ಭಾರತದ ವಿದೇಶಾಂಗ ನೀತಿಗೆ ಭೇಷ್ ಎಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾರತದ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು “ಭೇಷ್” ಎಂದು ಹೊಗಳಿದ್ದಾರೆ. ಎರಡೂ ದೇಶಗಳು ಏಕಕಾಲಕ್ಕೆ ಸ್ವಾತಂತ್ರ್ಯ ಪಡೆದಿದ್ದರೂ ದೇಶದ ಜನರ ಹಿತಕ್ಕಾಗಿ ಭಾರತ ಸದೃಢ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಾಹೋರ್ನಲ್ಲಿ ಬೃಹತ್ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ “ಉಕ್ರೇನ್-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವ ಬಗ್ಗೆ ಅಮೆರಿಕ ದೃಢ ನಿಲುವು ತಳೆದಿದೆ, ಬಿಟ್ಟುಕೊಟ್ಟಿಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರು ಸ್ಲೋವಾಕಿಯಾದ ‘ಬ್ರಾಟಿಸ್ಲಾವಾ ಫೋರಂ’ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭಾಷಣದ ವೀಡಿಯೊ ಕ್ಲಿಪ್ ಅನ್ನು ಪ್ಲೇ ಮಾಡಿದ್ದಾರೆ.
ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಗೆ ಅಮೆರಿಕದ ಒತ್ತಡದ ನಡುವೆಯೂ ಭಾರತ ದೃಢವಾಗಿ ನಿಂತಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಭಾರತ ಮತ್ತು ಪಾಕಿಸ್ತಾನಕ್ಕೆ ಏಕಕಾಲದಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಆದರೆ ವಿದೇಶಾಂಗ ನೀತಿಯಲ್ಲಿ ಭಾರತವು ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ದೃಢ ನಿಲುವು ಅನುಸರಿಸುತ್ತಿದೆ.
ರಷ್ಯಾದಿಂದ ತೈಲ ಖರೀದಿಸದಂತೆ ಅಮೆರಿಕ ಆದೇಶ ಹೊರಡಿಸಿದೆ. ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಅಮೆರಿಕ ಹೇಳಿದಾಗ ಭಾರತ ಏನು ಮಾಡಿದೆ ನೋಡಿ ಎಂದು ವಿಡಿಯೋ ಹಾಕಿದ್ದಾರೆ. ಹೇಳಲು ನೀನು ಯಾರು? ಎಂದು ಪಶ್ಚಿಮ ದೇಶಗಳನ್ನ ಜೈಶಂಕರ್ ಖಂಡಿಸಿದ್ದಾರೆ. ಯುರೋಪ್ ರಷ್ಯಾದಿಂದ ಅನಿಲವನ್ನು ಖರೀದಿಸುತ್ತಿದೆ. ದೇಶದ ಅಗತ್ಯಕ್ಕೆ ಅನುಗುಣವಾಗಿ ನಾವು ತೈಲ ಖರೀದಿಸುತ್ತೇವೆ ಎಂದು ಜೈಶಂಕರ್ ಹೇಳಿರುವ ವಿಡಿಯೋವನ್ನ ಇಮ್ರಾನ್ ಖಾನ್ ಹಂಚಿಕೊಂಡಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಬಗ್ಗೆ ನಮ್ಮ ಸರ್ಕಾರ ಕನಿಷ್ಠ ಚರ್ಚೆ ನಡೆಸಿದ್ದು, ಈಗ ಅಮೆರಿಕದ ಒತ್ತಡಕ್ಕೆ ಮಣಿದಿದೆ ಎಂದು ಇಮ್ರಾನ್ ಶೆಬಾಜ್ ಷರೀಫ್ ಸರ್ಕಾರವನ್ನು ಟೀಕಿಸಿದ್ದಾರೆ.