TOP 10 News : ಹಿಜಾಬ್ ವಿವಾದ , ಹೈಕೋರ್ಟ್ ವಿಚಾರಣೆ ಅಪಡೇಟ್ಸ್ ಸೇರಿದಂತೆ ದಿನದ ಪ್ರಮುಖ ಸುದ್ದಿಗಳು
ಹಿಜಾಬ್ ವಿವಾದ , ಹೈಕೋರ್ಟ್ ನಲ್ಲಿ ನಾಳೆಗೆ ವಿಚಾರಣೆ ಮುಂದೂಡಿಕೆ
ಹಿಜಾಬ್ ಧರಿಸಲು ಅವಕಾಶ ನೀಡಲು ರಾಜ್ಯ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ಕೂಡ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಆದ್ರೆ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ..
ವಿಶ್ವಭಾರತಿಗೆ ಕನ್ನಡದಾರತಿ ಕಣವಿ ಇನ್ನಿಲ್ಲ
ಕನ್ನಡದ ಜನಪ್ರಿಯ ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ ಅವರು ನಿಧನರಾಗಿದ್ದಾರೆ. 93 ವರ್ಷದ ಚನ್ನವೀರ ಕಣವಿ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರನ್ನು ಜನವರಿ 14 ರಂದು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಅಜಿತ್ ದೋವಲ್ ಮನೆಗೆ ನುಗ್ಗಲು ಯತ್ನಿಸಿದ ಅಪರಿಚಿತ
ದೆಹಲಿಯ ಅತ್ಯಂತ ಸುರಕ್ಷಿತ ಪ್ರದೇಶವಾದ ಲುಟಿಯನ್ಸ್ ವಲಯದಲ್ಲಿ ವಾಸಿಸುವ ಎನ್ಎಸ್ಎ ಅಜಿತ್ ದೋವಲ್ ಮನೆಗೆ ಅಪರಿಚತ ನುಗ್ಗಲು ಯತ್ನಿಸಿರುವ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ ಭದ್ರತಾ ಪಡೆಗಳ ಕಣ್ಣು ತಪ್ಪಿಸಿ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ದೆಹಲಿ ಪೊಲೀಸರ ವಿಶೇಷ ತಂಡ ಆತನನ್ನ ವಿಚಾರಣೆ ನಡೆಸುತ್ತಿದೆ.
ರಸ್ತೆ ಅಪಘಾತದಲ್ಲಿ ದೀಪ್ ಸಿಧು ನಿಧನ
2021 ರ ಗಣರಾಜ್ಯೋತ್ಸವದಂದು ನಡೆದ ರೈತ ಪ್ರತಿಭಟನೆ ವೇಳೆ, ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ನಂತರ ಬೆಳಕಿಗೆ ಬಂದಿದ್ದ, ಪಂಜಾಬಿ ನಟ ದೀಪ್ ಸಿಧು ಮಂಗಳವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕೋವಿಡ್ ಅಪ್ ಡೇಟ್ಸ್
ಕಳೆದ 24 ಗಂಟೆಗಳಲ್ಲಿ 30,615 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 4,27,23,558ಕ್ಕೆ ಏರಿಕೆಯಾಗಿದೆ. ಇನ್ನೂ ಕಳೆದ 24 ಗಂಟೆಯಲ್ಲಿ 82,988 ಜನರು ಗುಣಮುಖರಾಗಿದ್ದಾರೆ. ಸಕ್ರೀಯ ಪ್ರಕರಣಗಳು 3,70,240 ಲಕ್ಷ ಇದ್ದು, ಕಳೆದ 24 ಗಂಟೆಯಲ್ಲಿ 514 ಜನರು ಸಾವನಪ್ಪಿದ್ದಾರೆ..
ಬಪ್ಪಿ ಲಹಿರಿ ನಿಧನ
ಖ್ಯಾತ ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ ಆಗಿದ್ದ ಬಪ್ಪಿ ಲಹಿರಿ ಅವರು ತಮ್ಮ 69ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ… ಲಹರಿ ಅವರು ಬಹಳ ದಿನಗಳಿಂದ ಅನೇಕ ಆರೋಗ್ಯದಿಂದ ಬಳಲುತ್ತಿದ್ದರು.. ಮುಂಬೈನ ಆಸ್ಪತ್ರೆಯಲ್ಲಿ ಅವರು ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಡಿಸ್ಚಾರ್ಜ್ ಆಗಿದ್ದವರು ಮಂಗಳವಾರ ಮತ್ತೆ ಆರೋಗ್ಯ ಹದಗೆಟ್ಟು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ರು… ಆದ್ರೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ…
ಡಿ ಬಾಸ್ ಹುಟ್ಟುಹಬ್ಬ : ಕ್ರಾಂತಿ ಟೀಸರ್ ಗಿಫ್ಟ್….
ಡಿ ಬಾಸ್ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ. ಈ ಪ್ರಯುಕ್ತ ಕ್ರಾಂತಿ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ. ಮ್ಯೂಸಿಕ್ ಡೈರೆಕಕ್ಟರ್ ವಿ ಹರಿಕೃಷ್ಣ ನ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಕ್ರಾಂತಿ. ಸಮಾಜಕ್ಕೆ ಸಂದೇಶ ಕೊಡುವ ಜೊತೆಗೆ ಮಾಸ್ ಎಲಿಮೆಂಟಗಳು ಈ ಚಿತ್ರದಲ್ಲಿರಲಿವೆ. ದರ್ಶನ್ ಹುಟ್ಟು ಹಬ್ಬದಂದೆ ಕ್ರಾಂತಿ ಮಾಸ್ ಲಿಕ್ ಅಂಡ್ ಡೈಲಾಗ್ ರಿವೀಲ್ ಆಗಿದೆ.
ನಟ ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ
ಬೆಂಗಳೂರು : ಅನಾರೋಗ್ಯದಿಂದಾಗಿ ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ.
ವಯೋಸಹಜ ಕಾಯಿಲೆಯಿಂದ ಬಳುತ್ತಿರುವ ರಾಜೇಶ್ ಅವರು ಉಸಿರಾಟದ ತೊಂದರೆಯಿಂದ ಬಳಲ್ತಿದ್ದರು… ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು… ಆದ್ರೀಗ ಅವರ ಆರೊಗ್ಯ ಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು , ರಾಜೇಶ್ ಅವರ ಆರೋಗ್ಯದಲ್ಲಿ ಇಂದು ಚೇತರಿಕೆ ಕಂಡಿದೆ.
ವಿರಾಟ್ ಕೊಹ್ಲಿ ದಾಖಲೆ ಬರಿತಾರಾ
ಟಿ20 ಕ್ರಿಕೆಟ್ ಆರಂಭವಾಗುತ್ತಿದ್ದಂತೆ ದಾಖಲೆಗಳ ಮಾತು ಶುರುವಾಗಿದೆ. ವೆಸ್ಟ್ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಹೊಸ ವಿಶ್ವದಾಖಲೆ ರಚನೆಯಾಗುವುದು ಖಚಿತ. ಆದರೆ ವಿಶ್ವ ದಾಖಲೆ ಮಾಡುವವರು ಯಾರು ಅನ್ನುವ ಪ್ರಶ್ನೆ ಇದೆ. ವಿರಾಟ್ ಕೊಹ್ಲಿ ದಾಖಲೆ ಬರಿತಾರಾ, ಇಲ್ಲ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ದಾಖಲೆಯ ಸರದಾರನಾಗುತ್ತಾರಾ ಅನ್ನುವ ಕುತೂಹಲವಿದೆ.
ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ ಶ್ರೇಯಸ್ ಅಯ್ಯರ್
ಐಪಿಎಲ್ನ ಕೆಲ ಫ್ರಾಂಚೈಸಿಗಳಲ್ಲಿ ತಂಡವನ್ನು ಮುನ್ನಡೆಸಲು ನಾಯಕರ ಬಗ್ಗೆ ಚರ್ಚೆ ಆಗುತ್ತಿದೆ. ಮಾಜಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಮುಂದಿನ ಸೀಸನ್ಗೆ ತನ್ನ ನಾಯಕ ಯಾರು ಅನ್ನುವುದನ್ನು ಅಂತಿಮಗೊಳಿಸಿದೆ. ಐಪಿಎಲ್ ಆಟಗಾರರ ಮೆಗಾ ಆಕ್ಷನ್ನಲ್ಲಿ ಕೆಕೆಆರ್ ಖರೀದಿ ಮಾಡಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ.










