Foreign Minister Jaishankar : ಪಾಕಿಸ್ತಾನಕ್ಕೆ ಭಾರತ ಸಹಾಯ ಮಾಡುತ್ತಾ ?? ವಿದೇಶಾಂಗ ಮಂತ್ರಿ ಹೇಳಿದ್ದೇನು ??
ಸರ್ಕಾರದ ಬೊಕ್ಕಸವನ್ನ ಖಾಲಿಮಾಡಿಕೊಂಡಿರುವ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ದೇಶದ ಮಾಧ್ಯಮ ವರದಿಗಳ ಪ್ರಕಾರ ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಮೂರು ಶತಕೋಟಿ ಡಾಲರ್ಗಿಂತ ಕಡಿಮೆಯಿದೆ. ಈ ಮೊತ್ತ 15 ದಿನಗಳ ಆಮದು ಮಾಡಿಕೊಳ್ಳಲು ಸಾಕಾಗುತ್ತದೆ.
ಇದೇ ರೀತಿ ಮತ್ತೊಂದು ನೆರೆಯ ರಾಷ್ಟ್ರವಾದ ಶ್ರೀಲಂಕಾ ಮೊದಲು ತೀವ್ರ ಆರ್ಥಿಕ ಬಿಕ್ಕಟ್ಟನ್ನ ಎದುರಿಸಿತ್ತು. ಆ ಸಮಯದಲ್ಲಿ, ಭಾರತ ಕಳೆದ ವರ್ಷ ಶ್ರೀಲಂಕಾಕ್ಕೆ 4.5 ಶತಕೋಟಿ ಯುಎಸ್ ಡಾಲರ್ ಆರ್ಥಿಕ ನೆರವು ನೀಡಿತು. ಅಲ್ಲದೆ ಶ್ರೀಲಂಕಾಗೆ ಭಾರತ ಎಲ್ಲ ರೀತಿಯ ನೆರವು ನೀಡಿತ್ತು. ಇದೇ ರೀತಿ ಪಾಕಿಸ್ತಾನಕ್ಕೂ ಭಾರತ ಸಹಾಯ ಮಾಡುತ್ತಾ ಎಂಬ ಪತ್ರಕರ್ತರ ಪ್ರಶ್ನೆಗೆ ಜೈಶಂಕರ್ ಹೇಳಿದ್ದು ಹೀಗೆ…
ANI ಸುದ್ದಿಸಂಸ್ಥೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವಾಗಿ ಮಾತನಾಡಿದ ಜೈ ಶಂಕರ್ “ಪಾಕಿಸ್ತಾನದ ಭವಿಷ್ಯವನ್ನ ಅದರ ಸ್ವಂತ ಕ್ರಮಗಳು ಮತ್ತು ಚುನಾವಣೆಗಳು ನಿರ್ಧರಿಸುತ್ತವೆ . ಆರ್ಥಿಕ ಸಂಕಷ್ಟದಿಂದ ಹೊರಬರುವುದು ಹೇಗೆ ಎಂಬುದು ಪಾಕಿಸ್ತಾನದ ಮೇಲೆ ಅವಲಂಬಿತವಾಗಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ ಗೆ ಭಾರತದ ನೆರವನ್ನ ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ ಸಂಪೂರ್ಣ ಭಿನ್ನವಾಗಿದೆ” ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಯಾರೂ ಇದ್ದಕ್ಕಿದ್ದಂತೆ ಮತ್ತು ಅನಗತ್ಯವಾಗಿ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವುದಿಲ್ಲ. ಪಾಕಿಸ್ತಾನದೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಭಾರತ ನೆರವಿನಲ್ಲಿ ಭಾಗವಹಿಸಲು ಸಿದ್ಧವಾಗಿದ್ದರೂ, ನಮ್ಮ ನೆರೆಹೊರೆಯವರು ಅದನ್ನು ಒದಗಿಸುವ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಪಾಕಿಸ್ತಾನ ಭಾರತದಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯನ್ನ ಪ್ರೋತ್ಸಾಹಿಸುತ್ತಿದೆ ಮತ್ತು ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಕಷ್ಟದ ಸಂದರ್ಭಗಳಲ್ಲಿ ನೆರೆಯ ರಾಷ್ಟ್ರಗಳಿಗೆ ಸಹಾಯ ಮಾಡಲು ಭಾರತ ಸದಾ ಸಿದ್ಧ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
Indian External Affairs Minister Jaishankar Made Key Comments On Pakistan’s Financial Crisis