ಅಪ್ಪು ನಗುವಿನಿಂದಲೇ ವ್ಯಕ್ತಿತ್ವದಿಂದಲೇ ರಾಜ್ಯ ಗೆದ್ದ ರಾಜಕುಮಾರ – NTR
ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿದೆ. 67 ನೇ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಯಾಗಿ ನಟ ರಜನಿಕಾಂತ್ ಮತ್ತು ಜೂನಿಯರ್ ಎನ್ ಟಿ ಆರ್ ಹಾಜರಿದ್ದರು. ಈ ವೇಳೆ ನಟ ಜೂನಿಯರ್ ಎನ್ ಟಿ ಆರ್ ಮಾತನಾಡಿ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸುತ್ತ ಕನ್ನಡದಲ್ಲೇ ಮಾತು ಶುರು ಮಾಡಿದರು. “ವ್ಯಕ್ತಿತ್ವದಿಂದ, ನಗುವಿನಿಂದ, ಅಹಂಕಾರವಿಲ್ಲದೇ ಯಾರಾದರೂ ಈ ರಾಜ್ಯದ ಸಕಲ ಹೃದಯವನ್ನು ಗೆದ್ದಿದ್ದಾರೆ ಅಂದರೆ, ಅದು ಪುನೀತ್ ರಾಜ್ ಕುಮಾರ್ ಎಂದು ಅಪ್ಪುನನ್ನು ಗುಣಗಾನ ಮಾಡಿದರು.
ಪುನೀತ್ ಒಬ್ಬ ಸೂಪರ್ ಸ್ಟಾರ್, ಗ್ರೇಟ್ ಸ್ಟಾರ್, ಅದ್ಭುತ ಪತಿ, ಹೃದಯ ಶ್ರೀಮಂತ. ಅವರ ನಗುವಿನಲ್ಲಿದ್ದ ಶ್ರೀಮಂತಿಕೆ ನಾವು ಎಲ್ಲಿ ಹುಡುಕೋದು ? ಅವರು ನಗುವಿನ ಒಡೆಯರಾಗಿದ್ದರು.
ಪುನೀತ್ ರಾಜ್ ಕುಮಾರ್ ಅವರಿಗೆ ಸಿಕ್ಕಿರುವುದು ಕರ್ನಾಟಕ ರತ್ನ, ಆದರೆ, ಯಾರೂ ತಪ್ಪಾಗಿ ಭಾವಿಸಬಾರದು. ನನ್ನ ಪ್ರಕಾರ ಕರ್ನಾಟಕ ರತ್ನದ ಅರ್ಥನೇ ಪುನೀತ್ ರಾಜ್ ಕುಮಾರ್. ನಾನು ಇಲ್ಲಿಗೆ ಬಂದಿದ್ದು, ಹೆಮ್ಮೆಯ ಗೆಳೆಯನಾಗಿ. ಅವನಿಗಾಗಿ ನಾನು ಇಲ್ಲಿ ನಿಂತಿದ್ದೇನೆ. ಈ ಗೆಳೆತನ ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತದೆ ಎಂದು ಜೂನಿಯರ್ ಎನ್ ಟಿ ಆರ್ ಹೇಳಿದರು.
Karnataka Ratna: Appu is the prince who won the state with his smile and his personality – NTR