ದುಬೈನಲ್ಲಿ ಬೌಲರ್ಗಳು ಬ್ಯಾಟ್ಸ್ಮನ್ಗಳನ್ನು ಆಟ ಆಡಿಸಿದರು. ಮೊದಲು ಸನ್ರೈಸರ್ಸ್ ಬ್ಯಾಟರ್ಗಳು ರನ್ಗಳಿಸಲು ಪರದಾಡಿದರೆ, ನಂತರ ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ಗಳ ಸರದಿ.
119 ರನ್ಗಳನ್ನು ಚೇಸ್ ಮಾಡಬೇಕಾದರೆ ಕೆಕೆಆರ್ಗೆ ಬರೋಬ್ಬರಿ 19.4 ಓವರ್ ಬೇಕಾಗಿತ್ತು. ಹಾಗೂ ಹೀಗೂ ಪಂದ್ಯ ಗೆದ್ದ ಕೆಕೆಆರ್ ಪ್ಲೇ-ಆಫ್ ಆಸೆಯನ್ನು ಜೀವಂತ ಇಟ್ಟುಕೊಂಡಿದೆ.
ಟಾಸ್ ಗೆದ್ದ ಕೆಕೆಆರ್ ಸನ್ರೈಸರ್ಸ್ ಹೈದ್ರಾಬಾದ್ ತಂಡನವನ್ನು ಬ್ಯಾಟಿಂಗ್ಗೆ ಇಳಿಸಿತು. ಟಿಮ್ ಸೌಥಿ ವೃದ್ಧಿಮಾನ್ ಸಾಹಾ ಖಾತೆ ತೆರೆಯುವ ಮುನ್ನವೇ ಎಲ್ಬಿ ಬಲೆಗೆ ಬೀಳಿಸಿದರು.
ಶಿವಂ ಮಾವಿ ಜೇಸನ್ ರಾಯ್ ಅಟಕ್ಕೆ ಕಡಿವಅಣ ಹಾಕಿದರು. ಕೇನ್ ವಿಲಿಯಮ್ಸನ್ ಮತ್ತು ಪ್ರಿಯಮ್ ಗರ್ಗ್ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಈ ಹಂತದಲ್ಲಿ 26 ರನ್ಗಳಿಸಿದ್ದ ವಿಲಿಯಮ್ಸನ್ ರನ್ ಕದಿಯುವ ಆತುರದಲ್ಲಿ ರನೌಟ್ ಆದರು.
ಅಭಿಷೇಕ್ ಶರ್ಮಾ 6 ರನ್ಗಳಿಸಿದ್ದಾಗ ಶಕೀಬ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. 21 ರನ್ಗಳಿಸಿದ್ದ ಗರ್ಗ್ ವರುಣ್ ಚಕ್ರತವರ್ತಿ ಎಸೆತದಲ್ಲಿ ಔಟಾದರು.
ಅಬ್ದುಲ್ ಸಮದ್ ಒಂದು ಕಡೆ ಕ್ರೀಸ್ಗೆ ಅಂಟಿಕೊಂಡಿದ್ದರೂ, ಜೇಸನ್ ರಾಯ್ ಮತ್ತು ರಶೀದ್ ಖಾನ್ ಹೆಚ್ಚು ರನ್ಗಳಿಸಲಿಲ್ಲ. ಸಮದ್ 18 ಎಸೆತಗಳಲ್ಲಿ 25 ರನ್ಗಳಿಸಿ ಕೊನೆಯ ಓವರ್ನಲ್ಲಿ ಔಟಾದರು.
20 ಓವರುಗಳಲ್ಲಿ ಹೈದ್ರಅಬಾದ್ 8 ವಿಕೆಟ್ ಕಳೆದುಕೊಂಡು 115 ರನ್ಗಳಿಸಿತ್ತು. ಕೆಕೆಆರ್ ಬೌಲಿಂಗ್ನಲ್ಲಿ ಸೌಥಿ, ಮಾವಿ, ವರುಣ್ ಚಕ್ರವರ್ತಿ ಎರಡೆರಡು ವಿಕೆಟ್ ಹಂಚಿಕೊಂಡರು.
ಚೇಸಿಂಗ್ ಮಾಡಲು ಹೊರಟ ಕೆಕೆಆರ್ಗೆ ವೆಂಕಟೇಶ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ಎಂದಿನ ಆರಂಭ ತಂದುಕೊಡಲಿಲ್ಲ. ಜೇಸನ್ ಹೋಲ್ಡರ್ 8 ರನ್ಗಳಿಸಿದ್ದ ಅಯ್ಯರ್ ವಿಕೆಟ್ ಕಬಳಿಸಿದರು. ದಾಳಿಗಿಳಿದ ರಶೀದ್ ಖಾನ್ ರಾಹುಲ್ ತ್ರಿಪಾಠಿಯ ಆಟಕ್ಕೆ ಕಡಿವಾಣ ಹಾಕಿದರು.
ನಿತಿಶ್ ರಅಣಾ ಮತ್ತು ಶುಭ್ಮನ್ ಗಿಲ್ ನಿಧಾನವಾಗಿ ರನ್ಗಳಿಸಲು ಆರಂಭಿಸಿದರು. ಟಾರ್ಗೆಟ್ ದೊಡ್ಡದಾಗಿಲ್ಲದ್ದರಿಂದ ಇಬ್ಬರ ಮೇಲೂ ಒತ್ತಡ ಇರಲಿಲ್ಲ. ಈ ನಡುವೆ ಗಿಲ್ ಅರ್ಧಶತಕದ ಗಡಿ ಕೂಡ ದಾಟಿದರು.
ಗಿಲ್ ಮತ್ತು ರಾಣಾ ನಡುವೆ 55 ರನ್ಗಳ ಜೊತೆಯಾಟ ಬಂದಿತ್ತು. ಕೆಕೆಆರ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಅನ್ನುವ ಲೆಕ್ಕಾಚಾರ ಇತ್ತು. ಆದರೆ 10 ಫೋರ್ ನೆರವಿನಿಂದ 57 ರನ್ಗಳಿಸಿದ್ದ ಗಿಲ್ ಸಿದ್ಧಾರ್ಥ್ ಕೌಲ್ ಎಸೆತದಲ್ಲಿ ಹೋಲ್ಡರ್ಗೆ ಕ್ಯಾಚ್ ನೀಡಿದರು.
ಇವರ ಬೆನ್ನಹಿಂದೆಯೇ ಹೋಲ್ಡರ್ 25 ರನ್ಗಳಿಸಿದ್ದ ರಾಣಾ ವಿಕೆಟ್ ಹಾರಿಸಿದರು. ಕೆಕೆಆರ್ ಕೊಂಚ ಗಲಿಬಿಲಿಗೊಂಡರೂ ದಿನೇಶ್ ಕಾರ್ತಿಕ್ ಅಜೇಯ 18 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
19.4 ಓವರುಗಳಲ್ಲಿ ಕೆಕೆಆರ್ ಗುರಿ ಮುಟ್ಟಿ ಪ್ಲೇ-ಆಫ್ ಆಸೆ ಜೀವಂತವಾಗಿ ಇಟ್ಟುಕೊಂಡಿತು. ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಕೆಕೆಆರ್ ಸುಲಭವಾಗಿ ಪ್ಲೇ-ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.








