ರಾಮ್ ಚರಣ್- ಪ್ರಭಾಸ್ ಸಿನಿಮಾದಲ್ಲಿ ಕಿಚ್ಚ : ಆರಡಿ ಕಟೌಟ್ ಗೆ ಯಾಕಿಷ್ಟು ಡಿಮ್ಯಾಂಡು..?
ಬೆಂಗಳೂರು : ಚಂದನವನದ ಬಾದ್ ಶಾ ಕಿಚ್ಚ ಸುದೀಪ್ ಮತ್ತೆ ಪರಭಾಷೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಇಂಡಿಯನ್ ಸಿನಿಮಾ ಇಂಡಸ್ಟ್ರೀಯಲ್ಲಿ ಯಾರಾದ್ರೂ ಪ್ಯಾನ್ ಇಂಡಿಯಾ ಸಿನಿಮಾ ಪ್ಲಾನ್ ಮಾಡುತ್ತಿದ್ದರೇ ಅಲ್ಲಿ ಸುದೀಪ್ ಹೆಸರು ಬಂದೇ ಬರುತ್ತೆ.
ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅನ್ನೋ ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಸುದೀಪ್ ಇದ್ದರೇ ಚಂದ ಅಂತಾ ಅವರಿಗಾಗಿ ಒಂದು ಪಾತ್ರವನ್ನ ಸೃಷ್ಠಿ ಮಾಡುತ್ತಾರೆ.
ಇದಕ್ಕೆ ತಾಜಾ ಉದಾಹರಣೆ ಪ್ರಭಾಸ್ ಅಭಿನಯದ ಆದಿಪುರಷ್ ಸಿನಿಮಾ ತಂಡ ಸುದೀಪ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿರೋದು.
ಈ ಮಧ್ಯೆ ಮತ್ತೊಂದು ಸುದ್ದಿಯೊಂದು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದು, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಶಂಕರ್ ನಿರ್ದೇಶನದ ಸಿನಿಮಾದಲ್ಲೂ ಕೂಡ ಸುದೀಪ್ ಗಾಗಿ ಒಂದು ವಿಶೇಷ ಪಾತ್ರ ಸೃಷ್ಠಿ ಮಾಡಲಾಗಿದೆಯಂತೆ.
ಇದೇ ಕಾರಣಕ್ಕಾಗಿ ಶಂಕರ್ ಅಂಡ್ ಟೀಂ ಸುದೀಪ್ ಅವರನ್ನ ಭೇಟಿ ಮಾಡಿ ಕಥೆ ಹೇಳಿದೆಯಂತೆ. ಇದಕ್ಕೆ ಸುದೀಪ್ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲವಾದ್ರೂ ಕಿಚ್ಚ ಈ ಸಿನಿಮಾದಲ್ಲಿ ನಟಿಸೋದು ಪಕ್ಕಾ ಅಂತಾ ಹೇಳಲಾಗುತ್ತಿದೆ.
ನಮ್ಮ ಆರಡಿ ಕಟೌಟ್ ಗೆ ಯಾಕಿಷ್ಟು ಡಿಮ್ಯಾಂಡು..?
ಹೌದು..! ಸುದೀಪ್ ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋಗಳಲ್ಲಿ ಒಬ್ಬರು. ತಮ್ಮದೇ ಯಾದ ಮಾಸ್ ಕ್ಲಾಸ್ ಅಭಿಮಾನಿಗಳನ್ನು ಹೊಂದಿರುವ ನಟ. ಕೇವಲ ಸುದೀಪ್ ನಿಂದ ಕಿಚ್ಚ ಸುದೀಪ್ ಆಗಿ, ಅಭಿನಯ ಚಕ್ರವರ್ತಿಯಾಗಿ, ಇದೀಗ ಸ್ಯಾಂಡಲ್ ವುಡ್ ಬಾದ್ ಶಾ ಅಂತ ಕರೆಸಿಕೊಳ್ಳುತ್ತಿರುವ ಕಿಚ್ಚನ ಅಭಿನಯದಲ್ಲಿ ಸಾಕಷ್ಟು ಪ್ರಬುದ್ಧತೆ ಪಡೆದುಕೊಂಡಿದ್ದಾರೆ.
ಅವರ ಅಭಿನಯದಲ್ಲಿ ಒಂದು ಮ್ಯಾಜಿಕ್ ಇರುತ್ತೆ. ಅದು ಎಂಥವರನ್ನಾದರೂ ಕೂಡ ಮೂಕವಿಸ್ಮಯಗೊಳಿಸುತ್ತೆ. ಮತ್ತು ಅವರ ಸ್ಟೈಲ್ ಈಗಿನ ಯುವ ಪೀಳಿಗೆಗೆ ಇಷ್ಟವಾಗಿತ್ತೆ. ಇದೇ ಕಾರಣಕ್ಕಾಗಿ ಕಿಚ್ಚ ಇದೀಗ ಎಲ್ಲರ ಮನೆ ಮಾತಾಗಿರೋದು.
ಸುದೀಪ್ ಈಗ ಪ್ಯಾನ್ ಇಂಡಿಯಾ ಕಟೌಟ್..! ನಿಜ ಕಿಚ್ಚ ಸುದೀಪ್ ಸದ್ಯ ಯುನಿವರ್ಸಲ್ ಸ್ಟಾರ್ ದೇಶ ವಿದೇಶದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ಭಾರತದ ಮೂಲೆ ಮೂಲೆಯಲ್ಲೂ ಕಿಚ್ಚನ ಅಭಿಮಾನಿಗಳಿದ್ದಾರೆ.
ರಾಜಮೌಳಿಯ ಈಗ ಸಿನಿಮಾ ಭಾರತದ ಎಲ್ಲಾ ಕಡೆ ತೆರೆಕಂಡಿತ್ತು. ಇದಾದ ಬಳಿಕ ಬಾಹುಬಲಿ, ದಬಾಂಗ್ 3 ಯಲ್ಲಿ ಅವರು ನಟಿಸಿ ಹೆಸರು ಮಾಡಿದ್ದರು. ಈಗ ಆದಿಪುರುಷ್, ರಾಮಚರಣ್ ರ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ.
ಈ ಸಮಯದಲ್ಲಿ ಎಲ್ಲ ಪ್ರೇಕ್ಷಕರಿಗೂ ಗೊತ್ತಿರುವ ಸುದೀಪ್ ರಂತಹ ಕಲಾವಿದ ಇದ್ದರೇ ಚಿತ್ರಕ್ಕೆ ಸಹಾಯವಾಗುತ್ತದೆ ಎಂಬುವುದು ಸ್ಟಾರ್ ಡೈರೆಕ್ಟರ್ ಗಳ ನಂಬಿಕೆ. ಇದೇ ಕಾರಣಕ್ಕಾಗಿ ಸುದೀಪ್ ರತ್ತ ಬೇರೆ ಬೇರೆ ಚಿತ್ರರಂಗದವರು ಬರುತ್ತಾರೆ. ಇದು ಕನ್ನಡಿಗರ ಹೆಮ್ಮೆ ಕೂಡ ಹೌದು..!