ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡುವಂತೆ ಸ್ವಪ್ನಾ ಸುರೇಶ್ ಗೆ ಒತ್ತಾಯ – ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
ತಿರುವನಂತಪುರಂ, ಮಾರ್ಚ್19: ರಿವರ್ಸ್ ಹವಾಲಾ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡುವಂತೆ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಒತ್ತಾಯಿಸಿದ ಆರೋಪದ ಮೇಲೆ ಕ್ರೈಂ ಬ್ರಾಂಚ್, ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಎರ್ನಾಕುಲಂನ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ II ರ ಮುಂದೆ ಕ್ರೈಂ ಬ್ರಾಂಚ್ ಎಫ್ಐಆರ್ ದಾಖಲಿಸಿದೆ.
ಎಫ್ಐಆರ್ ಪ್ರಕಾರ, ಕಳೆದ ವರ್ಷ ಆಗಸ್ಟ್ 12 ಮತ್ತು 13 ರಂದು ಸ್ವಪ್ನಾ ಅವರನ್ನು ಪ್ರಶ್ನಿಸಿದ್ದ ಇಡಿ ಅಧಿಕಾರಿಗಳು, ಈ ಪ್ರಕರಣದಲ್ಲಿ ಸಿಲುಕುವ ಉದ್ದೇಶದಿಂದ ಸಿಎಂ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರು.
ತಪ್ಪಾದ ದಾಖಲೆಯನ್ನು ರೂಪಿಸುವುದು, ಪ್ರಚೋದನೆ, ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯ ಇತ್ಯಾದಿ ಆರೋಪಗಳನ್ನು ಇಡಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಹೆಚ್ಚುವರಿ ಎಸ್ಪಿ ಇ ಎಸ್ ಬಿಜುಮೊನ್ ಸಲ್ಲಿಸಿದ ವರದಿಯ ಆಧಾರದ ಮೇಲೆ ಕ್ರೈಂ ಬ್ರಾಂಚ್ ಕ್ರಮವು ಬಂದಿದ್ದು, ಈ ಹಿಂದೆ ಸ್ವಪ್ನಾಗೆ ಸೇರಿದೆ ಎಂದು ವರದಿಯಾದ ಆಡಿಯೊ ಕ್ಲಿಪ್ನ್ನು ತನಿಖೆ ಮಾಡಿದ್ದರು.
ಸಿಎಂ ವಿರುದ್ಧ ಹೇಳಿಕೆ ನೀಡಲು ಇಡಿ ಅಧಿಕಾರಿಗಳು ತಮ್ಮನ್ನು ಒತ್ತಾಯಿಸಿದ್ದಾರೆ ಎಂದು ಸ್ವಪ್ನಾ ಕೇಳಿದ್ದಾಗಿ ವರದಿಯಾಗಿದೆ. ತನಿಖೆಯ ಸಮಯದಲ್ಲಿ, ಕೆಲವು ಮಹಿಳಾ ಪೊಲೀಸರು ಈ ಪ್ರಕರಣದಲ್ಲಿ ಸಿಎಂ ಪಾತ್ರವಿದೆ ಎಂದು ಸಾಕ್ಷಿ ಹೇಳುವಂತೆ ಸ್ವಪ್ನ ಅವರನ್ನು ಬಲವಂತ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.
ತನಿಖಾ ತಂಡ ವರದಿ ಸಲ್ಲಿಸಿದ ನಂತರ, ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಸರ್ಕಾರ ಕಾನೂನು ಅಭಿಪ್ರಾಯ ಕೋರಿತ್ತು. ಪೊಲೀಸರ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಇಡಿ ವಿರುದ್ಧ ಪ್ರಕರಣ ದಾಖಲಿಸಬಹುದು ಎಂಬುದು ಕಾನೂನು ಅಭಿಪ್ರಾಯವಾಗಿತ್ತು.
ಅಪರಾಧ ವಿಭಾಗದ ಎಸ್ಪಿ ಎ ಶಾನವಾಜ್ ಇಡಿ ವಿರುದ್ಧದ ಪ್ರಕರಣದ ತನಿಖೆ ನಡೆಸಲಿದ್ದಾರೆ.
ಮಧುಮೇಹಿಗಳಿಗೆ ನೆಲ್ಲಿಕಾಯಿಯ ಪ್ರಯೋಜನಗಳು ಮತ್ತು ನೆಲ್ಲಿಕಾಯಿಯ ಜ್ಯೂಸ್ ರೆಸಿಪಿ https://t.co/MpKKk99eHY
— Saaksha TV (@SaakshaTv) March 14, 2021
ಸಾಲವನ್ನು ತಕ್ಷಣ ಹಿಂದಿರುಗಿಸುವಂತೆ ಪಾಕಿಸ್ತಾನಕ್ಕೆ ಯುಎಇ ಒತ್ತಾಯ https://t.co/37bKBSwUeV
— Saaksha TV (@SaakshaTv) March 14, 2021
ರುಚಿಯಾದ ಆರೋಗ್ಯಕರವಾದ ಮೊಸರನ್ನ https://t.co/hgpbqe9p9D
— Saaksha TV (@SaakshaTv) March 14, 2021