ಮುಂಬೈ ದಾಳಿಯ ಸಂಚುಕೋರರು ಇಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ. ಪಾಕ್ ನೆಲದಲ್ಲೇ ಜಾವೇದ್ ಅಖ್ತರ್ ಕಿಡಿ….
26/11 ಮುಂಬೈ ದಾಳಿಯ ಸಂಚುಕೋರರು ಇಲ್ಲಿ (ಪಾಕಿಸ್ತಾನ) ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಭಾರತದ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಪಾಕಿಸ್ತಾನದ ಕಾರ್ಯಕ್ರಮವೊಂದರಲ್ಲಿಯೇ ಕಿಡಿಕಾರಿದ್ದಾರೆ. ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಖ್ತರ್ ಲಾಹೋರ್ ತಲುಪಿದ್ದರು. ಜಾವೇದ್ ಅಖ್ತರ್ ಅವರ ಹೇಳಿಕೆಯನ್ನ ನಟಿ ಕಂಗನಾ ರಾಣಾವತ್ ಶ್ಲಾಘಿಸಿದ್ದಾರೆ
ಕಾರ್ಯಕ್ರಮದ ವೇಳೆ ಪಾಕಿಸ್ತಾನದ ಪತ್ರಕರ್ತರೊಬ್ಬ “ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಬಂದಿದ್ದೀರಿ… ನೀವು ಹಿಂತಿರುಗಿದಾಗ, ಪಾಕಿಸ್ತಾನಿಗಳು ಒಳ್ಳೆಯ ಜನರು ಎಂದು ಹೇಳುತ್ತೀರ ?? ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಜಾವೇದ್ ಅಖ್ತರ್ ನಾವು ಒಬ್ಬರನ್ನೊಬ್ಬರು ದೂಷಿಸಬಾರದು. ಇದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಮುಂಬೈ ಮೇಲೆ ಹೇಗೆ ದಾಳಿ ಮಾಡಲಾಯಿತು ಎಂಬುದನ್ನು ನೋಡಿದ್ದೇವೆ. ಆ ಭಯೋತ್ಪಾದಕರು ನಾರ್ವೆ ಅಥವಾ ಈಜಿಪ್ಟ್ನಿಂದ ಬಂದವರಲ್ಲ. ಆ ಭಯೋತ್ಪಾದಕರು ನಿಮ್ಮ ದೇಶದಲ್ಲಿಯೇ ಸ್ವಚ್ಛಂದವಾಗಿ ಓಡಾಡುತ್ತಿದ್ದಾರೆ. ಇದರ ವಿರುದ್ಧ ಭಾರತೀಯರು ದೂರು ನೀಡಿದ್ದಾರೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಭಾರತದಲ್ಲಿ ನುಸ್ರತ್ ಫತೇ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರಿಗಾಗಿ ನಾವು ದೊಡ್ಡ ಕಾರ್ಯಕ್ರಮಗಳನ್ನ ಮಾಡಿದ್ದೇವೆ, ಆದರೇ ಲತಾ ಮಂಗೇಶ್ಕರ್ ಅವರ ಯಾವುದೇ ಕಾರ್ಯಕ್ರಮವನ್ನ ನಿಮ್ಮ ದೇಶದಲ್ಲಿ ಮಾಡಲಾಗಿಲ್ಲ ಎಂದು ಅಖ್ತರ್ ಅವರು ಹೇಳಿದ್ದಾರೆ.
Javed Akhtar : Mumbai attack conspirators are roaming freely here. Javed Akhtar spark in Pakistan….