ಅತ್ಯಾಚಾರಕ್ಕೆ ವಿರೋಧ – ಬಿಸಿ ಚಾಕುವಿನಿಂದ ಮಹಿಳೆಯ ಕಣ್ಣು ಸುಟ್ಟ ಪಾಪಿಗಳು..!
ಉತ್ತರಪ್ರದೇಶ : ಅಪರಾಧಗಳ ಆಗರ ಉತ್ತರಪ್ರದೇಶದಲ್ಲಿ ಮನುಕುಲ ತಲೆ ತಗ್ಗಿಸುವಂತಹ ಮತ್ತೊಂದು ಹೇಯ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರು ಭಯದಲ್ಲಿ ಬದುಕುವಂತಾಗಿದೆ.. ದಿನಬೆಳಗಾದ್ರೆ , ಮಕ್ಕಳು ಅಪ್ರಾಪ್ತರು , ಮಹಿಳೆಯರು , ವಿವಾಹಿತರು , ವೃದ್ಧೆಯರ ಮೇಲೂ ಕಾಮ ಪಿಸಾಚಿಗಳು ಅಟ್ಟಹಾಸ ಮೆರೆಯುತ್ತಾ ಇದ್ದಾರೆ.. ಆದ್ರೂ ಇಂತಹ ಪ್ರಕರಣಗಳು ಮಾತ್ರ ಕಡಿಮೆಯಾಗದೇ ದಿನೇ ದಿನೇ ಹೆಚ್ಚಾಗ್ತಲೇ ಇರೋದು ಅಲ್ಲಿನ ಕಾನೂನು ವ್ಯವಸ್ಥೆ ಯಾವ ರೀತಿ ಇರಬಹುದು ಎಂಬುದನ್ನ ತೋರಿಸುತ್ತೆ. ಯೋಗಿ ರಾಜ್ಯದಲ್ಲಿ ಇದೀಗ ಮತ್ತೊಂದು ನಾಚಿಕೆಗೇಡು ಎನಿಸುವಂತಹ ಘಟನೆ ಬೆಳಕಿಗೆ ಬಂದಿದೆ..
ಲಲಿತಪುರದಲ್ಲಿ ರಾತ್ರಿ ತರಕಾರಿ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದ ಮಹಿಳೆಯ ಮೇಲೆ ಇಬ್ಬರು ಕಾಮುಕರು ಮೃಗಗಳಂತೆ ಎರಗಿಬಿದ್ದಿದ್ದಾರೆ.. ಲೈಂಗಿಕವಾಗಿ ಕಿರುಕುಳ ನೀಡಲಾರಂಭಿಸಿದ್ದಾರೆ.. ಈ ವೇಳೆ ಮಹಿಳೆ ವಿರೋಧ ವ್ಯಕ್ತಪಡಿಸಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ.. ಇದದರಿಂದ ಅವಮಾನಿತರಾದ ಕಿಡಿಗೇಡಿಗಳು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.. ಚಾಕುವನ್ನ ಕಾಯಿಸಿ ಆಕೆಯ ಕಣ್ಣಿಗೆ ಚುಚ್ಚಿದ್ದಾರೆ.. ಬಳಿಕ ಪೊಲೀಸ್ ಜೀಪ್ ನ ಸದ್ದು ಕೇಳಿ ಪರಾರಿಯಾಗಿದ್ದಾರೆ..
ಆದ್ರೆ ದುರಾದೃಷ್ಟವಶಾತ್ ಪೊಲೀಸರು ಅಲ್ಲಿಗೆ ಬಾರದೇ ಬೇರೆಡೆಗೆ ಹೊರಟಿದ್ದಾರೆ.. ಹೀಗಾಗಿ ಮುಂಜಾನೆ ವರೆಗೂ ಮಹಿಳೆ ಅಲ್ಲಿಯೇ ನೋವಿನಲ್ಲಿ ಕಾಲ ಕಳೆದಿದ್ದಾರೆ.. ಬೆಳಗ್ಗೆ ಆಕೆಯ ನಾದಿನಿ ಅಲ್ಲಿಗೆ ಬಮದು ನೋಡಿ ಕೂಡಲೇ ಪೊಲೀಸರಿಗೆ ತಿಳಿಸಿದ್ದು, ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇನ್ನೂ ಮಹಿಳೆಯ ಮನೆಯವರು ಆರೋಪ ಮಾಡಿರುವ ಪ್ರಕಾರ ಆರೋಪಿಗಳಿಬ್ಬರೂ ಪುಡಾರಿಗಳಾಗಿದ್ದು, ಆ ಪ್ರದೇಶದಲ್ಲಿ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.. ಅಷ್ಟೇ ಅಲ್ಲ ಇದೇ ಆರೋಪಿಗಳು ಕಳೆದ 3 ತಿಂಗಳ ಹಿಂದೆಯೂ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾಗಿ ಆರೋಪಿಸಿದ್ದಾರೆ..