IND vs Sri : ಭಾರತ – ಶ್ರೀಲಂಕಾ ನಡುವೆ ಇಂದು ಮೊದಲ ಏಕದಿನ ಕದನ
ಟಿ20 ಸರಣಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂದು ಶ್ರೀಲಂಕಾ ತಂಡವನ್ನು ಮೊದಲ ಏಕದಿನ ಪಂದ್ಯದಲ್ಲಿ ಎದುರಿಸಲಿದೆ.
ಮಂಗಳವಾರ ಬರ್ಸಾಪಾರಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಗೆ ತಾರಾ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ತಂಡಕ್ಕೆ ಮರಳಿದ್ದು ತಂಡಕ್ಕೆ ಆನೆ ಬಲ ಬಂದಿದೆ.
ತಂಡಕ್ಕೆ ಅಗ್ರ 5 ಬ್ಯಾಟರ್ಗಳನ್ನು ಆಯ್ಕೆ ಮಾಡುವುದು ಸವಾಲಿನ ಕನಸಾಗಿದೆ. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಖಾಯಂ ಬ್ಯಾಟರ್ಗಳಾಗಿದ್ದಾರೆ.
ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡುವುದು ಕಠಿಣ ನಿರ್ಧರವಾಗಲಿದೆ.
ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಶುಭಮನ್ ಗಿಲ್ ಕಣಕ್ಕಿಳಿಯಲಿದ್ದಾರೆ.
ಕಳೆದ ವರ್ಷ ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ನಲ್ಲಿ 15 ಇನ್ನಿಂಗ್ಸ್ಗಳಿಂದ 724 ರನ್ ಕಲೆ ಹಾಕಿ 55.69 ಸರಾಸರಿ ಹೊಂದಿದ್ದರು.
ಮಧ್ಯಮ ಓವರ್ಗಳಲ್ಲಿ ಸ್ಟ್ರೈಕ್ ಬದಲಾವಣೆ ಮಾಡುವುದು ಮತ್ತು ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ತಾಕತ್ತು ಹೊಂದಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಸೋಟಕ ಬ್ಯಾಟಿಂಗ್ ಮಾಡಿದ್ದ ಸೂರ್ಯ ಕುಮಾರ್ ಯಾದವ್ 50 ಓವರ್ ಆವೃತ್ತಿಗಳಲ್ಲಿ ಬಳಸಿಕೊಳ್ಳಲು ಭಾರತ ತಂಡ ನಿರ್ಧರಿಸಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿ ಮೊಹ್ಮದ್ ಶಮಿ ತಂಡಕ್ಕೆ ಮರಳಿದ್ದು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಮೊಹ್ಮದ್ ಸಿರಾಜ್, ಆರ್ಷದೀಪ್ ಮತ್ತು ಉಮ್ರಾನ್ ಮಲ್ಲಿಕ್ ಹೊರಗುಳಿಯಲಿದ್ದಾರೆ.ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಮಿಂಚಬೇಕಿದೆ.
ಶ್ರೀಲಂಕಾ ನಾಯಕ ಸದುನ್ ಶನಕಾ ಮೊನ್ನೆ ಟಿ20 ಸರಣಿಯಲ್ಲಿ 124 ರನ್ ಹೊಡೆದು ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ.
ಲಂಕಾ ತಂಡ ಅಗ್ರ ಬ್ಯಾಟಿಂಗ್ ಬಲಿಷ್ಠವಾಗಿ ಕಂಡುಬಂದಿದ್ದು ಆರಂಭಿಕ ಬ್ಯಾಟರ್ ಪಾಥುಮ್ ನಿಸ್ಸಾಂಕಾ ಉತ್ತಮ ಆರಂಭ ಕೊಡಬೇಕಿದೆ.
ನಿಸ್ಸಂಕಾ 11 ಏಕದಿನ ಪಂದ್ಯಗಳಿಂದ 491 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಚರಿತ ಅಸಲಂಕಾ ರನ್ ಮಳೆ ಸುರಿಸಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ಜೆಫ್ರೆ ವಾಂಡೆರ್ಸೆ ತಂಡದಲ್ಲಿದ್ದು ಏಕದಿನ ಕ್ರಿಕೆಟ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. 7 ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದಾರೆ.