ಕೊಡಗಿನಲ್ಲಿ ಆಲಿಕಲ್ಲು ಮಳೆ : ಜನರು ಫುಲ್ ಖುಷ್, ಆತಂಕದಲ್ಲಿ ಕೃಷಿಕರು..!
ಕೊಡಗು : ಕೊಡಗಿನಲ್ಲಿ ಧಿಡೀರನೆ ಆಲಿಕಲ್ಲು ಮಳೆಯಾಗಿದ್ದು, ಸುತ್ತಲು ಮಂಜು ಸುರಿದ ಸುಂದರವಾದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರನ್ನ ಪುಳಕಿತಗೊಳಿಸಿದೆ. ಅಂಕನಳ್ಳಿ, ನಿಡ್ತ ಸುತ್ತಮುತ್ತ ಭಾರೀ ಮಳೆಯಾಗಿದೆ. ಭಾರಿ ಪ್ರಮಾಣದಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಒಂದೆಡೆ ಜನರು ಫುಲ್ ಖುಷ್ ಆಗಿ ಆಲಿಕಲ್ಲುಗಳನ್ನ ಸಂಗ್ರಹ ಮಾಡ್ತರಿವ ದೃಶ್ಯ ಕಂಡುಬಂದ್ರೆ ಮತ್ತೊಂದೆಡೆ ಕಾಫಿ, ಹಸಿಮೆಣಸಿನ ಬೆಳೆಗೆ ಹಾನಿ ಆಲಿಕಲ್ಲು ಮಳೆಯಿಂದಾಗಿ ಹಾನಿಯುಂಟಾಗಿ ರೈತರಿಗೆ ನಷ್ಟ ಆಗಿದೆ.
Video – ಮಂಗಳನ ಅಂಗಳಕ್ಕಿಳಿದ ರೋವರ್ : ಯಶಸ್ಸಿನ ಹಿಂದಿದೆ ಭಾರತೀಯರದ್ದೇ ಮಹತ್ವದ ಪಾಲು..!
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಜಿಲ್ಲೆಯಾದ್ಯಂತ ಬೆಳಗಿನಿಂದಲೂ ಶೀತಗಾಳಿ,ಮೋಡಕವಿದ ವಾತಾವರಣ ನಿರ್ಮೋಣವಾಗಿದ್ದು ಕೆಲವೆಡೆ ತುಂತುರು ಮಳೆ ಉಂಟಾಗಿದೆ. ಸೋಮವಾರಪೇಟೆ ಭಾಗದಲ್ಲಿ ಮಳೆಯ ಜೊತೆ ಆಲಿಕಲ್ಲು ಮಳೆ ಬಿದ್ದು,ರೈತರ ಜಮೀನುಗಳು ಬೃಹತ್ ಗಾತ್ರದ ಮಂಜುಗೆಡ್ಡೆಯಿಂದ ಕೂಡಿವೆ, ಕಾಫಿ ಶುಂಠಿ,ಮೆಣಸ್ಸು ಹಾನಿಯಾಗಿದ್ದು,ರೈತರ ಆತಂಕ್ಕೆ ಕಾರಣವಾಗಿದೆ.