ಜೆಡಿಎಸ್ ಅವರನ್ನ ನೋಡಿದ್ರೆ ಪಾಪ ಅನಿಸುತ್ತೆ : ಸುಮಲತಾ
ಮಂಡ್ಯ : ನನ್ನ ನಡೆ ನನ್ನ ಜನಕ್ಕೆ ಗೊತ್ತು. ಲಕ್ಷಾಂತರ ಜನರು ನನಗೆ ಮತಕೊಟ್ಟು ಗೆಲ್ಲಿಸಿದ್ದಾರೆ, ಅವರಿಗೆ ಉತ್ತರ ಕೊಡ್ತೀನಿ. ಜೆಡಿಎಸ್ ನಾಯಕರನ್ನ ನೋಡಿದರೇ ಪಾಪ ಎನಿಸುತ್ತದೆ ಎಂದು ಮಂಡ್ಯ ಜೆಡಿಎಸ್ ನಾಯಕ ವಿರುದ್ಧ ಸಂಸದೆ ಸುಮಲತಾ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಮಗೆ ಯಾಕೆ ಅಷ್ಟು ಭಯ, ಟೆನ್ಷನ್..? ನಾನು ಅಕ್ರಮದ ಬಗ್ಗೆ ಮಾತನಾಡಿದರೆ ನಿಮಗೆ ಯಾಕೆ ಇಷ್ಟು ಫಿಲಿಂಗ್..? ಅವರು ಏನು ಬೇಕಾದರೂ ಮಾತನಾಡಲಿ, ಅವರ ಬಗ್ಗೆ ಮಾತನಾಡುವ ಲೆವೆಲ್ ನನ್ನದ್ದಲ್ಲ. ರವೀಂದ್ರ ಶ್ರೀಕಂಠಯ್ಯಗೆ ಚಿಕ್ಕ ವಯಸ್ಸು ಅವರು ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಜೆಡಿಎಸ್ ಸಾವಿರಾರು ಜನರನ್ನ ಹುಟ್ಟು ಹಾಕಿರಬಹುದು ಆದ್ರೆ ನಿಮ್ಮ ಈ ಮಾತುಗಳಿಂದ ಬೇಸತ್ತು ಹಲವರು ಬೇರೆ ಪಾರ್ಟಿ ಸೇರಿದ್ದಾರೆ ಎಂದು ಹೇಳಿದರು.
ಇನ್ನು ಅಂಬರೀಶ್ ಮುಂದೆ ದೊಡ್ಡ ದೊಡ್ಡ ನಾಯಕರು ಕೈಕಟ್ಟಿ ನಿಂತಿದ್ದನ್ನ ನಾನು ನೋಡಿದ್ದೇನೆ. ನಿಮ್ಮಿಂದ ನಾನು ಕಲಿಯುವುದು ಬೇಕಿಲ್ಲ.
ನನ್ನ ಸಮಯ ವ್ಯರ್ಥ ಮಾಡ್ತಿದ್ದೀರಾ. ಇಷ್ಟೋತ್ತಿಗೆ ಹಲವು ಅಭಿವೃದ್ಧಿ ಕೆಲಸ ಮಾಡುತ್ತಿದೆ. ನಾನು ಇಲ್ಲಿನ ಸಂಸದೆ ನಾನು ಕೆಆರ್ ಎಸ್ಗೆ ಆದ್ರೂ ಹೋಗ್ತೀನಿ, ಅಕ್ರಮ ಗಣಿ ಜಾಗಕ್ಕಾದರೂ ಹೋಗ್ತೀನಿ. ನಿಮಗ್ಯಾಕೆ ಭಯ..? ನನ್ನ ಜೊತೆ ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸಿ. ನೀವು ಇಲ್ಲಿನ ಶಾಸಕ ಅಷ್ಟೇ, ನಿಮ್ಮ ಅಕ್ಕನ ಜಾಗದಲ್ಲಿ ನಿಂತು ಹೇಳ್ತಿದ್ದೀನಿ ಇಂತಹ ನಡವಳಿಕೆ ಬಿಡಿ. ಇಲ್ಲಾ ಮುಂದೆ ಶಾಸಕ ಆಗುವುದು ಕಷ್ಟ ಆಗುತ್ತೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ನಾನು ಹೆದರಿಸಿ ಹೋರಾಡಿದವಳು. ಸಿಎಂ ಮಗ, 8ಜನ ಎಂಎಲ್ ಗಳ ವಿರುದ್ಧ ಹೋರಾಡಿ ಗೆದ್ದವಳು. ನಮ್ಮ ಬಳಿ ಮಿಸೈಲ್ಸ್ ಇವೆ, ಬಾಂಬ್ ಇವೆ ಅಂತೀರಾ.? ಇದು ಜನಪ್ರತಿನಿಧಿಗಳು ಆಡುವ ಮಾತಾ..? ನಿಮ್ಮ ಮಾತುಗಳಿಂದ ಜನ ಮೋಸ ಹೋಗ್ತಾರೆ ಅಂದುಕೊಂಡಿದ್ದರೆ ಚಾನ್ಸೆ ಇಲ್ಲಾ, ಚಾನ್ಸೆ ಇಲ್ಲಾ ಎಂದು ಹೇಳಿದರು.