Fire disaster ಹೊಸಕೋಟೆ ಸಮೀಪದ ಮೇಡಹಳ್ಳಿಯಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಮಾರ್ಚ್ 26 ರಂದು ಅಗ್ನಿ ಅವಘಡ ಸಂಭವಿಸಿತ್ತು ಈ ಅವಗಡದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಾರ್ಮಿಕರು ಮೃತಪಟ್ಟಿದ್ದು, ಸರಧಿ ಸಾಲಿನಂತೆ ಒಬ್ಬರಂತೆ ಒಬ್ಬರು ಸಾವನ್ನಪ್ಪಿದ್ದು ಇಗ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಉಳಿದ ಓರ್ವನ ಸ್ಥಿತಿ ಗಂಭೀರವಾಗಿದೆ.
ಮೇಡಹಳ್ಳಿ ಗ್ರಾಮದಲ್ಲಿ ಕಾರ್ಖಾನೆ ಕೆಲಸಕ್ಕೆಂದು ಬಂದಿದ್ದ ಬಿಹಾರ ಹಾಗೂ ಉತ್ತರಪ್ರದೇಶದ 8 ಮಂದಿಗೆ ವಾಸವಿರಲು ಗುತ್ತಿಗೆದಾರರು ಶೆಡ್ವೊಂದನ್ನು ನೀಡಿ ಅವರಿಗೆ ಅಡುಗೆ ಮಾಡಿಕೊಳ್ಳಲು ಗ್ಯಾಸ್ಸ್ಟವ್ ಕೂಡ ನೀಡಿಲಾಗಿತ್ತು.
ಆದರೆ ಮಾರ್ಚ್ 26 ರಂದು ರಾತ್ರಿ ಅಡುಗೆ ಮಾಡಿಕೊಂಡು ಊಟ ಮಾಡಿ ಮಲಗಿದ್ದರು ೮ ಕಾರ್ಮಿಕರು ಗ್ಯಾಸ್ ಸೋರಿಕೆಯಾಗಿತ್ತು ಇದನ್ನರಿಯದ ಕಾರ್ಮಿಕನೊರ್ವ ಶೌಚಾಲಯಕ್ಕೆ ಹೋಗಲೆಂದು ಎದ್ದು ಲೈಟ್ ಆನ್ ಮಾಡಿದ್ದಾನೆ. ಆದರೆ ಶೆಡ್ನೊಳಗೆ ಗ್ಯಾಸ್ದ ತುಂಬಿದ್ದ ಕಾರಣ ಗ್ಯಾಸ್ ಸ್ಫೋಟಗೊಂಡ ಶೆಡ್ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಜಮಾಯಿಸಿದ ಸ್ಥಳೀಯರು ಗಾಯಗೊಂಡ ಕಾರ್ಮಿಕರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರು ಒಬ್ಬರ ಬಳಿಕ ಒಬ್ಬರು ಸಾವನ್ನಪ್ಪುತ್ತಾ ಬಂದಿದ್ದು, ಶುಕ್ರವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.
8 ಮಂದಿಯ ಪೈಕಿ 7 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ನಿಕುನ್ ಅನ್ಸಾರಿ ಎಂಬ ಉಳಿದ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ಅಮಿತ್, ಸನೋಜ್, ನೀರಜ್, ಸೋಮಯ್ ಗುಪ್ತಾ, ತಿಲಕ್ ರಾಮ್, ಲಕ್ಷ್ಮಣ್ ಮತ್ತು ಚಂದ್ರಭಾನ್ ಎಂದು ಗುರುತಿಸಲಾಗಿದೆ.
ಇತರ ರಾಜ್ಯಗಳ ಕಾರ್ಮಿಕರನ್ನು ಕೆಲಸಕ್ಕೆ ಕರೆಯಿಸಿಕೊಂಡು ಅವರಿಗೆ ವಾಸಿಸಲು ಸರಿಯಾದ ವ್ಯವಸ್ಥೆ ಕಲ್ಪಿಸದೇ ಕೊಡುವ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಡ್ಯಾಮೇಜ್ ಆಗಿದ್ದ ಪೈಪ್ನಿಂದ ಗ್ಯಾಸ್ ಸೋರಿಕೆಯಾಗಿ ಅಪಘಾತ ಸಂಭವಿಸಿದೆ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಮಿಕರು ವಾಸಿದಲು ಸಣ್ಣ ಶೆಡ್ ನೀಡಿದ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.