ಮಡಿಕೇರಿ: ಕಾವೇರಿನದಿ ಕೊಡಗು ಜಿಲ್ಲೆಯ ಗಡಿ ಭಾಗವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಮೈಸೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ನದಿಗಳನ್ನು ದಾಟುವುದೇ ದೊಡ್ಡ ಹರಸಾಹಸವಾಗಿತ್ತು, ಈಗಲೂ ಕೂಡ ಮಲೆನಾಡು ಹಾಗು ಗಿರಿಜನರಿಗೆ ನದಿಗಳನ್ನು ದಾಟಲು ತೂಗು ಸೇತುವೆಗಳೇ ಆಸರೆಯಾಗಿದೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಮೈಸೂರು-ಕೊಡಗು ಜಿಲ್ಲೆಯ ಗಡಿಪ್ರದೇಶ ಕಣಿವೆ, ನಿಸರ್ಗಧಾಮ ಮತ್ತು ತೆಪ್ಪದಕಂಡಿಯಲ್ಲಿ ಒಂದು ಭಾಗದಿಂದ ಮತ್ತೊಂದೆಡೆಗೆ ತೆರಳಬೇಕು ಎಂದಾಗ ದೋಣಿ ಇಲ್ಲವೇ ತೆಪ್ಪಗಳನ್ನು ಅನಿವಾರ್ಯವಾಗಿ ಅವಲಂಭಿಸಬೇಕಿತ್ತು. ಸರ್ಕಾರ ಅಳೆದು ತೂಗಿ ಪರದಾಡುತ್ತಿದ್ದ ಸಂದರ್ಭ ಕಾಂಕ್ರಿಟ್ ಸೇತುವೆ ಬದಲು ಕಾಲು ಸೇತುವೆ(ತೂಗು ಸೇತುವೆ) ಮಾಡುವುದು ಸೂಕ್ತ ಎಂದು ನಿರ್ಧಾರಕ್ಕೆ ಬರಲಾಯಿತು.


ಆದರೆ, ಅಂತಹ ಸೇತುವೆ ನಿರ್ಮಾಣ ಮಾಡುವ ಸಾಮರ್ಥ್ಯದ ಎಂಜಿನಿಯರ್ ಬೇಕಲ್ಲವೇ. ದಕ್ಷಿಣಕನ್ನಡ ಅರಂತೋಡಿನಲ್ಲಿ ಪಯಸ್ವಿನಿ ನದಿಗೆ ನಿರ್ಮಾಣವಾದ ಸೇತುವೆಯ ಎಂಜಿನಿಯರ್ ಅನ್ನು ಹುಡುಕುತ್ತಿದ್ದ ಸಂದರ್ಭ ಸಿಕ್ಕಿದ್ದು ಪದ್ಮಶ್ರೀ ಗಿರೀಶ್ ಭಾರದ್ವಾಜ್.
ಹೌದು, ತೂಗು ಸೇತುವೆಗಳ ಜನಕ ದೇಶದ ಬಹುತೇಕ ಗ್ರಾಮಾಂತರ ಪ್ರದೇಶದ ಮುಖ್ಯ ಪಟ್ಟಣ, ನಗರಕ್ಕೆ ರಸ್ತೆಗಳೇ ಇಲ್ಲದೆ ಇರುವ ಪ್ರದೇಶಗಳಲ್ಲಿ ಇಲ್ಲಿವರೆಗೆ ಬರೋಬ್ಬರಿ 128 ತೂಗು ಸೇತುವೆ ನಿರ್ಮಾಣ ಮಾಡಿರುವ ಗಿರೀಶ್ ಭಾರದ್ವಾಜ್ ಜೀವನಾಧರಿತ ಸಿನಿಮಾ “ಸೇತುಬಂಧ” ಕನ್ನಡ ಮತ್ತು ಹಿಂದಿಯಲ್ಲಿ “ದಿ ಬ್ರಿಡ್ಜ್ ಮ್ಯಾನ್” ಹೆಸರಿನಲ್ಲಿ ಮೂಡಿ ಬರಲಿದೆ.
“ದಿ ಬ್ರಿಡ್ಜ್ ಮ್ಯಾನ್” ಯಾರು ಗೊತ್ತಾ..!
ಮೂಲತಃ ದಕ್ಷಿಣಕನ್ನಡದ ಸುಳ್ಯದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಗಿರೀಶ್ ಭಾರದ್ವಾಜ್, ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಮುಗಿಸಿದರು. ತನ್ನ ವಿದ್ಯಾಭ್ಯಾಸ ತನ್ನ ಗ್ರಾಮಕ್ಕೂ ಉಪಯೋಗವಾಗಲಿ ಎನ್ನ್ನುವ ಕಾರಣಕ್ಕೆ ಮೊಟ್ಟ ಮೊದಲ ಬಾರಿಗೆ 1989ರಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಅರಂಬೂರು ಎನ್ನುವಲ್ಲಿ ಸೇತುವೆ ನಿರ್ಮಾಣ ಮಾಡಿ ಯಶಸ್ವಿಯಾದರು.

ಇದರ ನಂತರ ಗಿರೀಶ್ ಭಾರದ್ವಾಜ್ ಹಿಂತಿರುಗಿ ನೋಡಲೇ ಇಲ್ಲ. ಬಳಿಕ ರಾಜ್ಯದ ಬಹುತೇಕ ಕಡೆ, ಕೇರಳದಲ್ಲಿ 10, ಆಂಧ್ರಪ್ರದೇಶದ ನಕ್ಸಲ್ ಪೀಡಿತ ಪ್ರದೇಶ, ಓಡಿಸಾ ಸೇರಿದಂತೆ 129 ಸೇತುವೆ ಪೂರ್ಣಗೊಳಿಸಿರುವ ಇವರ ಕೈಯಲ್ಲಿ ಇನ್ನಷ್ಟು ಪ್ರಾಜೆಕ್ಟ್ ಗಳಿವೆ.

ಇದೀಗ ದೇಶದ ವಿಶೇಷ ವ್ಯಕ್ತಿಗಳ ಜೀವನಾಧರಿತ ಸಿನಿಮಾವಾಗಿರುವ ಹೆಂಡತಿಯ ಪ್ರೀತಿಗಾಗಿ ಬೆಟ್ಟವನ್ನು ಕೊರೆದ `ಮಾಂಜಿ ದಿ ಮೌಂಟೇನ್ ಮ್ಯಾನ್’ ಮಾದರಿಯಲ್ಲಿ ಗಿರೀಶ್ ಭಾರಧ್ವಾಜ್ ಕುರಿತ ಚಿತ್ರ ಸಹ ಮೂಡಿ ಬರಲಿದೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಚಿತ್ರಕಥೆ ಮತ್ತು ನಿರ್ದೇಶನವನ್ನು ಕನ್ನಡದಲ್ಲಿ `ಹೊಂಸ್ಟೇ ಹಾರರ್’ ಚಿತ್ರ ಮಾಡಿದ್ದ ಸಂತೋಷ್ ಕೊಂಡೆಕೇರಿ ಮಾಡುತ್ತಿದ್ದರೆ, ಶಾಂತಕುಮಾರ್ ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದ್ದು, ನಂತರದ ಚಿತ್ರೀಕರಣ ಸುಳ್ಯದಲ್ಲೇ ನಡೆಯಲಿದೆ. ಇದಕ್ಕಾಗಿ ಸಾಕಷ್ಟು ಕಲಾವಿದರ ಅವಶ್ಯಕತೆ ಇರುವುದರಿಂದ, ಪ್ರತ್ಯಕ್ಷವಾಗಿ ಕಾಮಗಾರಿಯಲ್ಲಿ ಪಾಲ್ಗೊಂಡ ಕಾರ್ಮಿಕರು, ಗ್ರಾಮಸ್ಥರನ್ನು ಬಳಸಿಕೊಳ್ಳುವ ಆಲೋಚನೆ ಚಿತ್ರತಂಡಕ್ಕಿದೆ.
ವಿಶೇಷ ವರದಿ: ಕೊಂಪುಳೀರ ಗಿರಿಧರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








