ಒಂದು ಚಿತ್ರದಿಂದ ತಾನೋರ್ವ ಲಕ್ಷ್ಮೀಬಾಯಿ ಎಂದು ಭಾವಿಸಿದರೆ ಹೇಗೆ ? – ಕಂಗನಾ ಕಾಲೆಳೆದ ಪ್ರಕಾಶ್ ರಾಜ್
ಬೆಂಗಳೂರು, ಸೆಪ್ಟೆಂಬರ್13: ಕೆಲವು ಸಮಯಗಳಿಂದ ಮೂಲೆ ಸೇರಿದ್ದ ನಟ ಕಮ್ ರಾಜಕಾರಣಿ ಪ್ರಕಾಶ್ ರಾಜ್ ನಟಿ ಕಂಗನಾ ರಣಾವತ್ರನ್ನು ಕಾಲೆಳೆಯುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.
ಜಸ್ ಆಸ್ಕಿಂಗ್,
ಒಂದು ಚಿತ್ರದಿಂದ ತಾನೋರ್ವ ಲಕ್ಷ್ಮೀಬಾಯಿ ಎಂದು ಕಂಗನಾ ಭಾವಿಸಿಕೊಂಡಿದ್ದರೆ,
ದೀಪಿಕಾಳ ಪದ್ಮಾವತಿ, ಹೃತಿಕ್ ಅವರ ಅಕ್ಬರ್, ಶಾರೂಕ್ ಅವರ ಅಶೋಕ, ಅಜಯ್ ದೇವಗನ್ ಅವರ ಭಗತ್ ಸಿಂಗ್, ಆಮೀರ್ ಖಾನ್ ಅವರ ಮಂಗಲ ಪಾಂಡೆ ಮತ್ತು ವಿವೇಕ್ ಅವರ ಮೋದಿ ಜಿ… ಏನು? ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ನಟಿ ಕಂಗನಾ ರಣಾವತ್ ಬಾಲಿವುಡ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಮರಕ್ಕೆ ನಿಂತಿದ್ದು, ಅಭಿಮಾನಿಗಳು ಆಕೆಯನ್ನು ಮಣಿಕಾರ್ಣಿಕ ಚಿತ್ರದ ರಾಣಿ ಲಕ್ಷ್ಮಿ ಭಾಯಿ ಪಾತ್ರಕ್ಕೆ ಹೋಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್ ವ್ಯಂಗ್ಯಭರಿತ ಟ್ವೀಟ್ ಮೂಲಕ ನಟಿ ಕಂಗನಾರನ್ನು ಲೇವಡಿ ಮಾಡಿದ್ದಾರೆ.
ನಟಿ ಕಂಗನಾ ಕಾಲೆಳೆದ ಪ್ರಕಾಶ್ ರಾಜ್https://t.co/OrKNrOUnCN
— Saaksha TV (@SaakshaTv) September 13, 2020