ಆಕ್ಸಿಜನ್, ಬೆಡ್ ಕೊಡಿ : ಕೈ ಶಾಸಕ ಡಾ.ರಂಗನಾಥ್ ಉಪವಾಸ ಸತ್ಯಾಗ್ರಹ
ಕುಣಿಗಲ್ : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರಸ್ವರೂಪ ಪಡೆದುಕೊಂಡಿದ್ದು, ಆಕ್ಸಿಜನ್, ಬೆಡ್ ಇಲ್ಲದೇ ಜನರು ಸಾವುತ್ತಿದ್ದಾರೆ.
ಈ ಮಧ್ಯೆ ಕುಣಿಗಲ್ ಕ್ಷೇತ್ರದ ಜನರಿಗೆ ಸಮರ್ಪಕವಾಗಿ ಆಕ್ಸಿಜನ್, ಬೆಡ್ ಪೂರೈಸುವಂತೆ ಒತ್ತಾಯಿಸಿ, ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ಕುಣಿಗಲ್ ತಾಲೂಕು ಆಸ್ಪತ್ರೆಯ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ವಿಡಿಯೋ ಮುಖಾಂತರ ಆಕ್ಸಿಜನ್ ಗಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕುಣಿಗಲ್ ತಾಲ್ಲೂಕಿನಲ್ಲಿ ಕೊರೊನಾ ಎರಡನೇ ಅಲೆ ಭಯಂಕರವಾಗಿ ಹರಡುತ್ತಿದೆ. ನಾನು ಕಳೆದ ಹದಿನೈದು ದಿನಗಳಿಂದಲೂ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಮಾಡಿದ್ದೀನಿ.
ಮೊದಲು ನಮಗೆ 20 ಬೆಡ್ಗಳನ್ನು ನೀಡಿದ್ರೂ. ಇದೀಗ 54 ಬೆಡ್ಗಳನ್ನು ಕೊಟ್ಟಿದಾರೆ. ಒಟ್ಟಾರೆ 70 ಜನ ಸೋಂಕಿತರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದೀನಿ. ಆದ್ರೆ ಕಳೆದ ಒಂದು ವಾರದಲ್ಲಿ ಸಾಕಷ್ಟು ಸಾವು ನೋವುಗಳಾಗಿವೆ.
ಇಲ್ಲಿನ ಕೃಷಿಕರು, ಬಡಜನರು ಖಾಸಗಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲ್ಲ. ಅಲ್ಲಿ ಲಕ್ಷ ಲಕ್ಷ ಬಿಲ್ ಮಾಡ್ತಾರೆ.. ಹಾಗಾಗಿ ಬಡವರಿಗೆ ಅನುಕೂಲವಾಗಲು ಹೆಚ್ಚಿನ ಆಕ್ಸಿಜನ್ ಬೆಡ್ ಗಳನ್ನು ನೀಡಿ ಎಂದು ಸರ್ಕಾರಕ್ಕೆ ಶಾಸಕರು ಮನವಿ ಮಾಡಿಕೊಂಡಿದ್ದಾರೆ.