Kodagu | ಪ್ರಕೃತಿ ವಿಕೋಪ ತಜ್ಞರಿಂದ ಕೊಡಗಿಗೆ ಅನ್ಯಾಯ – ಕೆ.ಜಿ ಬೋಪಯ್ಯ
ಕೊಡಗು : ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತು, ಕೊಡಗಿನ ಪ್ರಕೃತಿ ವಿಕೋಪದ ನಷ್ಟದ ಬಗ್ಗೆ ಅವಲೋಕಿಸುವ ಪ್ರಕೃತಿ ವಿಕೋಪ ತಜ್ಞರು ಕೊಡಗಿನ ನೈಜ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ.
ಇದರ ಪರಿಣಾಮ ಸಾಕಷ್ಟು ಮಂದಿಗೆ ಅನ್ಯಾಯವಾಗಿದೆ ಎಂದು ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರು ಕಿಡಿಕಾರಿದ್ದಾರೆ.
ಕೊಡಗಿನಲ್ಲಿ ಸಮರ್ಪಕ ಅಧ್ಯಾಯನ ನಡೆದಿಲ್ಲ, ನಾಮಕಾವಸ್ತೆಗೆ ಸ್ಥಳ ಪರಿಶೀಲನೆ ನಡೆಸಿ ವರದಿ ತಯಾರಿಸಿದ್ದು ಇದನ್ನು ತಿರಸ್ಕರಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸದೆ ಭೋಗರ್ಭ ತಜ್ಞರು ಸಿದ್ದಪಡಿಸಿರುವ ವರದಿ ಅವೈಜ್ನಾನಿಕ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
