ಬಿಜೆಪಿ ಸರ್ಕಾರ ಇರೋವಾಗ ದೇವಾಲಯ ಒಡೆದಿದ್ದು ಸರಿಯಲ್ಲ : ಈಶ್ವರಪ್ಪ K S Eshwarappa saaksha t v
ಬೆಂಗಳೂರು : ದೇವಾಲಯಗಳ ತೆರವು ವಿಚಾರ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿ ಸರ್ಕಾರ ಇರೋ ಸಂದರ್ಭದಲ್ಲಿ ದೇವಾಲಯ ಒಡೆದಿದ್ದು ಸರಿಯಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಜಿಲ್ಲಾಧಿಕಾರಿ ದೇವಸ್ಥಾನ ಒಡೆದು ಹಾಕಿದ್ದು ತಪ್ಪೆ ಎಂದು ಅಭಿಪ್ರಾಯಪಟ್ಟ ಈಶ್ವರಪ್ಪ, ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ.
ರಾಜ್ಯದಲ್ಲಿ ಯಾವುದೇ ದೇವಾಲಯಗಳನ್ನು ಒಡೆಯಬಾರದು. ಇವತ್ತು ರಾಜ್ಯದಲ್ಲಿ ದೇವಾಲಯಗಳ ತೆರವು ಭೀತಿ ಎದುರಾಗಿದೆ ಎಂದು ಆತಂಕ ಹೊರಹಾಕಿದರು.
ಇದೇ ವೇಳೆ ದೇವಾಲಯಗಳ ತೆರವಿಗೆ ಕಾಂಗ್ರೆಸ್ ವಿರೋಧದ ಬಗ್ಗೆ ಮಾತನಾಡಿ, ಕಾಂಗ್ರೆಸ್ ನಾಯಕರು ಹೇಳಿದ್ದರಲ್ಲೂ ಯಾವುದೇ ತಪ್ಪಿಲ್ಲ.
ಅವರಿಗೆ ಈಗಲಾದರೂ ದೇವಾಲಯಗಳನ್ನು ಉಳಿಸಬೇಕು ಎನಿಸಿದೆಯಲ್ಲ ಎಂದು ವ್ಯಂಗ್ಯವಾಡಿದರು.