“ಬೆಕ್ಕಿಗೆ ಯಾರೋ ಒಬ್ಬರು ಘಂಟೆ ಕಟ್ಟಬೇಕಿತ್ತು, ಕಟ್ಟಿದ್ದೀನಿ” – ಇಂದ್ರಜಿತ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹೊಟೆಲ್ ಸಿಬ್ಬಂದಿ ಮೇಲೆ ಹಲ್ಲೆಯ ಗಂಭೀರ ಆರೋಪ ಮಾಡಿ ಬಳಿಕ ದರ್ಶನ್ ವಿರುದ್ಧ ಮಾಧ್ಯಮದವರ ಮುಂದೆ ವಾಗ್ದಾಳಿ ನಡೆಸುತ್ತಾ ಇರುವ ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಇದೀಗ ದರ್ಶನ್ ಅಭಿಮಾನಿಗಳು ರೌಡಿಗಳಿಂದ ಕೊಲೆ ಬೆದರಿಕೆ ಬರುತ್ತಿರೋದಾಗಿ ದೂರು ಸಲ್ಲಿಸಿದ್ದಾರೆ..
ಈ ನಡುವೆ ನಟ ದರ್ಶನ್ ಈ ಬಗ್ಗೆ ಪೊಲೀಸ್ ಕಮಿಷನರ್ಗೆ ದೂರು ನೀಡಿರುವ ಇಂದ್ರಜಿತ್ ಲಂಕೇಶ್ ದರ್ಶನ್ ಬೆಂಬಲಿಗರಿಂದ ಪ್ರತಿ 30 ಸೆಕೆಂಡ್ ಗೆ ಬೆದರಿಕೆ ಕರೆಗಳು, ಅಶ್ಲೀಲ ಸಂದೇಶ, ಅಶ್ಲೀಲ ವಿಡಿಯೋಗಳು ನನ್ನ ಮೊಬೈಲ್ ಬರುತ್ತಿವೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ. ಪೊಲೀಸ್ ಕಮಿಷನರ್ ಬಳಿ ದೂರು ನೀಡಿದ ಬಳಿಕ ಮಾತನಾಡಿದ ಇಂದ್ರಜಿತ್ ಲಂಕೇಶ್, ಈ ಬಗ್ಗೆ ನನಗೆ ಬರುತ್ತಿರುವ ದೂರವಾಣಿ ಕರೆಯ ನಂಬರ್, ಆಶ್ಲೀಲ ಪದಗ ಬಳಸಿ ಕಳುಹಿಸಿದ ಸಂದೇಶಗಳನ್ನು ತೋರಿಸಿದ್ದೇನೆ. ಬಳಿಕ ಅವರು ಸೌತ್ ಈಸ್ಟ್ ಡಿಸಿಪಿ ಜೊತೆ ಮಾತನಾಡಿ, ಕೋರಮಂಗಲ ಡಿಸಿಪಿ ಬಳಿ ದೂರು ನೀಡಲು ಹೇಳಿದ್ದಾರೆ. ಇಂಥವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಬೆದರಿಕೆ ಕರೆಗಳು, ಟ್ರೋಲ್, ಅಶ್ಲೀಲ ಭಾಷೆ ಅಶ್ಲೀಲ ಚಿತ್ರ ಮತ್ತು ಯಾರು ಇದರ ಹಿಂದೆ ಇದರೆ ಎನ್ನುವ ತನಿಖೆ ಮಾಡಲಿ ಗೊತ್ತಾಗುತ್ತೆ. ಅಶ್ಲೀಲ ಭಾಷೆ ಉಪಯೋಗಿಸಿ ಸಂದೇಶ ಕಳುಹಿಸುತ್ತಿದ್ದಾರೆ. ಯಾರಾದರೊಬ್ಬರು ಬೆಕ್ಕಿಗೆ ಘಂಟೆ ಕಟ್ಟಬೇಕಿತ್ತು ನಾನು ಕಟ್ಟಿದ್ದೀನಿ ಎಂದಿದ್ದಾರೆ ಇಂದ್ರಜಿತ್. ಅಲ್ಲದೇ ಡ್ರಗ್ಸ್ ವಿಚಾರವಾಗಿಯೂ ಮಾತನಾಡಿರೋ ಇಂದ್ರಜಿತ್, ಡ್ರಗ್ಸ್ ವಿಚಾರದಲ್ಲಿ ಏನು ಕಿತ್ತಾಕಿದ್ದಾರೆ ಅಂತ ಮಾತನಾಡುತ್ತಿದ್ದರು. ಆ ಬಗ್ಗೆ ಮಾತನಾಡಿದೇವು. ನೀವು ನೀಡಿದ ಮಾಹಿತಿಯಿಂದ ಕೋಟ್ಯಾಂತರ ರೂ. ಡ್ರಗ್ಸ್ ವಶಕ್ಕೆ ಪಡೆದಿರುವುದಾಗಿ ಹೇಳಿದರು. ಇದಕ್ಕೆ ನಾನು ಶುಭಾಶಯ ಹೇಳಿದೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.
ದರ್ಶನ್ ಹಿಂಬಾಲಕರಿಂದ ಕೊಲೆ ಬೆದರಿಕೆ – ಇಂದ್ರಜಿತ್ ದೂರು