ಸಾಯಬೇಡ್ರಿ ಅಂತೀವಿ.. ನಾವು ಸಾಯ್ತೀವಿ ಅಂದ್ರೆ ನಿಮ್ಮಿಷ್ಟ : ಈಶ್ವರಪ್ಪ
ಶಿವಮೊಗ್ಗ : ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಾಳೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದಕ್ಕೆ ಸಚಿವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಟೈಮಲ್ಲಿ ಪಾದಯಾತ್ರೆ ಮಾಡಿ ಸಾಯ್ಬೇಡ್ರಿ ಅಂತ ಹೇಳ್ತೀವಿ, ಇಲ್ಲ ನಾವು ಸಾಯ್ತೀವಿ ಅಂದ್ರೆ ಏನ್ ಮಾಡೋಣ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ಯಾವುದೇ ಪ್ರತಿಭಟನೆಗೆ ನಿರ್ಬಂಧ ಹೇರಲಾಗಿದೆ.
ಆದ್ರೂ ಕಾಂಗ್ರೆಸ್ ನವರು ಪಾದಯಾತ್ರೆ ಮಾಡ್ತೀವಿ ಅಂದ್ರೆ ಏನು ಹೇಳೋದು ಎಂದು ಈಶ್ವರಪ್ಪ ಅಸಮಾಧಾನ ಹೊರಹಾಕಿದರು.
ನೀವು ಪಾದಯಾತ್ರೆ ಹೋದರೆ ನಿಮ್ಮ ಜೊತೆ ಕಾರ್ಯಕರ್ತರೂ ಬರುತ್ತಾರೆ. ಅದಕ್ಕೆ ದಯಮಾಡಿ ಹೋರಾಟ ಕೈಬಿಡಿ.
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನಸಭೆ ಚುನಾವಣೆ ಬರುತ್ತೆ ಅಂತ ಶೋ ಮಾಡಲು ನಿಮ್ಮೂಂದಿಗೆ ಜನ ಬಂದೇ ಬರ್ತಾರೆ.
ನೀವು ಸಾಯೋದ್ಯಾಕೆ? ನಿಮ್ಮವರನ್ನು ಯಾಕೆ ಸಾಯಿಸುತ್ತೀರಿ ಎಂದು ವ್ಯಂಗ್ಯವಾಡಿದರು.