ತಮಿಳುನಾಡಿನ ವೆಲ್ಲೂರಿನಲ್ಲಿನ ಜಲಕಂಠೇಶ್ವರ ದೇವಾಲಯ ಕ್ರಿ.ಶ 1550ರಲ್ಲಿ ವಿಜಯನಗರ ಅರಸರ ಆಳ್ವಿಕೆಯಲ್ಲಿ (VIjayanagara empire) ಸ್ವಯಂಭು ಶಿವಲಿಂಗ ಉದ್ಭವವಾಗಿತ್ತು. ಈ ಶಿವಲಿಂಗ ದೇವಾಲಯ ಜಲಕಂಠೇಶ್ವರ ದೇವಾಲಯ ಎಂದು ಪ್ರಸಿದ್ಧವಾಗಿತ್ತು. ಈಗ ಈ ದೇವಾಲಯ ವಿವಾದದ ಕೇಂದ್ರವಾಗಿದೆ.
1981ರಲ್ಲಿ ದೇವಸ್ಥಾನದಲ್ಲಿ ಅಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಂದಾದಗ ಪ್ರಾಚ್ಯ ವಸ್ತು ಇಲಾಖೆಗೆ ಅನುಮತಿ ಸಿಕ್ಕಿರಲಿಲ್ಲ. ಆ ಕಾರಣ ಗೌಪ್ಯವಾಗಿ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇತ್ತೀಚೆಗೆ ತಮಿಳುನಾಡು ಸರ್ಕಾರವು ದೇವಸ್ಥಾನ ನಡೆಸಲು ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯದಿಂದ ಅನುಕೂಲಕರ ತೀರ್ಪು ಬಂದ ನಂತರ, ದೇವಾಲಯದ ಆಡಳಿತ ನೋಡಿಕೊಳ್ಳುತ್ತಿರುವ ಜಲಕಂಠೇಶ್ವರ ಧರ್ಮ ಸ್ಥಾಪನಾ ಟ್ರಸ್ಟ್ನ ಸದಸ್ಯರು ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದೆ.
ಜಲಕಂಠೇಶ್ವರ ಧರ್ಮ ಸ್ಥಾಪನಾ ಟ್ರಸ್ಟ್ನ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ದೇಗುಲ ಮತ್ತು ಕೊಠಡಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೋದ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ತಂಡದ ಸದಸ್ಯರನ್ನು ನಿರ್ಬಂಧಿಸಲಾಗಿದೆ.