Sameer Wankhede: ಮಾಜಿ NCB ಅಧಿಕಾರಿ ಸಮೀರ್ ವಾಂಖೆಡೆಗೆ ಟ್ವೀಟರ್ ನಲ್ಲಿ ಕೊಲೆ ಬೆದರಿಕೆ…
ಮಾಜಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿ ಸಮೀರ್ ವಾಂಖೆಡೆಗೆ ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಆಗಸ್ಟ್ 14 ರಂದು ಸಮೀರ್ ವಾಂಖೆಡೆ ಅವರಿಗೆ ಅಮನ್ ಹೆಸರಿನ ಟ್ವಿಟರ್ ಖಾತೆಯಿಂದ ಬೆದರಿಕೆ ಬಂದಿದೆ. “ನೀವು ಏನು ಮಾಡಿದ್ದೀರಿ ಎಂದು ನಿಮಗೆ ತಿಳಿದಿದೆಯೇ? ಅದಕ್ಕೆ ನೀವು ಸೂಕ್ತ ಬೆಲೆ ತೆರಲೇಬೇಕು…ನಾವು ನಿನ್ನನ್ನು ಸಾಯಿಸುತ್ತೇವೆ” (ಮರಣ ಬೆದರಿಕೆ) ಎಂದು ಟ್ವೀಟ್ ಮಾಡಿದ್ದಾರೆ. ಈ ಬೆದರಿಕೆ ಟ್ವೀಟ್ ಬಗ್ಗೆ ದೂರು ನೀಡಲು ಸಮೀರ್ ವಾಂಖೆಡೆ ಗೋರೆಗಾಂವ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ವಾಂಖೆಡೆ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಬೆದರಿಕೆ ಟ್ವೀಟ್ ಸ್ವೀಕರಿಸಿದ ಟ್ವಿಟ್ಟರ್ ಖಾತೆಗೆ ಯಾವುದೇ ಫಾಲೋವರ್ಸ್ ಗಳಿಲ್ಲ ಮತ್ತು ಸಮೀರ್ ವಾಂಖೆಡೆಗೆ ಬೆದರಿಕೆ ಹಾಕಲು ಈ ಖಾತೆಯನ್ನು ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಂಬೈ ಎನ್ಸಿಬಿಯ ಮಾಜಿ ವಲಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಸಮೀರ್ ವಾಂಖೆಡೆ ಅಕ್ಟೋಬರ್ 2021 ರಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ಸುದ್ದಿ ಮಾಡಿದ್ದರು. ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಜೊತೆಗೆ 19 ಮಂದಿಯನ್ನ ಬಂಧಿಸಿದ್ದರು.
ಡ್ರಗ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಾಕುಲ್ಪ್ರೀತ್ ಸಿಂಗ್ ಅವರಂತಹ ಹೈ ಪ್ರೊಫೈಲ್ ಸೆಲೆಬ್ರಿಟಿಗಳನ್ನು ಸಮೀರ್ ವಾಂಖೆಡೆ ವಿಚಾರಣೆ ನಡೆಸಿರುವುದು ಸಂಚಲನ ಮೂಡಿಸಿತ್ತು.








