ಸಹೋದರಿಯನ್ನ ಮದುವೆಯಾಗಿದ್ದಕ್ಕೆ ಆಕೆಯ ಅಣ್ಣ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಚುರುವಿನಲ್ಲಿ ನಡೆದಿದೆ.. ಮನೀಶ್ ಎಂಬ 27 ವರ್ಷದ ಯುವಕ ಕೊಲೆಯಾದ ದುರ್ದೈವಿಯಾಗಿದ್ದು, ವಿಕಾಸ್ ಎಂಬಾತ ಕೊಲೆಯಾರೋಪಿಯಾಗಿದ್ದಾನೆ..
ಅಂದ್ಹಾಗೆ ವಿಕಾಸ್ ಮತ್ತು ಮನೀಶ್ ಇಬ್ಬರೂ ಜೈಲಿಯಲ್ಲಿ ಪರಿಚಯವಾಗಿದ್ದವರು.. ವಿಕಾಸ್ ಅತ್ಯಾಚಾರ ಪ್ರಕರಣವೊಂದ್ರಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದ.. ವಿಕಾಸ್ ಪೆಟ್ರೋಲ್ ಪಂಪ್ ಲೂಟಿ ಪ್ರಕರಣದಲ್ಲಿ ಅಂದರ್ ಆಗಿದ್ದ.. ಈ ಇಬ್ಬರೂ ಜೈಲಿನಲ್ಲಿ ಪರಿಚಿತರಾಗಿ ನಂತರ ಸ್ನೇಹಿತರಾಗಿದ್ದರು.. ಇಬ್ಬರೂ ಸಹ ಜಾಮೀನಿನ ಮೇಲೆ ಹೊರಬಂದಿದ್ದರು..
ಆ ನಂತರ ವಿಕಾಸ್ ಪದೇ ಪದೇ ಮನೀಶ್ ಮನೆಗೆ ಭೇಟಿ ನೀಡ್ತಿದ್ದಾಗ , ಮನೀಶ್ ತಂಗಿಯ ಮೇಲೆ ಲವ್ ಆಗಿದೆ.. ಆಕೆಗೂ ಅವನ ಮೇಲೆ ಪ್ರೇಮಾಂಕುರವಾಗಿದ್ದು, 10 ತಿಂಗಳ ಹಿಂದೆ ವಿಕಾಸ್ ಹಾಗೂ ಮನೀಶ್ ತಂಗಿ ಓಡಿ ಹೋಗಿ ಮದುವೆಯಾಗಿದ್ದರು..
ಇದರಿಂದ ಆಕ್ರೋಶಗೊಂಡಿದ್ದ ವಿಕಾಸ್ ಮನೀಶ್ ಗೆ ಕೊಲೆ ಬೆದರಿಕೆಯೊಡ್ಡಿದ್ದ. ಆದರೆ ಇದ್ಯಾವುದಕ್ಕೂ ಲೆಕ್ಕಿಸದೇ ಮನೀಶ್ ದೆಹಲಿ ಸಾರಿಗೆಯ ಕೆಲಸದಲ್ಲಿ ತೊಡಗಿದ್ದನು. ಇತ್ತೀಚೆಗೆ ಚುರುವಿಗೆ ಬಂದಿದ್ದ ಮನೀಶ್ ಶನಿವಾರ ರಾತ್ರಿ ವಿಕಾಸ್ನನ್ನು ಭೇಟಿಯಾಗಿದ್ದಾನೆ.
ಈ ವೇಳೆ ವಿಕಾಸ್ ಮನೀಶ್ ಹತ್ಯೆಗೈದಿದ್ದಾನೆ. ಸದ್ಯ ಆರೋಪಿ ವಿಕಾಸ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.