Crime
ದೇಹ ತುಂಡು ತುಂಡಾಗಿ ಕತ್ತರಿಸಿ ಅಪರಿಚಿತ ಮಹಿಳೆಯ ಬರ್ಬರ ಹತ್ಯೆ..!
ಮಂಡ್ಯ: ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅಪರಿಚಿತ ಮಹಿಳೆ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ನಡೆದಿದೆ. ಮಹಿಳೆಯ ದೇಹ ಮತ್ತು ಕೈಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿ ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿ ಕಾಲುವೆಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೇಮಗಿರಿ ಬಳಿ ತ್ರಿಶೂಲ್ ಜಲ ವಿದ್ಯುದಾಗಾರದ ಗೇಟಿಗೆ ಮಹಿಳೆಯ ದೇಹದ ಕತ್ತರಿಸಿದ ಭಾಗಗಳು ಸಿಕ್ಕಿಕೊಂಡಿದ್ದವು. ವಿಷಯ ತಿಳಿಯುತ್ತಿದ್ದ ತ್ರಿಶೂಲ್ ಪವರ್ ಹೌಸ್ ಕಾರ್ಮಿಕರು ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ನಾಗಮಂಗಲ ಡಿವೈಎಸ್ಪಿ, ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುರೇಶ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. 20 ವರ್ಷದಿಂದ 25 ವರ್ಷದೊಳಗಿನ ಪ್ರಾಯದ ಮಹಿಳೆಯ ದೇಹವನ್ನು ರುಂಡ ಮುಂಡ ಬೇರೆ ಬೇರೆ ಮಾಡಿ ಕೈಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಹೇಮಾವತಿ ನದಿ ಕಾಲುವೆಗೆ ದೇಹದ ಭಾಗಗಳನ್ನು ಎಸೆಯಲಾಗಿದೆ. ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ದೇಹದ ಭಾಗಗಳ ರವಾನೆ ಮಾಡಲಾಗಿದೆ. ಮೂಗಿನಲ್ಲಿ ಕೆಂಪು ಹರಳಿನ ಮೂಗುತಿ ಧರಿಸಿರುವ ಮಹಿಳೆಯ ಮೃತ ದೇಹದ ಮುಂಗೈ ಮೇಲೆ ಮೀನಿನ ಹಚ್ಚೆಯ ಗುರುತಿದೆ.
ವಿವೇಕನಗರ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ ಅವರಿಗೆ ಪೊಲೀಸ್ ಇಲಾಖೆಯ ಅತ್ಯುತ್ತಮ ಸೇವೆಗಾಗಿ ಚಿನ್ನದ ಪದಕ
ಮಹಿಳೆಯನ್ನು ಬರ್ಭರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತ ಮಹಿಳೆಯ ಬಗ್ಗೆ ಮಾಹಿತಿ ಗೊತ್ತಿದ್ದವರು ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸರು ಠಾಣೆಯ ದೂರವಾಣಿ 08230-262440 ಅಥವಾ ಮೊಬೈಲ್ ಫೋನ್ ನಂ: 9480804860 ಅನ್ನು ಸಂಪರ್ಕಿಸಬೇಕು ಎಂದು ಗ್ರಾಮಾಂತರ ಪೊಲೀಸರು ಮನವಿ ಮಾಡಿದ್ದಾರೆ.
Crime
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel