
October 5, 2021
in Cooking, Newsbeat, ಅಡುಗೆ
Saakshatv cooking recipe akki Laddu
Share on FacebookShare on TwitterShare on WhatsappShare on Telegram

6 ವಿವಿಧ ಬಗೆಯ ಸುಲಭ ಮತ್ತು ರುಚಿಕರ ಲಾಡುಗಳ ರೆಸಿಪಿಗಳು..!

1. ಉದ್ದಿನ ಬೇಳೆ ಲಡ್ಡು

ಬೇಕಾಗುವ ಸಾಮಗ್ರಿಗಳು

Related posts

hockey-india-saffron-jersey-controversy

Hockey india – ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ “ಬಣ್ಣದ” ರಾಜಕೀಯ..!

July 31, 2026
shukravara-deeparadhane-mahalakshmi-kataksha-dhanaprapti-kannada

Astro- ಈ ಒಂದು ದೀಪವನ್ನು ಮನೆಯಲ್ಲಿ ಎರಡು ಶುಕ್ರವಾರದಂದು ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…..||

July 31, 2026

ಉದ್ದಿನ ಬೇಳೆ -1 ಕಪ್
ಹುರಿಗಡಲೆ – 1/2 ಕಪ್
ಏಲಕ್ಕಿ ಪುಡಿ – 1/4 ಚಮಚ
ತುಪ್ಪ – 1/2 ಕಪ್
ಬೆಲ್ಲ – 1/4 ಕಪ್
ಮಿಲ್ಕ್ ಮೇಡ್ – 1/2 ಕಪ್

ಮಾಡುವ ವಿಧಾನ
Saakshatv cooking recipes prepare Uddhinabele laddu
ಮೊದಲಿಗೆ ಬಾಣಲೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ. ತುಪ್ಪ ಕರಗಿದ ಬಳಿಕ ಅದಕ್ಕೆ ಉದ್ದಿನ ಬೇಳೆ ಸೇರಿಸಿ ಚೆನ್ನಾಗಿ ಹುರಿಯಿರಿ. ಹುರಿಗಡಲೆಯನ್ನು ಸಹ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಯಲ್ಲಿ ಹುರಿದ ಉದ್ದಿನ ಬೇಳೆ, ಹುರಿಗಡಲೆ ಏಲಕ್ಕಿ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ಗ್ರೈಂಡ್ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಮಿಲ್ಕ್ ಮೇಡ್ ಮತ್ತು ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣದಿಂದ ಸಣ್ಣ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿಕೊಳ್ಳಿ ಈಗ ರುಚಿಯಾದ ಉದ್ದಿನಬೇಳೆಯ ಲಡ್ಡು ಸವಿಯಲು ಸಿದ್ಧವಾಗಿದೆ.

5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!

2. ಶೇಂಗಾ/ನೆಲಕಡಲೆ ಲಡ್ಡು

ಬೇಕಾಗುವ ಸಾಮಗ್ರಿಗಳು
ಶೇಂಗಾ/ನೆಲಕಡಲೆ – 2 ಕಪ್
ಬೆಲ್ಲ – 2 ಕಪ್
ತುಪ್ಪ – 2 ಚಮಚ
Saakshatv cooking recipe how to prepare peanut laddu
ಮಾಡುವ ವಿಧಾನ:
ಮೊದಲಿಗೆ ಶೇಂಗಾ/ನೆಲಕಡಲೆಯನ್ನು ಸಣ್ಣ ಉರಿಯಲ್ಲಿ ಹುರಿದು, ನಂತರ ಅದರ ಸಿಪ್ಪೆಗಳನ್ನು ತೆಗೆಯಿರಿ. ಬಳಿಕ ಹುಡಿ ಮಾಡಿಕೊಳ್ಳಿ.
ನಂತರ ಬಾಣಲೆ ಬಿಸಿ ಮಾಡಿ ಬೆಲ್ಲ ಸೇರಿಸಿ, ಸ್ವಲ್ಪ ನೀರಿನ ಜೊತೆ ಕುದಿಸಿ. ಪಾಕ ಬಂದ ಬಳಿಕ ಅದಕ್ಕೆ ತುಪ್ಪವನ್ನು ಸೇರಿಸಿ. ನಂತರ ‌ಅದಕ್ಕೆ ಹುಡಿ ಮಾಡಿಕೊಂಡ ಶೇಂಗಾ/ನೆಲಕಡಲೆ ಹುಡಿಯನ್ನು ಸೇರಿಸಿ. ಚೆನ್ನಾಗಿ ಬೆರೆಸಿ. ಒಲೆಯಿಂದ ಕೆಳಗಿಳಿಸಿ, ಪಾಕ ಆರಿದ ನಂತರ ಉಂಡೆ ಕಟ್ಟಿ. ರುಚಿಯಾದ ಶೇಂಗಾ/ನೆಲಕಡಲೆ ಲಡ್ಡು ಸವಿಯಲು ಸಿದ್ಧವಾಗಿದೆ.

ಮಕ್ಕಳಿಗೆ ಬಲು ಇಷ್ಟವಾಗುವ 5 ಸ್ನಾಕ್ಸ್/ ತಿಂಡಿಗಳ ರೆಸಿಪಿಗಳು ನಿಮಗಾಗಿ..!

3. ಅವಲಕ್ಕಿ ‌ಲಡ್ಡು

ಬೇಕಾಗುವ ‌ಸಾಮಾಗ್ರಿ

ಅವಲಕ್ಕಿ – 2 ಕಪ್
ಬೆಲ್ಲ – 1 ಕಪ್
ತೆಂಗಿನ ಕಾಯಿತುರಿ – 1/2 ಕಪ್
ತುಪ್ಪ – 2 ಚಮಚ
ದ್ರಾಕ್ಷಿ, ಗೋಡಂಬಿ – ಸ್ವಲ್ಪ
ಏಲಕ್ಕಿ- ಚಿಟಿಕೆಯಷ್ಟು

ಮಾಡುವ ‌ವಿಧಾನ
Saakshatv cooking recipe avalakki laddu recipe

ಮೊದಲಿಗೆ ‌ಬಾಣಲೆ ಬಿಸಿ ಮಾಡಿ ‌ಅವಲಕ್ಕಿಯನ್ನು 2 ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ.
ನಂತರ ಬಾಣಲೆ ಬಿಸಿ ಮಾಡಿ 2 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿಯನ್ನು ಹುರಿಯಿರಿ. ನಂತರ 1 ಕಪ್ ಬೆಲ್ಲಕ್ಕೆ 1 ಕಪ್ ನೀರನ್ನು ಸೇರಿಸಿ ಕರಗಿಸಿಕೊಳ್ಳಿ. ನಂತರ ಇದಕ್ಕೆ ತೆಂಗಿನ ಕಾಯಿತುರಿ ಸೇರಿಸಿ ‌ಚೆನ್ನಾಗಿ ಮಿಶ್ರ ‌ಮಾಡಿ. ಬಳಿಕ ಕಡಿಮೆ ಉರಿಯಲ್ಲಿ ಬೇಯಿಸುತ್ತಾ ಏಲಕ್ಕಿ ಪುಡಿ ಮಿಶ್ರ ಮಾಡಿ.‌ ಈಗ ಪುಡಿ ಮಾಡಿ ಇಟ್ಟುಕೊಂಡ ಅವಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಸೇರಿಸಿ. ಬಿಸಿ ಇರುವಾಗಲೇ ಮಿಶ್ರಣದಿಂದ ಲಡ್ಡುಗಳನ್ನು ತಯಾರಿಸಿ ಕೊಳ್ಳಿ. ಈಗ ರುಚಿಯಾದ ಅವಲಕ್ಕಿ ಲಡ್ಡು ಸವಿಯಲು ಸಿದ್ಧವಾಗಿದೆ.

5 ಸಿಂಪಲ್ ಮತ್ತು ಬಹಲ ಟೇಸ್ಟಿ ಅಡುಗೆ ರೆಸಿಪಿಗಳು ನಿಮಗಾಗಿ..!

4. ಗೋಧಿ ಬಾದಾಮಿ ‌ಲಡ್ಡು

ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು 1 ಕಪ್
ಬಾದಾಮಿ ಪುಡಿ – 1 ಕಪ್
ಒಣ ಖರ್ಜೂರ ಪುಡಿ – 3/4 ಕಪ್
ಏಲಕ್ಕಿ ಪುಡಿ – 1 ಚಮಚ
ಓಟ್ಸ್ ಪುಡಿ – 1/2 ಕಪ್
ಕಮಲದ ಬೀಜದ ಪುಡಿ – 1/2 ಕಪ್
ತೆಂಗಿನಕಾಯಿ ಹುಡಿ – 2 ಚಮಚ
Saakshatv cooking recipe
ಮಾಡುವ ವಿಧಾನ
ಮೊದಲಿಗೆ ತುಪ್ಪವನ್ನು ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಸೇರಿಸಿ ಮತ್ತು ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಹುರಿಯಿರಿ. ಬಣ್ಣದಲ್ಲಿ ಸ್ವಲ್ಪ ಬದಲಾವಣೆ ಆಗುತ್ತಿದ್ದಂತೆ ಬಾದಾಮಿ ಪುಡಿ, ಒಣ ಖರ್ಜೂರ ಪುಡಿ, ಏಲಕ್ಕಿ ಪುಡಿ, ಓಟ್ಸ್ ಪುಡಿ, ಕಮಲದ ಬೀಜದ ಪುಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣವಾಗುವವರೆಗೆ ಬೆರೆಸಿ. ನಂತರ ಸ್ವಲ್ಪ ತಣ್ಣಗಾಗಿಸಿ. ಬಳಿಕ ಅಗತ್ಯವಿದ್ದರೆ ತುಪ್ಪವನ್ನು ಸೇರಿಸಿ ಚೆನ್ನಾಗಿ ನಾದಿ. ನಂತರ ಸಣ್ಣ ಸಣ್ಣ ಲಡ್ಡುಗಳನ್ನು ಮಾಡಿ ತೆಂಗಿನಕಾಯಿ‌ ಹುಡಿ ಮೇಲೆ ಉರುಳಿಸಿ. ಈಗ ರುಚಿಯಾದ ಗೋಧಿ ಬಾದಾಮಿ ‌ಲಡ್ಡು ಸವಿಯಲು ಸಿದ್ಧವಾಗಿದೆ.

5 ವಿವಿಧ ಬಗೆಯ ರುಚಿಕರ ವಡೆಗಳ ರೆಸಿಪಿಗಳು

5. ಹೆಸರು ಹಿಟ್ಟಿನ ಲಾಡು

ಬೇಕಾಗುವ ಪದಾರ್ಥಗಳು:

ಹೆಸರು ಹಿಟ್ಟು – 1/2 ಕೆಜಿ
ಬೆಲ್ಲ- 300 ಗ್ರಾಂ
ಒಣ ಕೊಬ್ಬರಿ ಪುಡಿ/ತುರಿ – 1ಕಪ್
ಗೋಡಂಬಿ ಬಾದಾಮಿ – 1 ಕಪ್
ಏಲಕ್ಕಿ ಪುಡಿ – 1/2
ತುಪ್ಪ – 4 ಚಮಚ

hesaru hittina laddu

ಮಾಡುವ ವಿಧಾನ:

ಮೊದಲಿಗೆ ಹೆಸರುಬೇಳೆಯನ್ನು ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಕೊಳ್ಳಿ. ಬಳಿಕ ಗೋಡಂಬಿ ಮತ್ತು ಬಾದಾಮಿಯನ್ನು ಪುಡಿ ಮಾಡಿಕೊಳ್ಳಿ. ಬೆಲ್ಲವನ್ನು ಕರಗಿಸಿ , ಸೋಸಿ, ಎಳೆ ಪಾಕ ಬರುವವರೆಗೆ ಕುದಿಸಿ.
ನಂತರ ಬಾಣಲೆ ಬಿಸಿ ಮಾಡಿ ಅರ್ಧದಷ್ಟು ಹೆಸರು ಹಿಟ್ಟು ಹಾಕಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದು ತೆಗೆಯಿರಿ. ಈಗ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ
ನಂತರ ಪುಡಿ ಮಾಡಿದ ಗೋಡಂಬಿ ಬಾದಾಮಿ ಪುಡಿ ಸೇರಿಸಿ ಹುರಿಯಿರಿ. ನಂತರ ಹುರಿದಿಟ್ಟ ಹೆಸರು ಹಿಟ್ಟು ಸೇರಿಸಿ. ಒಣ ಕೊಬ್ಬರಿ ಪುಡಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬೆಲ್ಲದ ಪಾಕವನ್ನು ಸೇರಿಸಿ.ಚೆನ್ನಾಗಿ ಬೆರೆಸಿ, ಬಿಸಿ ಇದ್ದಾಗಲೇ ಉಂಡೆಯನ್ನು ಕಟ್ಟಿ. ರುಚಿಯಾದ ಹೆಸರು ಹಿಟ್ಟಿನ ಲಾಡು ಸವಿಯಲು ಸಿದ್ಧವಾಗಿದೆ.

5 ಸುಲಭ ಮತ್ತು ರುಚಿಕರ ಸಿಹಿ ತಿನಿಸುಗಳು ರೆಸಿಪಿಗಳು ನಿಮಗಾಗಿ..!

ಅಕ್ಕಿ ಲಡ್ಡು

ಬೇಕಾಗುವ ಸಾಮಗ್ರಿಗಳು

ಅಕ್ಕಿ -3/4 ಕೆಜಿ
ತುಪ್ಪ – 1/2 ಕೆಜಿ
ಸಕ್ಕರೆ -1/2 ಕೆಜಿ
ಏಲಕ್ಕಿ – 4

Saakshatv cooking recipe akki Laddu

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ಜರಡಿ ಹಿಡಿದು ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಮತ್ತು ಬಿಸಿ ಮಾಡಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಉಂಡೆ ಕಟ್ಟಿ. ತುಪ್ಪ ಕಡಿಮೆಯಾದರೆ ಇನ್ನೂ ಸ್ವಲ್ಪ ತುಪ್ಪ ಹಾಕಿ ಉಂಡೆ ಕಟ್ಟಿ.. ಈಗ ಅಕ್ಕಿಯ‌ ಲಡ್ಡು ಸವಿಯಲು ಸಿದ್ಧ.

Tags: #saakshatvcookingfood recipies
ShareTweetSendShare
Join us on:

Related Posts

hockey-india-saffron-jersey-controversy

Hockey india – ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ “ಬಣ್ಣದ” ರಾಜಕೀಯ..!

by admin
July 31, 2026
0

ಕೇಸರಿ ಬಣ್ಣ - ಧೈರ್ಯ, ತ್ಯಾಗ, ಶಕ್ತಿ ಮತ್ತು ಸೇವಾಭಾವದ ಪ್ರತೀಕ ನೀಲಿ ಬಣ್ಣ - ಶಾಂತಿ, ವಿಶ್ವಾಸ, ಜ್ಞಾನ ಮತ್ತು ಸ್ಥಿರತೆಯ ಸಂಕೇತ. ಈಗ ಹೇಳಿ.....

shukravara-deeparadhane-mahalakshmi-kataksha-dhanaprapti-kannada

Astro- ಈ ಒಂದು ದೀಪವನ್ನು ಮನೆಯಲ್ಲಿ ಎರಡು ಶುಕ್ರವಾರದಂದು ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…..||

by admin
July 31, 2026
0

ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯು ತ್ತದೆ. ಪ್ರತಿಯೊಬ್ಬ ಮನುಷ್ಯನೂ ಮುಂದುವರಿಯಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ...

ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ

ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ

by Shwetha
July 31, 2026
0

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ...

ದೇಶದ ಶ್ರೇಷ್ಠ ವಿಜ್ಞಾನಿಗೆ ಗೋಮೂತ್ರ ತಜ್ಞ ಎಂಬ ಹಣೆಪಟ್ಟಿ:ರಾಜಕೀಯಕ್ಕಾಗಿ ವಿಜ್ಞಾನಿಯ ಸಾಧನೆಗೆ ಮಸಿ ಬಳಿಯಬೇಡಿ- ಪ್ರಿಯಾಂಕಾ ಗಾಂಧಿ ವಿರುದ್ಧ ತಿರುಗಿಬಿದ್ದ  ಸಂಶೋಧನಾ ತಜ್ಞರು

ದೇಶದ ಶ್ರೇಷ್ಠ ವಿಜ್ಞಾನಿಗೆ ಗೋಮೂತ್ರ ತಜ್ಞ ಎಂಬ ಹಣೆಪಟ್ಟಿ:ರಾಜಕೀಯಕ್ಕಾಗಿ ವಿಜ್ಞಾನಿಯ ಸಾಧನೆಗೆ ಮಸಿ ಬಳಿಯಬೇಡಿ- ಪ್ರಿಯಾಂಕಾ ಗಾಂಧಿ ವಿರುದ್ಧ ತಿರುಗಿಬಿದ್ದ ಸಂಶೋಧನಾ ತಜ್ಞರು

by Shwetha
July 31, 2026
0

ಲೋಕಸಭೆಯಲ್ಲಿ ನೀಟ್ ಪರೀಕ್ಷಾ ಅಕ್ರಮಗಳ ಕುರಿತ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರ...

ಗಾಯಗೊಂಡ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಿ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಗಾಯಗೊಂಡ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಿ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

by Shwetha
July 31, 2026
0

ದೆಹಲಿ ಜಂತರ್ ಮಂತರ್ ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದಾರೆ ಎನ್ನಲಾದ ವ್ಯಕ್ತಿಗಳಿಗೆ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಸುಪ್ರೀಂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram