ನಕಲಿ ವಜ್ರದ ಕಲ್ಲು ತೋರಿಸಿ ಕೋಟಿ ಕೋಟಿ ಪಂಗನಾಮ ಹಾಕುವ ಯತ್ನ – ಖತರ್ನಾಕ್ ಗ್ಯಾಂಗ್ ಅರೆಸ್ಟ್
ಚಿಕ್ಕಬಳ್ಳಾಪುರ : ನಕಲಿ ವಜ್ರದ ಕಲ್ಲು ತೋರಿಸಿ ಅಸಲಿ ವಜ್ರದ ಕಲ್ಲು ಅಂತ ನಂಬಿಸಿ ಕೋಟಿಗಟ್ಟಲೆ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಸಿಕ್ಕಿಬಿದ್ದಿದೆ. ಇದೇ ರೀತಿ ವ್ಯಕ್ತಿಯೊಬ್ಬನಿಗೆ 6 ಕೋಟಿ ರೂಪಾಯಿ ತರುವಂತೆ ಹೇಳಿದ್ದು, ಕೋಟ್ಯಾಂತರ ರೂಪಾಯಿಗಳನ್ನ ಹೊಡೆಯುವ ಹುನ್ನಾರ ಮಾಡಿಕೊಂಡಿದ್ದ ಖದೀಮರನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಯಲಗುರ್ಕಿ ಗ್ರಾಮದ ಬಳಿ 5 ಜನ ಆರೋಪಿಗಳ ಬಂಧಿಸಲಾಗಿದೆ. ಈ ಖದೀಮರು ನಮ್ಮಬಳಿ ಆರು ಕೋಟಿ ಬೆಲೆಬಾಳುವ ವಜ್ರದ ಕಲ್ಲು ಇರುವುದಾಗಿ ನಂಬಿಸಿ ವಂಚನೆಗೆ ಯತ್ನಿಸಿದ್ದಾರೆ. ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಗ್ರಾಮದ ಪ್ರಶಾಂತ ಎಂಬಾತ ವಂಚಕರ ಜಾಲದ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಬಳಿಕ ಆರೋಪಿಗಳ ಸೆರೆಗೆ ಬಲೆ ಬೀಸಿದ್ದ ಪೊಲೀಸರ ಕೈಗೆ ಖತರ್ನಾಕ್ ಗ್ಯಾಮಘ ನ ಸದಸ್ಯರು ತಗ್ಲಾಕಿಕೊಂಡಿದ್ದಾರೆ. ಮಂಜುನಾಥ್ , ಹೊನ್ನಪ್ಪ , ಚಿಕ್ಕರೆಡ್ಡಿ , ಶಿವಣ್ಣ, ಅರವಿಂದ್ ಬಂಧಿತರಾಗಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.