ಹಾಲಿವುಡ್ ನಟಿಯಿಂದ ಹಿಂದೂ ಧರ್ಮಕ್ಕೆ ಅವಮಾನ – ನೆಟ್ಟಿಗರು ಗರಂ
ವಿವಾದಕ್ಕೆ ಕಾರಣವಾಯ್ತು ನಟಿಯ ವಜ್ರದ ಓಲೆಗಳು…!
‘ಸೆಕ್ಸ್ ಟೇಪ್’ ಹೆಸರಿನ ನೀಲಿ ಚಿತ್ರದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಬಂದ ಕಿಮ್ ಕರ್ದಾಶಿಯನ್, ಈಗ ವಿಶ್ವದ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ‘ಕೀಪಿಂಗ್ ಅಪ್ ವಿತ್ ಕರ್ದಾಶಿಯನ್ಸ್’ ಹೆಸರಿನ ರಿಯಾಲಿಟಿ ಶೋ ಮೂಲಕ ಭಾರಿ ಯಶಸ್ಸು ಗಳಿಸಿದ ಕಿಮ್ ಬಳಿಕ ನಟಿಯಾಗಿ, ನಿರ್ಮಾಪಕಿಯಾಗಿ, ನಿರೂಪಕಿಯಾಗಿ ಸಾಕಷ್ಟು ಪ್ರಸಿದ್ಧಿ ಪಡೆದರು.. ಆಗಾಗ ವಿವಾದಗಳಿಂದಲೂ ಸುದ್ದಿಯಲ್ಲಿರುತ್ತಾರೆ.
ಆದ್ರೆ ಇದೀಗ ಈಕೆ ವಿರುದ್ಧ ನೆಟ್ಟಿಗರು , ಅದ್ರಲ್ಲೂ ಭಾರತದವರು, ಹಿಂದೂ ಧರ್ಮದವರು ತಿರುಗಿಬಿದ್ದಿದ್ದಾರೆ. ಈಕೆ ಹಿಂದೂ ಧರ್ಮಕ್ಕೆ ಅವಮಾನಿಸಿರುವುದಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ.. ಅಂದ್ಹಾಗೆ ಈ ನಟಿ ಇತ್ತೀಚೆಗೆ ಮಾಡಿಸಿರುವ ಫೋಟೋಶೂಟ್ ವಿರುದ್ಧ ನೆಟ್ಟಿಗರು ಕೆಂಡಕಾರುತ್ತಿದ್ದಾರೆ. ಕಿಮ್ ಕರ್ದಾಶಿಯನ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಿವಿಗೆ ಹಾಕಿಕೊಂಡಿರುವ ವಜ್ರದ ಓಲೆಗಳು ವಿವಾದಕ್ಕೆ ಕಾರಣವಾಗಿದೆ..
ಅಷ್ಟಕ್ಕೂ ಆ ಓಲೆಗಳಲ್ಲಿ ಅಂತಹದ್ದೇನಿದೆ…
ಕಿಮ್ ಧರಿಸಿರುವ ಓಲೆಗಳು ಹಿಂದು ಧಾರ್ಮಿಕ ಚಿಹ್ನೆ ಓಂ ಆಕಾರದಲ್ಲಿವೆ. ಓಂ ಆಕಾರದ ಓಲೆ ಧರಿಸಿರುವುದಕ್ಕೆ ನೆಟ್ಟಿಗರು ನಟಿ ವಿರುದ್ಧ ಆಕ್ರೋಶ ಹೊರರಹಾಕ್ತಿದ್ದಾರೆ. ಹಿಂದು ಧರ್ಮಕ್ಕೆ ಅಪಮಾನ ಎಸಗಿದ್ದೀರಿ. ನಮ್ಮ ಧರ್ಮವನ್ನು ಲಘುವಾಗಿ ಪ್ರೆಸೆಂಟ್ ಮಾಡುತ್ತಿದ್ದೀರಿ. ನಮ್ಮ ಧರ್ಮವನ್ನು ಅದರ ಪಾಡಿಗೆ ಬಿಟ್ಟುಬಿಡಿ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ಸಂಘಟನೆಯ ಮುಖಂಡ ರಾಜನ್ ಜೆದ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಓಂ ಸಂಜ್ಞೆಯು ಹಿಂದು ಧರ್ಮದ ಪವಿತ್ರ ಸಂಕೇತ. ಇದನ್ನು ಫ್ಯಾಷನ್ ಉದ್ಧೇಶಕ್ಕೆ ಬಳಸಿರುವುದು ತಪ್ಪು. ಅಷ್ಟೇ ಅಲ್ಲದೇ ಹಿಂದುಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ಕೊಡುತ್ತಾರೆ. ಆದರೆ ಅವರ ಪವಿತ್ರವಾದ ಧಾರ್ಮಿಕ ನಂಬಿಕೆಯನ್ನು ಅಪಮಾನಗೊಳಿಸುವ ಕ್ಷುಲ್ಲಕ ಯತ್ನಗಳನ್ನು ಅವರನ್ನು ಘಾಸಿಗೀಡು ಮಾಡುತ್ತದೆ ಎಂದಿದ್ದಾರೆ. ಜೊತೆಗೆ ಈ ಕೂಡಲೇ ನೀವು ಅಪ್ ಲೋಡ್ ಮಾಡಿರುವ ಮೂರು ಚಿತ್ರಗಳನ್ನು ತೆಗೆಯಿರಿ ಎಂದಿದ್ದಾರೆ.
ಈ ಹಿಂದೆ ಮಾಡೆಲ್ , ನಟಟಿ ರಿಹಾನಾ ಸಹ ಇಂಹದ್ದೇ ಕೆಲಸ ಮಾಡಿ ನೆಟ್ಟಿಗರಿಂದ ಉಗಿಸಿಕೊಂಡಿದ್ದರು. ಬೆತ್ತಲೇಯಾಗಿ ಗಣೇಶನ ಡಾಲರ್ ನೇತುಹಾಕಿಕೊಂಡು ಫೋಟೋ ಸೂಟ್ ಮಾಡಿಸಿ ವಿವಾದಕ್ಕೆ ಗುರಿಯಾಗಿದ್ದರು..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.